ADVERTISEMENT
Wednesday, August 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮೇಲುಕೋಟೆ ಕ್ಷೇತ್ರವನ್ನು ‘ಸಾವಯವ ತಾಲೂಕು’ ಗೊಳಿಸುವತ್ತ ಮತ್ತೊಂದು ಹೆಜ್ಜೆ

admin by admin
August 26, 2026
in Newsbeat, State, Uncategorized, ರಾಜಕೀಯ
saakshatv.com/bio-resource-centre-to-be-established-in-bindhalli-melukote

saakshatv.com/bio-resource-centre-to-be-established-in-bindhalli-melukote

Share on FacebookShare on TwitterShare on WhatsappShare on Telegram

ಬಿಂಡಳ್ಳಿಯಲ್ಲಿ ಶೀಘ್ರವೇ ‘ಬಯೋ ರಿಸೋರ್ಸ್ ಸೆಂಟರ್’ ಸ್ಥಾಪನೆ!
ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರಿಂದ ಮಹತ್ವದ ಯೋಜನೆ
ಪುಟ್ಟಣ್ಣಯ್ಯ ಫೌಂಡೇಶನ್‌ ಸಹಯೋಗ
ಮಂಡ್ಯ: ಮೇಲುಕೋಟೆ ಕ್ಷೇತ್ರವನ್ನು ಸಂಪೂರ್ಣ ‘ಸಾವಯವ ತಾಲೂಕು’ ಆಗಿ ಪರಿವರ್ತಿಸುವ ಗುರಿಯೊಂದಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಕೇವಲ ಘೋಷಣೆಗಳಿಗೆ ಸೀಮಿತವಾಗದೆ, ರೈತರಿಗೆ ನೇರವಾಗಿ ನೆರವಾಗುವ ನಿಟ್ಟಿನಲ್ಲಿ ಬನ್ನಂಗಾಡಿ ಪಂಚಾಯಿತಿಯ ಬಿಂಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (PACS) ವತಿಯಿಂದ ಅತ್ಯಾಧುನಿಕ ‘ಬಯೋ ರಿಸೋರ್ಸ್ ಸೆಂಟರ್’ (Bio Resource Centre) ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ತಿಳಿಸಿದ್ದಾರೆ.

ಈ ಯೋಜನೆಗೆ ಸ್ಪಷ್ಟ ರೂಪುರೇಷೆ ನೀಡುವ ಸಲುವಾಗಿ, ಪುಟ್ಟಣ್ಣಯ್ಯ ಫೌಂಡೇಶನ್‌ ಸಹಯೋಗದೊಂದಿಗೆ ವಿಶೇಷ ತಂಡವೊಂದು ತುಮಕೂರಿನ ಪ್ರಸಿದ್ಧ ‘ಗಾಂಧಿ ಸಹಜ ಬೇಸಾಯ ಆಶ್ರಮ’ಕ್ಕೆ ಭೇಟಿ ನೀಡಿತ್ತು. ಅಲ್ಲಿನ ಕಾರ್ಯವೈಖರಿಯನ್ನು ಕೂಲಂಕಷವಾಗಿ ಅಧ್ಯಯನ ನಡೆಸಿದ ಬಳಿಕ, ಅದೇ ಮಾದರಿಯನ್ನು ಈಗ ಬಿಂಡಳ್ಳಿಯಲ್ಲೂ ಅಳವಡಿಸಿಕೊಳ್ಳಲು ಸಿದ್ಧತೆಗಳು ಭರದಿಂದ ಸಾಗಿವೆ ಎಂದಿದ್ದಾರೆ.

Related posts

saakshatv.com/special-atma-scheme-workshop-for-120-krishi-sakhis-in-pandavapura-mandya

120 ಕೃಷಿ ಸಖಿಯರಿಗೆ ‘ಆತ್ಮ’ ಯೋಜನೆಯಡಿ ವಿಶೇಷ ಕಾರ್ಯಾಗಾರ ಯಶಸ್ವಿ

August 26, 2026
Darshan Puttannaiah Mega Health Camp, Nagamangala Dudda Health Camp, Mandya MIMS Kidwai Free Checkup, Melukote Assembly Health Initiatives, Mandya District Administration Health Drive

