ಸುಶಾಂತ್ ಪ್ರಕರಣ ನಿಜಕ್ಕೂ ಆತ್ಮಹತ್ಯೆಯೇ ಅಥವಾ ಕೊಲೆಯೇ – ಸುಬ್ರಮಣಿಯನ್ ಸ್ವಾಮಿ
ಚೆನ್ನೈ, ಅಗಸ್ಟ್ 11: ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಸೋಮವಾರ ಟ್ವೀಟ್ ಮಾಡಿದ್ದು, ಸುಶಾಂತ್ ಸಿಂಗ್ ರಜಪೂತ್ ಅವರ ಶವವನ್ನು ಅವರ ನಿವಾಸದಿಂದ ಆಸ್ಪತ್ರೆಗೆ ಸಾಗಿಸಿದ ಆಂಬ್ಯುಲೆನ್ಸ್ ಸಿಬ್ಬಂದಿ ಹೇಳಿಕೆ ಪ್ರಕಾರ, ದಿವಂಗತ ನಟನ ಪಾದಗಳು ಮುರಿದಂತೆ ಇದ್ದವು ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಹಿರಿಯ ರಾಜಕಾರಣಿ ತಮ್ಮ ಟ್ವೀಟ್ನಲ್ಲಿ ಸುಶಾಂತ್ ಅವರ ಶವಪರೀಕ್ಷೆ ನಡೆಸಿದ ಐವರು ವೈದ್ಯರ ಬಗ್ಗೆಯೂ ಸಂಶಯವನ್ನು ವ್ಯಕ್ತಪಡಿಸಿದ್ದಾರೆ.

ಶವಪರೀಕ್ಷೆ ನಡೆಸಿದ ಐವರು ವೈದ್ಯರನ್ನು ಡಾ. ಆರ್ಸಿ ಕೂಪರ್ ಮುನ್ಸಿಪಲ್ ಆಸ್ಪತ್ರೆಯಲ್ಲಿ ತನಿಖೆ ನಡೆಸುವುದು ಸಿಬಿಐಗೆ ಸೂಕ್ತವಾಗಿದೆ. ಸುಶಾಂತ್ ಅವರ ದೇಹವನ್ನು ಆಸ್ಪತ್ರೆಗೆ ಕರೆದೊಯ್ಯುವ ಆಂಬ್ಯುಲೆನ್ಸ್ ಸಿಬ್ಬಂದಿ ಪ್ರಕಾರ, ಸುಶಾಂತ್ ನ ಪಾದದ ಕೆಳಗೆ ಮುರಿದಂತೆ ಇದ್ದವು ಎಂದಿದ್ದಾರೆ.
ಸುಶಾಂತ್ ಅವರ ಸಾವು ಪ್ರಕರಣ, ಅವರ ಮರಣೋತ್ತರ ವರದಿಯು ಸೂಚಿಸಿದಂತೆ ನಿಜಕ್ಕೂ ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂದು ಸೋಮವಾರ ಸ್ವಾಮಿ ಅವರ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ವಿಷಯವನ್ನು ಎತ್ತಿದ್ದಾರೆ.

ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹ ಮುಂಬೈ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದೇ ದಿನ ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಮರಣೋತ್ತರ ವರದಿಯು ನಟನ ಸಾವನ್ನು ಆತ್ಮಹತ್ಯೆಯ ಸ್ಪಷ್ಟ ಪ್ರಕರಣ ಎಂದು ಉಲ್ಲೇಖಿಸಿದೆ. ಆದರೆ ಸುಶಾಂತ್ ರ ಮೃತದೇಹವನ್ನು ಆಸ್ಪತ್ರೆಗೆ ಒಯ್ದ ಅ್ಯಂಬುಲೆನ್ಸ್ ನ ಸಿಬ್ಬಂದಿ ನನಗೆ ತಿಳಿದಿರುವ ಪ್ರಕಾರ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಆತನ ದೇಹ ಹಳದಿ ಬಣ್ಣಕ್ಕೆ ತಿರುಗುವುದಿಲ್ಲ. ಆದರೆ ಸುಶಾಂತ್ ದೇಹ ಹಳದಿ ಬಣ್ಣಕ್ಕೆ ತಿರುಗಿತ್ತು ಮತ್ತು ಆತನ ಎರಡೂ ಕಾಲುಗಳು ಮಡಚಿದ ಸ್ಥಿತಿಯಲ್ಲಿದ್ದು, ಪಾದದ ಕೆಳಗೆ ಮುರಿದು ಹೋದಂತೆ ಇದ್ದವು ಎಂದಿದ್ದಾರೆ.








