ADVERTISEMENT
Sunday, August 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಹತ್ತು ತಿಂಗಳಿಂದ ಟೀಮ್ ಇಂಡಿಯಾ ಆಟಗಾರರಿಗೆ ಸಂಬಳ ನೀಡದ ಕುಬೇರ ಬಿಸಿಸಿಐ…!

admin by admin
August 2, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಹತ್ತು ತಿಂಗಳಿಂದ ಟೀಮ್ ಇಂಡಿಯಾ ಆಟಗಾರರಿಗೆ ಸಂಬಳ ನೀಡದ ಕುಬೇರ ಬಿಸಿಸಿಐ…!

ಬಿಸಿಸಿಐ… ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ. ಹೇಳಿಕೊಳ್ಳಲು ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ. ವಿಶ್ವ ಕ್ರಿಕೆಟ್ ರಂಗವನ್ನು ಕೈಬೆರಳಿನಲ್ಲಿ ಆಟವಾಡಿಸುವ ತಾಕತ್ತು ಬಿಸಿಸಿಐಗಿದೆ. ಕೇವಲ ಹಣ ಬಲದಿಂದಲೇ ಕ್ರಿಕೆಟ್ ಜಗತ್ತನ್ನು ಆಳುತ್ತಿರುವ ಬಿಸಿಸಿಐಗೆ ಬಡತನವೆಂಬುದೇ ಗೊತ್ತಿಲ್ಲ. ಆದ್ರೆ ಈಗ ಕೋವಿಡ್-19 ಸೋಂಕು, ಅಂತಾರಾಷ್ಟ್ರೀಯ ಟೂರ್ನಿಗಳು ರದ್ದುಗೊಂಡಿರುವುದನ್ನು ಮುಂದಿಟ್ಟುಕೊಂಡು ಆಟಗಾರರಿಗೆ ವೇತನ ನೀಡದಿರುವುದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಎದುರಾಗಿದೆ.
ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುತ್ತಿರುವ ಬಿಸಿಸಿಐಗೆ ಆಟಗಾರರಿಗೆ ವೇತನ ನೀಡದಷ್ಟು ದಾರಿದ್ರ್ಯ ಬಂದಿದೆಯಾ ಅನ್ನೋ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರವಿಲ್ಲ. ಈ ಬಗ್ಗೆ ಆಟಗಾರರು ಕೂಡ ಬಿಸಿಸಿಐನಲ್ಲಿ ಪ್ರಶ್ನೆ ಮಾಡುವ ಧೈರ್ಯ ಮಾಡುತ್ತಿಲ್ಲ. ಬಿಸಿಸಿಐ ಅನ್ನು ಎದುರು ಹಾಕಿಕೊಂಡ್ರೆ ಕ್ರಿಕೆಟ್ ಬದುಕಿಗೆ ತೊಂದರೆಯಾಗಬಹುದು ಅನ್ನೋ ಆತಂಕ -ಭಯವೂ ಇದೆ. ಹೀಗಾಗಿ ಬಿಸಿಸಿಐ ಹೇಳಿದ್ದನ್ನೇಲ್ಲಾ ಕೇಳಲೇಬೇಕು.
ಹೌದು, ಟೀಮ್ ಇಂಡಿಯಾದ 27 ಆಟಗಾರರಿಗೆ ಕಳೆದ ಹತ್ತು ತಿಂಗಳಿಂದ ವೇತನವನ್ನೇ ನೀಡಿಲ್ಲ. 2019ರ ಡಿಸೆಂಬರ್ ನಿಂದ ಟೀಮ್ ಇಂಡಿಯಾ ಆಡಿದ ಎರಡು ಟೆಸ್ಟ್ ಪಂದ್ಯ, 9 ಏಕದಿನ ಪಂದ್ಯ ಮತ್ತು ಎಂಟು ಟಿ-ಟ್ವೆಂಟಿ ಪಂದ್ಯಗಳ ಶುಲ್ಕವನ್ನೇ ನೀಡಿಲ್ಲ. ತ್ರೈ ಮಾಸಿಕ ಕಂತುಗಳಲ್ಲಿ ವೇತನ ನೀಡಬೇಕಿದ್ದ ಬಿಸಿಸಿಐ ಇನ್ನೂ ಆಟಗಾರರಿಗೆ ನೀಡಿಲ್ಲ.