5 ಸಾವಿರಕ್ಕೂ ಹೆಚ್ಚು ಜನರಿಗೆ ತಪಾಸಣೆ; ಶೀಘ್ರದಲ್ಲೇ ಮೇಲುಕೋಟೆಯ ವಿವಿಧ ಗ್ರಾಮಗಳಿಗೂ ಶಿಬಿರ ವಿಸ್ತರಣೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ

August 26, 2026

ಕೇಂದ್ರದಲ್ಲಿ ರೈತರಿಗೆ ಸಿಗುವ ಸೌಲಭ್ಯಗಳೇನು?
ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಇಚ್ಛಿಸುವ ರೈತರಿಗೆ ಅಗತ್ಯವಿರುವ ಎಲ್ಲಾ ತರಹದ ಸಾವಯವ ಇನ್‌ಪುಟ್‌ಗಳು ಈ ಕೇಂದ್ರದಲ್ಲಿ ಒಂದೇ ಸೂರಿನಡಿ ಲಭ್ಯವಿರಲಿವೆ:
• ಜೀವಾಮೃತ ಮತ್ತು ಘನಜೀವಾಮೃತ
• ವಿವಿಧ ರೀತಿಯ ಕಾಂಪೋಸ್ಟ್ ಗೊಬ್ಬರಗಳು
• ಕೀಟ ನಿಯಂತ್ರಣಕ್ಕಾಗಿ ಅಗ್ನಿಯಾಸ್ತ್ರ ಹಾಗೂ ಪಂಚಗವ್ಯ
• ಬೀಜೋಪಚಾರ ಸಾಮಗ್ರಿಗಳು ಸೇರಿದಂತೆ ಪ್ರಮುಖ ಸಾವಯವ ಕೃಷಿ ಸಾಮಗ್ರಿಗಳು.
ಈ ಕೇಂದ್ರ ಸಾವಯವ ಕೃಷಿ ಮಾಡಲು ಆಸಕ್ತಿ ಇರುವ ಪ್ರತಿಯೊಬ್ಬ ರೈತರಿಗೂ ಸಂಪೂರ್ಣ ಬೆಂಬಲ ಹಾಗೂ ತಾಂತ್ರಿಕ ಮಾರ್ಗದರ್ಶನ ನೀಡಲಿದೆ ಎಂದು ಶಾಸಕರು ತಿಳಿಸಿದ್ದಾರೆ.

ಸ್ಥಳೀಯ ಆರ್ಥಿಕತೆಗೆ ಬಲ: ಸ್ಥಳೀಯ ಆರ್ಥಿಕತೆ, ಸಮಗ್ರ ಆರ್ಥಿಕ ಸ್ವಾವಲಂಬನೆ ಹಾಗೂ ಗಾಂಧೀಜಿಯವರ ಸ್ವರಾಜ್ಯ ಪರಿಕಲ್ಪನೆಯನ್ನು ಬಲಪಡಿಸುವ ಈ ಮಹತ್ವಾಕಾಂಕ್ಷೆಯ ಕನಸಿಗೆ ನಾಡಿನ ಹಾಗೂ ಕ್ಷೇತ್ರದ ಜನತೆಯ ಬೆಂಬಲವಿರಲಿ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಮನವಿ ಮಾಡಿದ್ದಾರೆ.

Tags: #DarshanPuttannaiah #Melukote #OrganicFarming #MandyaNews #PuttannaiahFoundation #AgricultureNews #SaakshaTV
ShareTweetSendShare
Join us on:

Related Posts

saakshatv.com/special-atma-scheme-workshop-for-120-krishi-sakhis-in-pandavapura-mandya

120 ಕೃಷಿ ಸಖಿಯರಿಗೆ ‘ಆತ್ಮ’ ಯೋಜನೆಯಡಿ ವಿಶೇಷ ಕಾರ್ಯಾಗಾರ ಯಶಸ್ವಿ

by admin
August 26, 2026
0

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾರ್ಗದರ್ಶನ: ಪಾಂಡವಪುರದಲ್ಲಿ ಕೃಷಿ ಪರಿಣತರಿಂದ ತರಬೇತಿ ಮಂಡ್ಯ: ಪಾಂಡವಪುರ ತಾಲ್ಲೂಕಿನ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ (ಕೃಷಿ...

