ನಮ್ಮ ಸರಕಾರದ ಒಳ್ಳೆಯ ನಿರ್ಧಾರಗಳನ್ನು ಟೀಕಿಸುವ ಗುಂಪಿಗೆ, ಸರಿಯಾದ ಮಾರ್ಗದಲ್ಲಿ ನಡೆಯುವ ಜನರನ್ನು ಕಂಡರೆ ಆಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಾಕಾರರ ಮೇಲೆ ಹರಿಹಾಯ್ದಿದ್ದಾರೆ.
ನಮ್ಮ ಸರಕಾರ ನೆರೆ ರಾಷ್ಟ್ರದ ಅಲ್ಪಸಂಖ್ಯಾತ ವಲಸಿಗರಿಗೆ ಪೌರತ್ವ ನೀಡುವ ಕಾನೂನು ಜಾರಿಗೆ ತಂದಾಗ ಅದನ್ನು ವಿರೋಧಿಸಿದ ಈ ರೈಟ್ ಟಾಕಿಂಗ್ ಗ್ಯಾಂಗ್ ಜಗತ್ತಿನಾದ್ಯಂತ ವಲಸಿಗರ ಹಕ್ಕುಗಳ ಬಗ್ಗೆ ಮಾತನಾಡುತ್ತದೆ. 370ನೇ ವಿಧಿ ರದ್ದು ಮಾಡಿದ್ದನ್ನು ವಿರೋಧಿಸುವ ಇವರು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ನಾವು ಏನೇ ನಿರ್ಧಾರ ಕೈಗೊಂಡರು ಅವರು ಅದನ್ನು ದೊಡ್ಡ ಅಡ್ಡಿಯೆಂದು ಭಾವಿಸಿ ವಿರೋಧಿಸುತ್ತಾರೆ. ಸರಿಯಾದುದನ್ನು ಮಾತನಾಡುವುದು ತಪ್ಪಲ್ಲ, ಆದರೆ ಇವರಿಗೆ ಸರಿಯಾದುದನ್ನು ಮಾಡುವವರನ್ನು ಕಂಡರಾಗದು ಎಂದು ಪ್ರಧಾನಿ ಕಿಡಿಕಾರಿದರು.
ಮತ ಹಾಕುವಾಗ ನಮ್ಮವರು, ಈಗ ಬಾಂಗ್ಲಾದವರಾ?- ಕುಮಾರಸ್ವಾಮಿಯದ್ದು ದ್ವಂದ್ವ ನಿಲುವು: ಮುಸ್ಲಿಂ ಸಮುದಾಯದ ಕುರಿತ ಹೇಳಿಕೆಗೆ ಶಾಸಕ ಬಾಲಕೃಷ್ಣ ತೀವ್ರ ವಾಗ್ದಾಳಿ
ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜಕೀಯ ಲಾಭಕ್ಕಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡುತ್ತಿದ್ದಾರೆ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ತೀವ್ರ ವಾಗ್ದಾಳಿ...