Related posts

ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಕುಸಿತ, RSS ಬಿಟ್ಟು ಎಲ್ಲರೂ ಸ್ವಾತಂತ್ರ್ಯಕ್ಕೆ ಹೋರಾಡಿದ್ರು : ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಕುಸಿತ, RSS ಬಿಟ್ಟು ಎಲ್ಲರೂ ಸ್ವಾತಂತ್ರ್ಯಕ್ಕೆ ಹೋರಾಡಿದ್ರು : ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

August 16, 2026
‘ಆರ್‌ಎಸ್‌ಎಸ್‌ ಇದುವರೆಗೆ ನೋಂದಣಿಯಾಗಿಲ್ಲ, ಮುಂದೆಯೂ ಮಾಡಲ್ಲ’: ‘ನೋಂದಣಿ ಮಾಡಿಕೊಂಡ ಸಂಸ್ಥೆಗಳು ಏನ್ ಮಾಡ್ತಿವೆ ಗೊತ್ತಿದೆ’- ಕಾಂಗ್ರೆಸ್ ಸರ್ಕಾರಕ್ಕೆ ಬಿ.ಎಲ್. ಸಂತೋಷ್‌ ಟಾಂಗ್

‘ಆರ್‌ಎಸ್‌ಎಸ್‌ ಇದುವರೆಗೆ ನೋಂದಣಿಯಾಗಿಲ್ಲ, ಮುಂದೆಯೂ ಮಾಡಲ್ಲ’: ‘ನೋಂದಣಿ ಮಾಡಿಕೊಂಡ ಸಂಸ್ಥೆಗಳು ಏನ್ ಮಾಡ್ತಿವೆ ಗೊತ್ತಿದೆ’- ಕಾಂಗ್ರೆಸ್ ಸರ್ಕಾರಕ್ಕೆ ಬಿ.ಎಲ್. ಸಂತೋಷ್‌ ಟಾಂಗ್

