ಹುಬ್ಬಳ್ಳಿ: ನಟ ದರ್ಶನ್ (Darshan) ವಿಚಾರದಲ್ಲಿ ನನ್ನ ಯಾವುದೇ ಹಸ್ತಕ್ಷೇಪ ಇಲ್ಲವೇ ಇಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಪರಿಣಾಮ ಬೀರಿಲ್ಲ. ನಾನು ಬಳ್ಳಾರಿ (Ballari) ಜಿಲ್ಲೆಯ ಉಸ್ತುವಾರಿ ಸಚಿವ ಅಷ್ಟೇ. ನಾನು ಡಿಜಿ ಅಲ್ಲಾ, ಹೋಮ್ ಮಿನಿಸ್ಟರ್ ಅಲ್ಲಾ. ಐ ಆಮ್ ನಥಿಂಗ್. ನಾನು ಹೇಗೆ ಸಹಾಯ ಮಾಡಲಿ ಎಂದು ಪ್ರಶ್ನೆ ಮಾಡಿದ್ದಾರೆ,
ನಾನು ಒಂದು ವೇಳೆ ಹೋಮ್ ಮಿನಿಸ್ಟರ್ ಅಥವಾ ಡಿಜಿ ಆಗಿದ್ದರೆ ದರ್ಶನ್ ನನ್ನ ಸ್ನೇಹಿತ ಅಂತ ಸಹಾಯ ಮಾಡಬಹುದಿತ್ತು. ನಟ ದರ್ಶನ್ ನನ್ನ ಆತ್ಮೀಯ ಇರಬಹುದು. ಆದರೆ ನಾನು ಅವರ ವಿಚಾರದಲ್ಲಿ ಯಾವುದೇ ಪ್ರಭಾವ ಬೀರಿಲ್ಲ ಎಂದು ಜಮೀರ್ ಹೇಳಿದ್ದಾರೆ.