ಇತಿಹಾಸ ಮತ್ತು ಪುರಾಣಗಳಲ್ಲಿ ಉಲ್ಲೇಖಿತವಾದ ಒಂದು ಅದ್ಭುತ ಕಾಲವೆಂದರೆ ಅದು ರಾಹುಕಾಲ (Rahukala) . ರಾಹುಕಾಲವು ಯಾವುದೇ ಶುಭಕಾರ್ಯಗಳಿಗೆ ಅಶುಭ ಎಂದು ಸಾಮಾನ್ಯವಾಗಿ ಹೇಳಲಾಗಿದ್ದರೂ, ಸಂಕಲ್ಪಗಳು, ಕಾಮನೆಗಳು ಮತ್ತು ಆಸೆ-ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಇದು ಅತ್ಯಂತ ಪ್ರಶಸ್ತವಾದ ಕಾಲವಾಗಿದೆ.
ಆದ್ದರಿಂದ ರಾಹುಕಾಲದಲ್ಲಿ ದುರ್ಗಾ ಪೂಜೆ ಮಾಡುವುದರಿಂದ ಏನು ಪ್ರಯೋಜನ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಗುರೂಜಿಯವರು ಹೇಳವಂತೆ, ರಾಹುವಿಗೂ ಮತ್ತು ದುರ್ಗಾ ದೇವಿಗೆ ಏನು ಸಂಬಂಧ ಎಂದು ಅನೇಕರು ಕೇಳಬಹುದು. ವಾಸ್ತವವಾಗಿ, ರಾಹು ಗ್ರಹದ ಅಧಿದೇವತೆ ಸಾಕ್ಷಾತ್ ದುರ್ಗಾ ದೇವಿ. ರಾಹುವಿನ ದೇಹದಲ್ಲಿ ವಿಷವಿದ್ದರೂ, ಅದರ ಬಾಲದಲ್ಲಿ ಅಮೃತವಿರುತ್ತದೆ ಎಂಬ ನಂಬಿಕೆ ಇದೆ. ಈ ವಿಶಿಷ್ಟ ಗುಣವು ದುರ್ಗಾ ದೇವಿಯ ಶಕ್ತಿಯನ್ನು ಪ್ರತಿನಿಧಿಸುತ್ತದೆ.
ರಾಹು ದೋಷದಿಂದ ಬಳಲುತ್ತಿರುವವರು ಅಥವಾ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಬಯಸುವವರು ಸಾಮಾನ್ಯವಾಗಿ ಮಂಗಳವಾರ ಮತ್ತು ಶುಕ್ರವಾರದ ರಾಹುಕಾಲದಲ್ಲಿ ನಿಂಬೆಹಣ್ಣಿನ ದೀಪಗಳನ್ನು ಹಚ್ಚುವ ಪದ್ಧತಿಯನ್ನು ಅನುಸರಿಸುತ್ತಾರೆ. ಈ ಪೂಜೆಯು ನಿರ್ದಿಷ್ಟವಾಗಿ ಸಂಕಲ್ಪಗಳ ನೆರವೇರಿಕೆ, ವಿವಾಹದ ಸಿದ್ಧಿ, ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಮಾಡಲಾಗುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.
ಮಂಗಳವಾರದಂದು, ವಿಶೇಷವಾಗಿ ಮಧ್ಯಾಹ್ನ 3:00 ರಿಂದ 4:30 ರ ನಡುವಿನ ರಾಹುಕಾಲದಲ್ಲಿ ದುರ್ಗಾ ದೇವಿಯನ್ನು ಪೂಜಿಸುವುದು ಹೆಚ್ಚು ಫಲಪ್ರದವಾಗಿದೆ. ಈ ಸಮಯದಲ್ಲಿ ನಿಂಬೆಹಣ್ಣಿನ ದೀಪಗಳನ್ನು ಹಚ್ಚಿ, ದುರ್ಗಾ ಸ್ತೋತ್ರ, ದುರ್ಗಾ ಸಪ್ತಶತಿ, ಅಥವಾ ದುರ್ಗಾ ಅಷ್ಟೋತ್ತರವನ್ನು ಪಠಿಸಬಹುದು. ದೀಪಗಳನ್ನು ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಸ್ಥಾಪಿಸಿ ಪೂಜಿಸಬಹುದು. ದುರ್ಗಾ ದೇವಿ ರಾಹು ಗ್ರಹದ ಅಧಿದೇವತೆಯಾಗಿರುವುದರಿಂದ, ಈ ಪೂಜೆಯು ಬೇಗನೆ ಸಂಕಲ್ಪಗಳನ್ನು ಈಡೇರಿಸುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ, ದುರ್ಗಾ ದೇವಿ ಸಾಕ್ಷಾತ್ ಶ್ರೀಕೃಷ್ಣನ ಸಹೋದರಿ ಎಂಬ ಪ್ರತೀತಿಯೂ ಇದೆ. ವಿಷ್ಣುವಿನ ಅವತಾರಗಳಲ್ಲಿ ಅಷ್ಟಮಿ ಮತ್ತು ನವಮಿ ತಿಥಿಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ.