August 16, 2026

ರಾಷ್ಟ್ರೀಯ ಗುತ್ತಿಗೆ ಪಡೆದ ಆಟಗಾರರಿಗೆ ವಾರ್ಷಿಕವಾಗಿ ಒಟ್ಟು 99 ಕೋಟಿ ರೂಪಾಯಿ ನೀಡಬೇಕು. ಅಲ್ಲದೆ ಆಟಗಾರರ ವೇತನವನ್ನು ಗ್ರೇಡ್ ಮಾನದಂಡದಲ್ಲಿ ನೀಡಲಾಗುತ್ತದೆ. ಗ್ರೇಡ್ ಎ+ ಲೀಸ್ಟ್ ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರಿತ್ ಬೂಮ್ರಾ ಮೊದಲಾದವರಿದ್ದಾರೆ. ಇವರು ವಾರ್ಷಿಕವಾಗಿ ಏಳು ಕೋಟಿ ರೂಪಾಯಿ ಪಡೆಯುತ್ತಾರೆ.
ಇನ್ನು ಗ್ರೇಡ್ ಎ ಲೀಸ್ಟ್ ನಲ್ಲಿರುವ ಆಟಗಾರರು ಐದು ಕೋಟಿ, ಗ್ರೇಡ್ ಬಿ ಲೀಸ್ಟ್ ನಲ್ಲಿರುವ ಆಟಗಾರರು ಮೂರು ಕೋಟಿ ಮತ್ತು ಗ್ರೇಡ್ ಸಿ ಲೀಸ್ಟ್ ನಲ್ಲಿರುವ ಆಟಗಾರರು ಒಂದು ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ.
ಇನ್ನು ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂಪಾಯಿ, ಪ್ರತಿ ಏಕದಿನ ಪಂದ್ಯಕ್ಕೆ ಆರು ಲಕ್ಷ ರೂಪಾಯಿ ಹಾಗೂ ಪ್ರತಿ ಟಿ-ಟ್ವೆಂಟಿ ಏಕದಿನ ಪಂದ್ಯಕ್ಕೆ ಮೂರು ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಗುತ್ತಿಗೆಯಲ್ಲಿರುವ 27 ಕ್ರಿಕೆಟಿಗರಲ್ಲಿ ಎಂಟು ಕ್ರಿಕೆಟಿಗರು ಹಣ ಪಾವತಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಬಿಸಿಸಿಐನಿಂದ ಯಾವುದೇ ಉತ್ತರವೂ ಬಂದಿಲ್ಲ.
2018ರಲ್ಲಿ ಬಿಸಿಸಿಐ ಸಾರ್ವಜನಿಕವಾಗಿ ಪ್ರಕಟಿಸಿದ ಬ್ಯಾಲೆನ್ಸ್ ಶೀಟ್ ನಲ್ಲಿ ಮಾರ್ಚ್ ವೇಳೆಗೆ ಸ್ಥಿರ ಠೇವಣಿಗಳಲ್ಲಿ 2992 ಕೋಟಿ ರೂಪಾಯಿ ಸೇರಿದಂತೆ ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್ 5526 ಕೋಟಿ ರೂಪಾಯಿ ಇತ್ತು. ಹಾಗೇ ಪಂದ್ಯಗಳ ನೇರ ಪ್ರಸಾರದ ಹಕ್ಕನ್ನು 2018ರಲ್ಲಿ ಬಿಸಿಸಿಐ 6138.1 ಕೋಟಿ ರೂಪಾಯಿಗೆ ಸ್ಟಾರ್ ವಾಹಿನಿಯ ಜೊತೆ ಐದು ವರ್ಷಗಳ ಒಪ್ಪಂದಕ್ಕೆ ಸಹಿ ಮಾಡಿಕೊಂಡಿತ್ತು.
ಹಾಗಂತ ಬಿಸಿಸಿಐ ಬಳಿ ದುಡ್ಡಿಲ್ಲ ಅಂತ ಕ್ರಿಕೆಟ್ ಆಟಗಾರರಿಗೆ ವೇತನ ನೀಡಿಲ್ಲ. ಬದಲಾಗಿ ಕಳೆದ ಡಿಸೆಂಬರ್ ನಲ್ಲಿ ಬಿಸಿಸಿಐ ಆಡಳಿತದಲ್ಲಿ ಕೆಲವೊಂದು ಬದಲಾವಣೆಗಳಾಗಿದ್ದವು. ಡಿಸೆಂಬರ್‍ನಿಂದ ಮಂಡಳಿಯ ಮುಖ್ಯ ಹಣಕಾಸು ಅಧಿಕಾರಿ ಹಾಗೂ ಕಳೆದ ತಿಂಗಳಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಜನರಲ್ ಮ್ಯಾನೇಜರ್ ಇರಲಿಲ್ಲ. ಖಾಲಿಯಾಗಿದ್ದ ಹುದ್ದೆಗಳನ್ನು ಇನ್ನೂ ಭರ್ತಿ ಮಾಡಿಲ್ಲ. ಹೀಗಾಗಿ ತಾಂತ್ರಿಕ ತೊಂದರೆಯಿಂದಾಗಿ ಆಟಗಾರರಿಗೆ ವೇತನ ಸಿಕ್ಕಿಲ್ಲ.
ಒಟ್ಟಿನಲ್ಲಿ ವೃತ್ತಿಪರತೆ ಮತ್ತು ಪಾರದರ್ಶಕವಾಗಿ ಆಡಳಿತ ನಡೆಸುತ್ತಿರುವ ಬಿಸಿಸಿಐನಲ್ಲೇ ಈ ರೀತಿಯಾದ್ರೆ, ಇನ್ನುಳಿದ ಕ್ರೀಡಾ ಸಂಸ್ಥೆಗಳಲ್ಲಿ ಏನು ನಿರೀಕ್ಷೆ ಮಾಡಬಹುದು.

