ಅಫ್ಘಾನಿಸ್ತಾನದಲ್ಲಿ ನಡೆಯುತ್ತಿದ್ದ 19 ವರ್ಷಗಳ ಕದನಕ್ಕೆ ಕೊನೆಗೂ ವಿರಾಮ ಸಿಕ್ಕಿದೆ. 2001ರಿಂದ ಅಫ್ಘಾನ್ ನೆಲದಲ್ಲಿ ತಾಲಿಬಾನ್ ಉಗ್ರರು ಮತ್ತು ಅವರನ್ನು ಹಿಮ್ಮೆಟ್ಟಿಸಲು ಅಮೆರಿಕ ನಡೆಸುತ್ತಿದ್ದ ಕದನಕ್ಕೆ ತೆರೆ ಬಿದ್ದಿದೆ. ಅಫ್ಘಾನ್ ನೆಲದಲ್ಲಿ ರಕ್ತಪಾತಕ್ಕೆ ಕಾರಣರಾಗಿದ್ದ ತಾಲಿಬಾನ್ ಉಗ್ರರು ಮತ್ತು ಅವರೊಡನೆ ಕದನ ನಿರತರಾಗಿದ್ದ ಅಮೆರಿಕದ ನಡುವೆ ಶಾಂತಿ ಒಪ್ಪಂದ ಏರ್ಪಟ್ಟು, ಹಂತ ಹಂತವಾಗಿ ಅಮೆರಿಕ ಮುಂದಿನ 14 ತಿಂಗಳುಗಳಲ್ಲಿ ವಾಪಸ್ ಹೋಗಲಿದೆ.
ಅಫ್ಘಾನಿಸ್ತಾನದಲ್ಲಿರುವ ಅಮೆರಿಕದ ರಾಯಭಾರಿ ಝಲ್ಮಯ್ ಖಲೀಜಾದ್ ಹಾಗೂ ತಾಲಿಬಾನ್ ನ ನಾಯಕರ ಪ್ರತಿನಿಧಿ ಮುಲ್ಲಾ ಅಬ್ದುಲ್ ಘನಿ ಬರಾದಾರ್, ಕತಾರ್ ರಾಜಧಾನಿ ದೋಹಾದಲ್ಲಿನ ಶೆರಟಾನ್ ಹೊಟೇಲ್ ನಲ್ಲಿ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ಶಿಂಗ್ಲಾ ಸೇರಿದಂತೆ ಪಾಕಿಸ್ತಾನ, ಇಂಡೋನೇಷ್ಯಾ ಸಹಿತ 30 ದೇಶಗಳ ಪ್ರತಿನಿಧಿಗಳು, ವಿಶ್ವಸಂಸ್ಥೆಯ ಸದಸ್ಯರು ಈ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಾಕ್ಷಿಯಾದರು.
ಅನ್ನಭಾಗ್ಯ ಯೋಜನೆಗೆ ಬಿಗ್ ಸರ್ಜರಿ: 14 ಲಕ್ಷ ಅನರ್ಹರ ಬಿಪಿಎಲ್ ಕಾರ್ಡ್ ರದ್ದತಿಗೆ ಮುಹೂರ್ತ ಫಿಕ್ಸ್ : ಸಚಿವ ಕೆ ಎಚ್ ಮುನಿಯಪ್ಪ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಗೆ ಈಗ ದೊಡ್ಡ ಮಟ್ಟದ ಪರಿಷ್ಕರಣೆ ಎದುರಾಗಿದೆ. ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳ ಬೆನ್ನಲ್ಲೇ ಈಗ ಆಹಾರ ಇಲಾಖೆಯಲ್ಲೂ ಕ್ರಾಂತಿಕಾರಿ ಬದಲಾವಣೆಗೆ...