ಇದನ್ನೂ ಓದಿ: ಬಡತನ ನಿವಾರಣೆಗೆ ಈ 2 ಮಂತ್ರ ಪಠಿಸಿ
ಮಂಗಳವಾರದ ರಾಹುಕಾಲದಲ್ಲಿ ಸತತ ಒಂಬತ್ತು ಮಂಗಳವಾರ ನಿಂಬೆಹಣ್ಣಿನ ದೀಪಗಳನ್ನು ಹಚ್ಚಿ ಪ್ರಾರ್ಥನೆ ಮಾಡಿಕೊಂಡರೆ, ಸಾಲ ನಿವಾರಣೆ, ಅನಾರೋಗ್ಯ ದೂರವಾಗುವುದು ಮತ್ತು ಎಲ್ಲಾ ಸಂಕಲ್ಪಗಳು ಈಡೇರುತ್ತವೆ. ಈ ಒಂಬತ್ತು ಮಂಗಳವಾರಗಳಲ್ಲಿ ಐದು ಬತ್ತಿಗಳನ್ನು ಬಳಸಿ ನಿಂಬೆಹಣ್ಣಿನ ದೀಪಗಳನ್ನು ಹಚ್ಚುವುದು ಬಹಳ ಶುಭಕರ. ದೇವಿಯ ವಿಗ್ರಹದ ಮುಂದೆ ದೀಪಗಳನ್ನು ಇಟ್ಟು, ದೇವಿ ನೋಡುವಂತೆ ಹಚ್ಚಬೇಕು. ದೀಪಕ್ಕೆ ಸ್ವಲ್ಪ ಅರಿಶಿನ ಮತ್ತು ಕುಂಕುಮವನ್ನು ಹಾಕಿ, ಅರಿಶಿನದ ಹೂವುಗಳಾದ ದಾಸವಾಳ ಅಥವಾ ಸೇವಂತಿಗೆಯನ್ನು ಅರ್ಪಿಸುವುದರಿಂದ ಇನ್ನಷ್ಟು ಹೆಚ್ಚು ಫಲ ಸಿಗುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.
ದುರ್ಗಾ ದೇವಿಯ ಪೂಜೆಯನ್ನು ಸಾಮಾನ್ಯವಾಗಿ ಅಮಾವಾಸ್ಯೆ, ಹುಣ್ಣಿಮೆ, ಮಂಗಳವಾರ, ಶುಕ್ರವಾರ ಮತ್ತು ಭಾನುವಾರಗಳಂದು ಮಾಡಲಾಗುತ್ತದೆ. ಆದರೆ ಮಂಗಳವಾರದಂದು ಅಮಾವಾಸ್ಯೆ ಬಂದರೆ, ಅದು ಅತ್ಯಂತ ಶುಭದಾಯಕವೆಂದು ಪರಿಗಣಿಸಲಾಗುತ್ತದೆ. ಮಂಗಳವಾರದ ರಾಹುಕಾಲದಲ್ಲಿ ದುರ್ಗಾ ದೇವಿಗೆ ನಿಂಬೆಹಣ್ಣಿನ ದೀಪ ಹಚ್ಚುವುದರಿಂದ ಎಲ್ಲಾ ಸಂಕಲ್ಪಗಳು ನೆರವೇರುತ್ತವೆ. ಸತತ ಒಂಬತ್ತು ಮಂಗಳವಾರ ಈ ಪೂಜೆಯನ್ನು ಮಾಡುವುದರಿಂದ ಅತ್ಯಂತ ಶುಭವಾಗುತ್ತದೆ ಎಂದು ಹೇಳಲಾಗುತ್ತದೆ.
ಲೇಖಕರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಮತ್ತಷ್ಟು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