Tags: 27 elite contracted playerbcciCoronaCOVID-19CricketindiaIPLjasprith bumramoneyone day matchrohith sharmaSourav Gangulyt-20 cricketteam indiatestvirat kohliWORLD’S richest cricket board
ShareTweetSendShare
Join us on:

Related Posts

ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಕುಸಿತ, RSS ಬಿಟ್ಟು ಎಲ್ಲರೂ ಸ್ವಾತಂತ್ರ್ಯಕ್ಕೆ ಹೋರಾಡಿದ್ರು : ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಕುಸಿತ, RSS ಬಿಟ್ಟು ಎಲ್ಲರೂ ಸ್ವಾತಂತ್ರ್ಯಕ್ಕೆ ಹೋರಾಡಿದ್ರು : ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

by Shwetha
August 16, 2026
0

ಬೆಂಗಳೂರು: ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಬಳಿಕ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ತೀವ್ರವಾಗಿ ಕುಸಿಯಲಾರಂಭಿಸಿದ್ದು, ಇಡೀ ದೇಶವೇ ಸಾಲು ಸಾಲು ಕಠಿಣ ಸಮಸ್ಯೆಗಳಿಂದ ತೊಂದರೆಗೆ ಸಿಲುಕಿದೆ...

‘ಆರ್‌ಎಸ್‌ಎಸ್‌ ಇದುವರೆಗೆ ನೋಂದಣಿಯಾಗಿಲ್ಲ, ಮುಂದೆಯೂ ಮಾಡಲ್ಲ’: ‘ನೋಂದಣಿ ಮಾಡಿಕೊಂಡ ಸಂಸ್ಥೆಗಳು ಏನ್ ಮಾಡ್ತಿವೆ ಗೊತ್ತಿದೆ’- ಕಾಂಗ್ರೆಸ್ ಸರ್ಕಾರಕ್ಕೆ ಬಿ.ಎಲ್. ಸಂತೋಷ್‌ ಟಾಂಗ್

‘ಆರ್‌ಎಸ್‌ಎಸ್‌ ಇದುವರೆಗೆ ನೋಂದಣಿಯಾಗಿಲ್ಲ, ಮುಂದೆಯೂ ಮಾಡಲ್ಲ’: ‘ನೋಂದಣಿ ಮಾಡಿಕೊಂಡ ಸಂಸ್ಥೆಗಳು ಏನ್ ಮಾಡ್ತಿವೆ ಗೊತ್ತಿದೆ’- ಕಾಂಗ್ರೆಸ್ ಸರ್ಕಾರಕ್ಕೆ ಬಿ.ಎಲ್. ಸಂತೋಷ್‌ ಟಾಂಗ್

by Shwetha
August 16, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ನೋಂದಣಿ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಆರ್‌ಎಸ್‌ಎಸ್ ನಡುವೆ ಸೃಷ್ಟಿಯಾಗಿರುವ ರಾಜಕೀಯ ಸಂಘರ್ಷ ಈಗ ಮತ್ತಷ್ಟು ತೀವ್ರಗೊಂಡಿದೆ. ಆರ್‌ಎಸ್‌ಎಸ್‌...

ನಾನು ಹಿಂದೂಸ್ತಾನಿ, ನಾನು ಕನ್ನಡಿಗ – ನನ್ನ ದೇಶಪ್ರೇಮಕ್ಕೆ ಬಿಜೆಪಿಯ ಸರ್ಟಿಫಿಕೇಟ್ ಬೇಕಿಲ್ಲ: ಧ್ವಜಾರೋಹಣ ವಿವಾದಕ್ಕೆ ಜಮೀರ್ ತೆರೆ

