ನಮ್ಮ ಸರಕಾರದ ಒಳ್ಳೆಯ ನಿರ್ಧಾರಗಳನ್ನು ಟೀಕಿಸುವ ಗುಂಪಿಗೆ, ಸರಿಯಾದ ಮಾರ್ಗದಲ್ಲಿ ನಡೆಯುವ ಜನರನ್ನು ಕಂಡರೆ ಆಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಾಕಾರರ ಮೇಲೆ ಹರಿಹಾಯ್ದಿದ್ದಾರೆ.
ನಮ್ಮ ಸರಕಾರ ನೆರೆ ರಾಷ್ಟ್ರದ ಅಲ್ಪಸಂಖ್ಯಾತ ವಲಸಿಗರಿಗೆ ಪೌರತ್ವ ನೀಡುವ ಕಾನೂನು ಜಾರಿಗೆ ತಂದಾಗ ಅದನ್ನು ವಿರೋಧಿಸಿದ ಈ ರೈಟ್ ಟಾಕಿಂಗ್ ಗ್ಯಾಂಗ್ ಜಗತ್ತಿನಾದ್ಯಂತ ವಲಸಿಗರ ಹಕ್ಕುಗಳ ಬಗ್ಗೆ ಮಾತನಾಡುತ್ತದೆ. 370ನೇ ವಿಧಿ ರದ್ದು ಮಾಡಿದ್ದನ್ನು ವಿರೋಧಿಸುವ ಇವರು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ನಾವು ಏನೇ ನಿರ್ಧಾರ ಕೈಗೊಂಡರು ಅವರು ಅದನ್ನು ದೊಡ್ಡ ಅಡ್ಡಿಯೆಂದು ಭಾವಿಸಿ ವಿರೋಧಿಸುತ್ತಾರೆ. ಸರಿಯಾದುದನ್ನು ಮಾತನಾಡುವುದು ತಪ್ಪಲ್ಲ, ಆದರೆ ಇವರಿಗೆ ಸರಿಯಾದುದನ್ನು ಮಾಡುವವರನ್ನು ಕಂಡರಾಗದು ಎಂದು ಪ್ರಧಾನಿ ಕಿಡಿಕಾರಿದರು.
ಗಾರ್ಡನ್ ಸಿಟಿ ಬೆಂಗಳೂರಿನ ಉಸಿರು ನಿಲ್ಲಿಸಬೇಡಿ: ಪಾರ್ಕ್ ಗಳು ನಿಮ್ಮ ಖಾಸಗಿ ಆಸ್ತಿಯಲ್ಲ-ಉದ್ಯಾನವನಗಳ ಶೇ 5ರಷ್ಟು ಜಾಗದ ಸರ್ಕಾರದ ಬಳಕೆಗೆ ತೇಜಸ್ವಿ ಸೂರ್ಯ ಬ್ರೇಕ್
ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಾರ್ವಜನಿಕ ಉದ್ಯಾನವನಗಳ ಶೇಕಡಾ 5ರಷ್ಟು ಜಾಗವನ್ನು ಇತರ ಉದ್ದೇಶಗಳಿಗೆ ಬಳಸಿಕೊಳ್ಳುವ ರಾಜ್ಯ ಸರ್ಕಾರದ ತೀರ್ಮಾನ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ನಿರ್ಧಾರವು...








