ಕಲಬುರಗಿ: ಸೆಂಟ್ರಲ್ ಜೈಲಿನಲ್ಲಿ (Kalaburagi Jail) ಹನಿಟ್ರ್ಯಾಪ್ (Honey Trap) ಹಾಗೂ ಬ್ಲ್ಯಾಕ್ ಮೇಲ್ ನಡೆದಿರುವ ಆರೋಪ ಕೇಳಿ ಬಂದಿದ್ದು, ಕಾರಾಗೃಹ ಎಡಿಜಿಪಿ ಕಚೇರಿಯ ಎಸ್ಪಿ ಯಶೋಧಾ ಅವರು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಲ್ಲೇಶ್ವರಂ ಸ್ಫೋಟ ಪ್ರಕರಣದ (Malleswaram Blast Case) ಆರೋಪಿ ಜುಲ್ಫೀಕರ್ ಹಾಗೂ ಆತನ ಗ್ಯಾಂಗ್ ಬಗ್ಗೆ ಈ ಆರೋಪ ಕೇಳಿ ಬಂದಿತ್ತು. ಹೀಗಾಗಿ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.
ಕೈದಿ ಸಾಗರ್ ಎಂಬಾತನನ್ನು ವಿಡಿಯೋ ಕರೆ ಮೂಲಕ ಹನಿಟ್ರ್ಯಾಪ್ ಜಾಲಕ್ಕೆ ದೂಡಲಾಗಿತ್ತು. ಇದನ್ನು ಮುಚ್ಚಿ ಹಾಕಲು 50,000 ರೂ. ನೀಡುವಂತೆ ಆತನಿಗೆ ಬ್ಲ್ಯಾಕ್ಮೇಲ್ ಮಾಡಲಾಗಿತ್ತು. ಈ ವಿಚಾರವನ್ನು ಸಾಗರ್ ಆತನ ಸಹೋದರನೊಂದಿಗೆ ಹೇಳಿಕೊಂಡಿದ್ದ. ಆ ನಂತರ ಈ ಪ್ರಕರಣ ಬೆಳಕಿಗೆ ಬಂದಿತ್ತು.