ಕೊಪ್ಪಳ: ಚಿರತೆಯೊಂದು ಕುರಿಗಳ ಹಟ್ಟಿಗೆ ನುಗ್ಗಿ ತಿಂದು ತೇಗಿ ಅಲ್ಲಿಯೇ ನಿದ್ದೆಗೆ ಜಾರಿರುವ ಘಟನೆ ನಡೆದಿದೆ.
ಹಟ್ಟಿಯಲ್ಲಿ ಕುರಿಗಳನ್ನು ತಿಂದು ಚಿರತೆ ಅಲ್ಲಿಯೇ ನಿದ್ದೆಗೆ ಜಾರಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಗಂಗಾವತಿ ತಾಲೂಕಿನ ಬಸವನ ದುರ್ಗ ಕ್ಯಾಂಪ್ ನ ಗುಡ್ಡದ ಮೇಲೆ ಕುರಿಗಾಯಿಗಳು ಹಟ್ಟಿಯಲ್ಲಿ ಕುರಿಗಳನ್ನು ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ರಾತ್ರಿ ವೇಳೆ ಚಿರತೆ ನುಗ್ಗಿದೆ. ಆ ವೇಳೆ ಅಲ್ಲಿದ್ದ ಎರಡು ಕುರಿಗಳನ್ನು ತಿಂದು ಹಟ್ಟಿಯಲ್ಲಿಯೇ ಮಲಗಿದೆ. ಈ ಕುರಿತ ವಿಡಿಯೋವನ್ನು ಕುರಿಗಾಹಿ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ರಮೇಶ ಕುರುಬರ ಎಂಬುವವರ ಕುರಿಗಳನ್ನೇ ಚಿರತೆ ತಿಂದು ತೇಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಟ್ಟಿಗೆ ಆಗಮಿಸುತ್ತಿದ್ದಂತೆಯೇ ಚಿರತೆ ತಪ್ಪಿಸಿಕೊಂಡು ಗುಡ್ಡದ ಕಡೆ ಓಡಿದೆ. ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.