Darshan Puttannaiah Mega Health Camp, Nagamangala Dudda Health Camp, Mandya MIMS Kidwai Free Checkup, Melukote Assembly Health Initiatives, Mandya District Administration Health Drive

5 ಸಾವಿರಕ್ಕೂ ಹೆಚ್ಚು ಜನರಿಗೆ ತಪಾಸಣೆ; ಶೀಘ್ರದಲ್ಲೇ ಮೇಲುಕೋಟೆಯ ವಿವಿಧ ಗ್ರಾಮಗಳಿಗೂ ಶಿಬಿರ ವಿಸ್ತರಣೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ

by admin
August 26, 2026
0

ಮಂಡ್ಯ: ನಾಗಮಂಗಲ ತಾಲೂಕಿನ ದುದ್ದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಬೃಹತ್ ಉಚಿತ ವಿಶೇಷ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು. ಜಿಲ್ಲಾಡಳಿತ, ತಾಲೂಕು...

saakshatv.com/darshan-puttannaiah-inaugurates-tara-english-language-lab-mandya

ಜಕ್ಕನಹಳ್ಳಿಯಲ್ಲಿ ‘ತಾರಾ ಇಂಗ್ಲಿಷ್ ಭಾಷಾ ಪ್ರಯೋಗಾಲಯ’ ಉದ್ಘಾಟನೆ

by admin
August 26, 2026
0

AI ತಂತ್ರಜ್ಞಾನದೊಂದಿಗೆ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಹೊಸ ಸ್ಪರ್ಶ ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮಾರ್ಗದರ್ಶನ ಪುಟ್ಟಣ್ಣಯ್ಯ ಫೌಂಡೇಶನ್‌, ಲರ್ನಿಂಗ್‌ ಮ್ಯಾಟರ್ಸ್‌ ಮತ್ತು ರೋಟರಿ ಕ್ಲಬ್ ಆಫ್...

ತಾರಾ ಇಂಗ್ಲಿಷ್ ಭಾಷಾ ಪ್ರಯೋಗಾಲಯ’ ಉದ್ಘಾಟನಾ ಸಮಾರಂಭ

ತಾರಾ ಇಂಗ್ಲಿಷ್ ಭಾಷಾ ಪ್ರಯೋಗಾಲಯ’ ಉದ್ಘಾಟನಾ ಸಮಾರಂಭ

by admin
August 25, 2026
0

ಮಂಡ್ಯ: ಎಲೆಕೆರೆಯ ಪಿ.ಎಂ. ಶ್ರೀ ಆದರ್ಶ ವಿದ್ಯಾಲಯದಲ್ಲಿ ಪುಟ್ಟಣ್ಣಯ್ಯ ಫೌಂಡೇಶನ್‌, ಲರ್ನಿಂಗ್‌ ಮ್ಯಾಟರ್ಸ್‌ ಮತ್ತು ರೋಟರಿ ಕ್ಲಬ್ ಆಫ್ ಬೆಂಗಳೂರು ಜಂಕ್ಷನ್ ಸಹಯೋಗದೊಂದಿಗೆ 'ತಾರಾ ಇಂಗ್ಲಿಷ್ ಭಾಷಾ...

saakshatv.com/jio-world-convention-centre-launches-conference-ambassador-program-mumbai

ಮುಂಬೈಗೆ ಜಾಗತಿಕ ಸಮ್ಮೇಳನಗಳನ್ನು ತರಲು ‘ಕಾನ್ಫರೆನ್ಸ್ ಅಂಬಾಸಿಡರ್’ ಕಾರ್ಯಕ್ರಮ

by admin
August 25, 2026
0

ಮುಂಬೈ, : ಮುಂಬೈಯನ್ನು ಜಾಗತಿಕ ಮಟ್ಟದ ಸಮ್ಮೇಳನಗಳು ಹಾಗೂ ಬಿಸಿನೆಸ್‌ ಈವೆಂಟ್‌ಗಳ ಪ್ರಮುಖ ತಾಣವನ್ನಾಗಿ ರೂಪಿಸುವ ಉದ್ದೇಶದಿಂದ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ (JWCC) ‘ಕಾನ್ಫರೆನ್ಸ್ ಅಂಬಾಸಿಡರ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram