ಡಿಜೆ ಹಳ್ಳಿ ,ಕೆಜೆ ಹಳ್ಳಿ ಗಲಭೆ ಪ್ರಕರಣದ ಸಂಬಂಧ ಆರೋಪಿಗಳ ಬೇಟೆಗಾಗಿ ರಾತ್ರೋರಾತ್ರಿ ಸಿಸಿಬಿ ತಂಡ ಅಖಾಡಕ್ಕಿಳಿದಿದೆ. ಡಿಸಿಪಿ ರವಿಕುಮಾರ್ ನೇತೃತ್ವದ ಸಿಸಿಬಿ ತಂಡ ರಾತ್ರೋರಾತ್ರಿ ಕಾರ್ಯಾಚರಣೆ ನಡೆದಿದೆ. ಮದ್ಯರಾತ್ರಿ 12 ಗಂಟೆಗೆ ಫೀಲ್ಡಿಗಳಿದ ಪೊಲೀಸರು ಗಲ್ಲಿ ಗಲ್ಲಿಯಲ್ಲೂ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಪೊಲೀಸರು ಹಾಗೂ CISF ಹಾಗೂ RAF ತಂಡದಿಂದ ಕಾರ್ಯಾಚರಣೆ ಅಬ್ಬರದಿಂದ ಸಾಗಿದೆ. ಇನ್ನೂ ಸಿಸಿಬಿ ಪೊಲೀಸರು ಮನೆಮನೆಗೂ ನುಗ್ಗಿ ಗಲಭೆ ಕೋರರ ಹೆಡೆಮುರಿ ಕಟ್ತಿದ್ದಾರೆ. ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಚಾರಣೆಯಲ್ಲಿ ಸಿಸಿಬಿ ಡಿಸಿಪಿ ಗಳಾದ ಕುಲ್ ದೀಪ್ ಜೈನ್, ರವಿಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
49 ರೂ.ಗೆ ಊಟ, ಜೊತೆಗೆ ಫ್ರೀ ಡೆಲಿವರಿ: ಆನ್ಲೈನ್ ಫುಡ್ ಆರ್ಡರ್ ಟ್ರೆಂಡ್ ಬದಲಿಸಿದ ಸ್ವಿಗ್ಗಿ ’99 ಸ್ಟೋರ್’!
49 ರೂ.ಗೆ ಊಟ, ಜೊತೆಗೆ ಫ್ರೀ ಡೆಲಿವರಿ: ಆನ್ಲೈನ್ ಫುಡ್ ಆರ್ಡರ್ ಟ್ರೆಂಡ್ ಬದಲಿಸಿದ ಸ್ವಿಗ್ಗಿ '99 ಸ್ಟೋರ್'! ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆನ್ಲೈನ್ನಲ್ಲಿ ಊಟ ಆರ್ಡರ್...