ನಾನು ಹಿಂದೂಸ್ತಾನಿ, ನಾನು ಕನ್ನಡಿಗ – ನನ್ನ ದೇಶಪ್ರೇಮಕ್ಕೆ ಬಿಜೆಪಿಯ ಸರ್ಟಿಫಿಕೇಟ್ ಬೇಕಿಲ್ಲ: ಧ್ವಜಾರೋಹಣ ವಿವಾದಕ್ಕೆ ಜಮೀರ್ ತೆರೆ

by Shwetha
August 16, 2026
0

ಬೆಂಗಳೂರು: "ನಾನು ಹಿಂದೂಸ್ತಾನಿ, ನಾನು ಕನ್ನಡಿಗ. ದೇಶಾಭಿಮಾನ ಮತ್ತು ದೇಶಭಕ್ತಿಯನ್ನು ನಾವು ಬಿಜೆಪಿಯವರಿಂದ ಕಲಿಯಬೇಕಾದ ಅಗತ್ಯವಿಲ್ಲ" ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ವಿಪಕ್ಷಗಳ ಟೀಕೆಗೆ...

‘ಧರ್ಮೇಂದ್ರ ಪ್ರಧಾನ್ ರನ್ನೇ ಕಿತ್ತು ಹಾಕಿದ್ದೇವೆ, ನೀನ್ಯಾವ ಲೆಕ್ಕ?’: ಖಾಕಿ ಪಡೆಗೆ ಧಮ್ಕಿ ಹಾಕಿದ  ಸಿಜೆಪಿ ನಾಯಕ ಆಶುತೋಷ್ ರಾಂಕಾ

‘ಧರ್ಮೇಂದ್ರ ಪ್ರಧಾನ್ ರನ್ನೇ ಕಿತ್ತು ಹಾಕಿದ್ದೇವೆ, ನೀನ್ಯಾವ ಲೆಕ್ಕ?’: ಖಾಕಿ ಪಡೆಗೆ ಧಮ್ಕಿ ಹಾಕಿದ ಸಿಜೆಪಿ ನಾಯಕ ಆಶುತೋಷ್ ರಾಂಕಾ

by Shwetha
August 16, 2026
0

ಜೈಪುರ: ಜರ್ಜರಿತಗೊಂಡಿದ್ದ ಸರ್ಕಾರಿ ಶಾಲೆಯ ಕಟ್ಟಡದ ಛಾವಣಿ ಕುಸಿದು ಬಿದ್ದಿದ್ದನ್ನು ಖಂಡಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳದಲ್ಲಿ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ತೀವ್ರ ಹೈಡ್ರಾಮಾ...

‘ನಮ್ಮ ಕುಟುಂಬ ಕಾಪಾಡಿದ್ದು ಭಾರತೀಯ ಸೇನೆ, RSS ಅಲ್ಲ’: ಕಲಬುರಗಿಯಲ್ಲಿ ಇರೋದು ಪಟೇಲರ ಪ್ರತಿಮೆ, ಚಡ್ಡಿ ಹಾಕಿರೋರದ್ದಲ್ಲ -ಬಿಎಲ್ ಸಂತೋಷ್‌ಗೆ ಪ್ರಿಯಾಂಕ್ ಖರ್ಗೆ ರಿವರ್ಸ್ ಅಟ್ಯಾಕ್

‘ನಮ್ಮ ಕುಟುಂಬ ಕಾಪಾಡಿದ್ದು ಭಾರತೀಯ ಸೇನೆ, RSS ಅಲ್ಲ’: ಕಲಬುರಗಿಯಲ್ಲಿ ಇರೋದು ಪಟೇಲರ ಪ್ರತಿಮೆ, ಚಡ್ಡಿ ಹಾಕಿರೋರದ್ದಲ್ಲ -ಬಿಎಲ್ ಸಂತೋಷ್‌ಗೆ ಪ್ರಿಯಾಂಕ್ ಖರ್ಗೆ ರಿವರ್ಸ್ ಅಟ್ಯಾಕ್

by Shwetha
August 16, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಆರ್‌ಎಸ್‌ಎಸ್ ನಡುವಿನ ಸಮರ ಈಗ ಮತ್ತಷ್ಟು ತೀವ್ರಗೊಂಡಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಇತಿಹಾಸ ಮತ್ತು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram