ADVERTISEMENT
Monday, April 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ದೇಶ - ವಿದೇಶ

ಮೋದಿ ಅವರಿಗೆ 10 ರೂಪಾಯಿಯ ಮಂಡಕ್ಕಿ ತಿನ್ನಿಸಿದ ಬಡ ವ್ಯಾಪಾರಿಗೆ ಈಗ ಕಾಡುತ್ತಿದೆ ಒಂದು ದೊಡ್ಡ ಕೊರಗು

Shwetha by Shwetha
April 20, 2026
in ದೇಶ - ವಿದೇಶ, National, Newsbeat
Share on FacebookShare on TwitterShare on WhatsappShare on Telegram

ಪಶ್ಚಿಮ ಬಂಗಾಳದ ಝಾರ್‌ಗ್ರಾಮ್ ನಗರದಲ್ಲಿ ಮಂಡಕ್ಕಿ ಮಾರಾಟ ಮಾಡುವ ವಿಕ್ರಮ್ ಎಂಬ ವ್ಯಕ್ತಿಗೆ ಪ್ರಧಾನಿ ಮೋದಿ ಅವರು ತಮ್ಮ ಅಂಗಡಿಗೆ ಬರುತ್ತಾರೆ ಎಂಬುದು ಕನಸಿನ ಮಾತಾಗಿತ್ತು. ದೇಶದ ಪ್ರಧಾನ ಮಂತ್ರಿಗಳು ತಮ್ಮ ಬಳಿ ಬಂದು 10 ರೂಪಾಯಿ ನೀಡಿ ಮಂಡಕ್ಕಿ ಸವಿದ ಘಟನೆ ವಿಕ್ರಮ್ ಅವರಿಗೆ ಅಪಾರ ಸಂತೋಷ ತಂದಿದೆ. ಈಗ ಈ ವಿಡಿಯೋ ಇಂಟರ್ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿದೆ.

ಪ್ರಧಾನಿ ಮೋದಿ ಅವರು ವಿಕ್ರಮ್ ಜೊತೆ ಸುಮಾರು 10 ನಿಮಿಷಗಳ ಕಾಲ ಆಪ್ತವಾಗಿ ಮಾತನಾಡಿದ್ದಾರೆ. ನೀವು ಈರುಳ್ಳಿ ತಿನ್ನುತ್ತೀರಾ ಎಂದು ವಿಕ್ರಮ್ ಕೇಳಿದಾಗ ಪ್ರಧಾನಿಗಳು ಸಾಮಾನ್ಯ ಗ್ರಾಹಕರಂತೆ ಉತ್ತರಿಸಿದ್ದಾರೆ. ವಿಕ್ರಮ್ ಮೂಲತಃ ಬಿಹಾರದ ಗಯಾ ಮೂಲದವರಾಗಿದ್ದು, ಬಡತನದ ಕಾರಣದಿಂದ ಕೇವಲ 9ನೇ ತರಗತಿಯವರೆಗೆ ಮಾತ್ರ ಓದಲು ಸಾಧ್ಯವಾಯಿತು ಎಂದು ಪ್ರಧಾನಿ ಬಳಿ ನೋವು ಹಂಚಿಕೊಂಡಿದ್ದಾರೆ. ದಿನಕ್ಕೆ ಸಾವಿರದಿಂದ ಸಾವಿರದ ಇನ್ನೂರು ರೂಪಾಯಿ ವ್ಯಾಪಾರ ಮಾಡುವುದಾಗಿ ಅವರು ಮೋದಿ ಅವರಿಗೆ ತಿಳಿಸಿದ್ದಾರೆ. ಮಂಡಕ್ಕಿ ತಿಂದ ಮೇಲೆ ಮೋದಿ ಅವರು 10 ರೂಪಾಯಿ ನೀಡಿದಾಗ ವಿಕ್ರಮ್ ಹಣ ಬೇಡ ಎಂದರೂ ಪ್ರಧಾನಿಗಳು ಒತ್ತಾಯ ಮಾಡಿ ಹಣ ನೀಡಿದ್ದಾರೆ.

Related posts

ಕರಾವಳಿಯಲ್ಲಿ ಬುಲ್ಡೋಜರ್ ರಾಜಕೀಯ: ಖಾಸಗಿ ಜಾಗಕ್ಕೆ ನುಗ್ಗಿ ಕಟ್ಟಡ ನೆಲಸಮಗೊಳಿಸಿದ ಶಾಸಕ ಅಶೋಕ್ ರೈ

ಕರಾವಳಿಯಲ್ಲಿ ಬುಲ್ಡೋಜರ್ ರಾಜಕೀಯ: ಖಾಸಗಿ ಜಾಗಕ್ಕೆ ನುಗ್ಗಿ ಕಟ್ಟಡ ನೆಲಸಮಗೊಳಿಸಿದ ಶಾಸಕ ಅಶೋಕ್ ರೈ

