ಬೆಳಗಾವಿ: ಬೆಂಗಳೂರಿನಲ್ಲಿ ಪುಂಡರ ಪುಂಡಾಟ ಸಂಬಂಧ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಅವರು ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ಮನಸ್ಸಿಗೆ ನೋವು ಮಾಡುವಂತಹ ಘಟನೆ. ನಮ್ಮ ಕರ್ನಾಟಕದ ಇಡೀ ವಿಶ್ವದಲ್ಲಿ ಶಾಂತಿಗೆ ಹೆಸರಾದ ರಾಜ್ಯ. ಇಂತಹ ರಾಜ್ಯದಲ್ಲಿ ಈ ರೀತಿಯ ಘಟನೆಗಳು ಆಗುತ್ತಿರುವುದು ಮನಸ್ಸಿಗೆ ನೋವುಂಟು ಮಾಡಿದೆ. ತಪ್ಪಿತಸ್ಥರ ವಿರುದ್ಧ ಕಠಿಣವಾದ ಕ್ರಮವನ್ನು ಮುಖ್ಯಮಂತ್ರಿಗಳು ಕೈಗೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.
ಇನ್ನೂ ಸಿಎಂ, ಗೃಹ ಮಂತ್ರಿ ಇಬ್ಬರು ಸೇರಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಮಗೆ ಅಭದ್ರತೆ ಇರುವಂತೆ ಕಾಡುತ್ತಿದೆ. ಇಂತಹ ಘಟನೆ ಹಿಂದೆ ಪ್ರಭಾವಿಗಳು ಇರ್ತಾರೆ. ಅವರನ್ನು ದೇವರು ನೋಡಿಕೊಳ್ಳುತ್ತಾನೆ. ತಪ್ಪಿತಸ್ಥರ ವಿರುದ್ಧ ಸಿಎಂ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.