April 20, 2026
ಸುಡುವ ಬಿಸಿಲಿಗೆ ಹೊರಹೋಗುವ ಮುನ್ನ ಎಚ್ಚರ ಈ ಐದು ವಸ್ತುಗಳು ನಿಮ್ಮ ಬ್ಯಾಗಿನಲ್ಲಿರಲಿ

ಸುಡುವ ಬಿಸಿಲಿಗೆ ಹೊರಹೋಗುವ ಮುನ್ನ ಎಚ್ಚರ ಈ ಐದು ವಸ್ತುಗಳು ನಿಮ್ಮ ಬ್ಯಾಗಿನಲ್ಲಿರಲಿ

April 20, 2026

ಆದರೆ ಪ್ರಧಾನಿಗಳು ಹೋದ ನಂತರ ವಿಕ್ರಮ್ ಅವರಿಗೆ ಒಂದು ವಿಷಯದ ಬಗ್ಗೆ ತುಂಬಾ ಬೇಸರವಾಗಿದೆ. ಮಾಧ್ಯಮಗಳ ಮುಂದೆ ಮಾತನಾಡಿದ ಅವರು ನಾನು ಒಂದು ದೊಡ್ಡ ತಪ್ಪು ಮಾಡಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರ ಜೊತೆ ಇಷ್ಟು ಹೊತ್ತು ಮಾತನಾಡಿದರೂ ಅವರಿಂದ ಒಂದು ಸಹಿ ಅಥವಾ ಆಟೋಗ್ರಾಫ್ ಪಡೆಯಲು ಮರೆತು ಹೋದೆ ಎಂಬುದು ಅವರ ಪಶ್ಚಾತ್ತಾಪವಾಗಿದೆ. ನಾವು ಒಂದು ತಪ್ಪು ಕೆಲಸ ಮಾಡಿದೆವು, ಅವರ ಸಹಿಯನ್ನು ಪಡೆಯಬೇಕಿತ್ತು ಎಂದು ವಿಕ್ರಮ್ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮೋದಿ ಅವರು ತಾವು ತಿಂದ ಮಂಡಕ್ಕಿಯನ್ನು ಅಲ್ಲಿ ನೆರೆದಿದ್ದ ಮಹಿಳೆಯರಿಗೂ ಹಂಚಿದ್ದಾರೆ. ಪ್ರಧಾನಿಗಳ ಕೈಯಿಂದ ಮಂಡಕ್ಕಿ ಪಡೆದ ಮಹಿಳೆಯೊಬ್ಬರು ಇದು ನಮಗೆ ದೇವರ ಪ್ರಸಾದದಂತೆ ಎಂದು ಹೇಳಿ ಅದನ್ನು ಭಕ್ತಿಯಿಂದ ತಲೆಗೆ ಹಚ್ಚಿಕೊಂಡು ಸಂಭ್ರಮಿಸಿದ್ದಾರೆ. ಪ್ರಧಾನಿಗಳ ಈ ಸರಳತೆಗೆ ಮತ್ತು ಸಾಮಾನ್ಯ ವ್ಯಾಪಾರಿಯೊಂದಿಗೆ ಅವರು ಬೆರೆತ ರೀತಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ShareTweetSendShare
Join us on:

Related Posts

ಕರಾವಳಿಯಲ್ಲಿ ಬುಲ್ಡೋಜರ್ ರಾಜಕೀಯ: ಖಾಸಗಿ ಜಾಗಕ್ಕೆ ನುಗ್ಗಿ ಕಟ್ಟಡ ನೆಲಸಮಗೊಳಿಸಿದ ಶಾಸಕ ಅಶೋಕ್ ರೈ

ಕರಾವಳಿಯಲ್ಲಿ ಬುಲ್ಡೋಜರ್ ರಾಜಕೀಯ: ಖಾಸಗಿ ಜಾಗಕ್ಕೆ ನುಗ್ಗಿ ಕಟ್ಟಡ ನೆಲಸಮಗೊಳಿಸಿದ ಶಾಸಕ ಅಶೋಕ್ ರೈ

by Shwetha
April 20, 2026
0

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬುಲ್ಡೋಜರ್ ರಾಜಕೀಯ ಸಂಚಲನ ಮೂಡಿಸಿದೆ. ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ ಅವರು ಸ್ವತಃ ತಾವೇ ಜೆಸಿಬಿ ಚಲಾಯಿಸಿ ಖಾಸಗಿ ಕಟ್ಟಡಗಳನ್ನು...

ಸುಡುವ ಬಿಸಿಲಿಗೆ ಹೊರಹೋಗುವ ಮುನ್ನ ಎಚ್ಚರ ಈ ಐದು ವಸ್ತುಗಳು ನಿಮ್ಮ ಬ್ಯಾಗಿನಲ್ಲಿರಲಿ

ಸುಡುವ ಬಿಸಿಲಿಗೆ ಹೊರಹೋಗುವ ಮುನ್ನ ಎಚ್ಚರ ಈ ಐದು ವಸ್ತುಗಳು ನಿಮ್ಮ ಬ್ಯಾಗಿನಲ್ಲಿರಲಿ

by Shwetha
April 20, 2026
0

ರಾಜ್ಯಾದ್ಯಂತ ಬೇಸಿಗೆಯ ತಾಪಮಾನವು ದಿನದಿಂದ ದಿನಕ್ಕೆ ಏರುತ್ತಿದ್ದು ಸಾರ್ವಜನಿಕರು ಬಿಸಿಲಿನ ಬೇಗೆಗೆ ತತ್ತರಿಸುತ್ತಿದ್ದಾರೆ. ಇಂತಹ ಕಠಿಣ ಹವಾಮಾನದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅನಿವಾರ್ಯವಾಗಿದೆ. ಬಿಸಿಲಿನ...

ಶ್ರೀರಾಮನ ಬಗ್ಗೆ ವ್ಯಂಗ್ಯವಾಡಿದ ಆರೋಪ : ಮತಾಂಧ ರಾಜಕಾರಣಕ್ಕೆ ನಾನು ಬಗ್ಗಲ್ಲ ವಿರೋಧಿಗಳ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ

ಶ್ರೀರಾಮನ ಬಗ್ಗೆ ವ್ಯಂಗ್ಯವಾಡಿದ ಆರೋಪ : ಮತಾಂಧ ರಾಜಕಾರಣಕ್ಕೆ ನಾನು ಬಗ್ಗಲ್ಲ ವಿರೋಧಿಗಳ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ

by Shwetha
April 20, 2026
0

ಇತ್ತೀಚೆಗೆ ನಡೆದ ಸಾಹಿತ್ಯೋತ್ಸವವೊಂದರಲ್ಲಿ ಕಲೆ ಮತ್ತು ಅದರ ಸ್ಥಿರತೆ ಎಂಬ ವಿಷಯದ ಕುರಿತು ಮಾತನಾಡಿದ್ದ ನಟ ಪ್ರಕಾಶ್ ರಾಜ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ...

ನ್ಯಾಯಾಂಗಕ್ಕೆ ಕರ್ನಾಟಕ ಸರ್ಕಾರದ ಕೊಡುಗೆ ಕಡಲೆಕಾಯಿಯಷ್ಟು ಮಾತ್ರ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಆಕ್ರೋಶ

ನ್ಯಾಯಾಂಗಕ್ಕೆ ಕರ್ನಾಟಕ ಸರ್ಕಾರದ ಕೊಡುಗೆ ಕಡಲೆಕಾಯಿಯಷ್ಟು ಮಾತ್ರ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಆಕ್ರೋಶ

by Shwetha
April 20, 2026
0

ರಾಜ್ಯ ಸರ್ಕಾರಕ್ಕೆ ನ್ಯಾಯಾಂಗದಿಂದ ಕೋಟಿ ಕೋಟಿ ಆದಾಯ: ಅಭಿವೃದ್ಧಿಗೆ ಹಣ ನೀಡಲು ಮೀನಾಮೇಷ ಎಣಿಸುತ್ತಿರುವ ಅಧಿಕಾರಿಗಳು ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ 22ನೇ ದ್ವೈವಾರ್ಷಿಕ ರಾಜ್ಯಮಟ್ಟದ ನ್ಯಾಯಾಂಗ ಅಧಿಕಾರಿಗಳ...

ದೀದಿ ನಾಡಲ್ಲಿ ನಮೋ ಅಲೆ : ಬಂಗಾಳದಲ್ಲಿ ಇನ್ನು ನಡೆಯಲ್ಲ ದೀದಿ ದರ್ಬಾರ್ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರ ಸುರಕ್ಷತೆ ಗ್ಯಾರಂಟಿ ಎಂದ ಮೋದಿ

ದೀದಿ ನಾಡಲ್ಲಿ ನಮೋ ಅಲೆ : ಬಂಗಾಳದಲ್ಲಿ ಇನ್ನು ನಡೆಯಲ್ಲ ದೀದಿ ದರ್ಬಾರ್ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರ ಸುರಕ್ಷತೆ ಗ್ಯಾರಂಟಿ ಎಂದ ಮೋದಿ

by Shwetha
April 20, 2026
0

ಪಶ್ಚಿಮ ಬಂಗಾಳದ ರಾಜಕೀಯ ರಣಕಣ ಈಗ ಅಕ್ಷರಶಃ ರಂಗೇರಿದೆ. ಚುನಾವಣೆ ಮತದಾನಕ್ಕೆ ಇನ್ನು ಕೇವಲ ನಾಲ್ಕು ದಿನಗಳು ಬಾಕಿ ಇರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬಂಗಾಳದ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram