ಅಂತರ್ ಧರ್ಮದ ವಿವಾಹದ ಜಾಹೀರಾತನ್ನು ಹಿಂತೆಗೆದುಕೊಂಡ ತನೀಶ್ಕ್ ಆಭರಣ ಬ್ರಾಂಡ್ Tanishq withdrawn advertise
ಹೊಸದಿಲ್ಲಿ, ಅಕ್ಟೋಬರ್14: ಟೈಟಾನ್ ಗ್ರೂಪ್ನ ಆಭರಣ ಬ್ರಾಂಡ್ ತನೀಶ್ಕ್ ಅಂತರ್ ಧರ್ಮದ ವಿವಾಹದ ಜಾಹೀರಾತು ಅನ್ನು ಚಿತ್ರಿಸಿದ್ದಕ್ಕಾಗಿ ಬ್ರ್ಯಾಂಡ್ ಅನ್ನು ಬಹಿಷ್ಕರಿಸಬೇಕೆಂದು ನೆಟ್ಟಿಗರು ಕರೆ ನೀಡಿದ ನಂತರ ಜಾಹೀರಾತನ್ನು ಹಿಂತೆಗೆದುಕೊಂಡಿದೆ. Tanishq withdrawn advertise

ವಿವಿಧತೆಯಲ್ಲಿ ಏಕತೆ ಯನ್ನು ಆಚರಿಸಲು ತನೀಶ್ಕ್ ಸೋಮವಾರ ತಮ್ಮ ಹೊಸ ಆಭರಣ ಸಾಲಿನ ಏಕತ್ವಾಮ್ ಎಂಬ ಜಾಹೀರಾತನ್ನು ಬಿಡುಗಡೆ ಮಾಡಿತು. ಇದು ಮುಸ್ಲಿಂ ಕುಟುಂಬವು ತಮ್ಮ ಗರ್ಭಿಣಿ ಹಿಂದೂ ಸೊಸೆಗೆ ಸಾಂಪ್ರದಾಯಿಕ ಹಿಂದೂ ಆಚರಣೆಗಳ ಪ್ರಕಾರ ಸೀಮಂತ ಸಮಾರಂಭವನ್ನು ಆಯೋಜಿಸುವುದನ್ನು ತೋರಿಸುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ಶ್ಲಾಘನೆಗೆ ಪಾತ್ರವಾದ ಭಾರತದ ಆರೋಗ್ಯ ಸೇತು ಆ್ಯಪ್
ಇದನ್ನು ನೋಡಿ ಗರ್ಭಿಣಿ ಹಿಂದೂ ಸೊಸೆ ಆಶ್ಚರ್ಯಚಕಿತಳಾಗುತ್ತಾಳೆ. ಅವಳು ತನ್ನ ಅತ್ತೆಯನ್ನು ಕೇಳುತ್ತಾಳೆ, ‘ಆದರೆ ಈ ಸಮಾರಂಭವನ್ನು ನಿಮ್ಮ ಸಂಪ್ರದಾಯದಲ್ಲಿ ಆಚರಿಸಲಾಗುವುದಿಲ್ಲ, ಅಲ್ಲವೇ?’. ಆಗ ಮನೋಹರವಾದ ನಗುವಿನೊಂದಿಗೆ ಅತ್ತೆ, ‘ಮಗಳನ್ನು ಸಂತೋಷಪಡಿಸುವ ಸಮಾರಂಭವನ್ನು ಪ್ರತಿ ಮನೆಯಲ್ಲಿಯೂ ನಡೆಸಲಾಗುತ್ತದೆ, ಅಲ್ಲವೇ?’ ಎಂದು ಕೇಳುತ್ತಾರೆ.
ಆದರೆ ಈ ಜಾಹೀರಾತಿಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದು ಭಾರತದ ಧಾರ್ಮಿಕ ಸಾಮರಸ್ಯಕ್ಕೆ ಒಂದು ಸುಂದರ ಉದಾಹರಣೆ ಎಂದು ಒಂದು ಬಣ ಭಾವಿಸಿದರೆ, ಇತರರು ಇದು ಅಂತರ್ ಧರ್ಮದ ವಿವಾಹಗಳ ವಾಸ್ತವತೆಯನ್ನು ತೋರಿಸುವುದಿಲ್ಲ ಎಂದು ಟೀಕಿಸಿದ್ದರು ಮತ್ತು ಅದು ಲವ್ ಜಿಹಾದ್ ಅನ್ನು ಪ್ರೋತ್ಸಾಹಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಜೊತೆಗೆ #BoycottTanishq ಎಂಬ ಟ್ಯಾಗ್ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಹಲವಾರು ಬಳಕೆದಾರರು ಇನ್ನು ಮುಂದೆ ತಮ್ಮ ಅಂಗಡಿಗೆ ಭೇಟಿ ನೀಡುವುದಿಲ್ಲ ಎಂದು ಕಿಡಿಕಾರಿದ್ದರು.
ಜಾಹೀರಾತಿನ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಮತ್ತು ತೀವ್ರ ಟ್ರೋಲಿಂಗ್ ನಂತರ ತನೀಶ್ಕ್ ಅಧಿಕೃತವಾಗಿ ಎಲ್ಲಾ ಪ್ಲಾಟ್ಫಾರ್ಮ್ಗಳಿಂದ ವೀಡಿಯೊವನ್ನು ತೆಗೆದುಹಾಕಿದೆ.
ಮೊಬೈಲ್ ಫೋನ್ಗಳ ವಿಕಿರಣವನ್ನು ಕಡಿಮೆ ಮಾಡಲು ಗೋವಿನ ಸಗಣಿಯ ‘ಚಿಪ್’
ಭಾವನೆಗಳಿಗೆ ನೋವು ಮಾಡಿರುವುದಕ್ಕೆ ನಾವು ದುಃಖಿತರಾಗಿದ್ದೇವೆ. ನಮ್ಮ ನೌಕರರು, ಪಾಲುದಾರರು ಮತ್ತು ಅಂಗಡಿ ಸಿಬ್ಬಂದಿಗಳ ಭಾವನೆಗಳನ್ನು ಮತ್ತು ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಈ ಚಿತ್ರವನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ತನೀಶ್ಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಸವಾಲಿನ ಕಾಲದಲ್ಲಿ ವಿವಿಧ ವರ್ಗದ ಜನರು, ಸ್ಥಳೀಯ ಸಮುದಾಯಗಳು ಮತ್ತು ಕುಟುಂಬಗಳ ಒಗ್ಗೂಡಿಸುವಿಕೆಯನ್ನು ಆಚರಿಸುವುದು ಅಭಿಯಾನದ ಹಿಂದಿನ ಆಲೋಚನೆಯಾಗಿತ್ತು ಎಂದು ಕಂಪನಿ ಹೇಳಿದೆ.

ಆದರೆ ಚಿತ್ರವು ಅದರ ಉದ್ದೇಶಕ್ಕೆ ವಿರುದ್ಧವಾಗಿ ವಿಭಿನ್ನವಾಗಿ ಪ್ರತಿಕ್ರಿಯೆಗಳನ್ನು ಪ್ರಚೋದಿಸಿತು ಎಂದು ತನೀಶ್ಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಜಾಹೀರಾತನ್ನು ತೆಗೆದು ಹಾಕಿರುವುದಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್, ಚಿತ್ರಕಥೆಗಾರ ಅನಿರುದ್ಧ ಗುಹಾ ಸೇರಿದಂತೆ ಅನೇಕ ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
https://twitter.com/ShashiTharoor/status/1315833504253374464?s=19
ಹಿಂದೂ-ಮುಸ್ಲಿಂ’ ಏಕತ್ವಾಮ್ ‘ ಅವರನ್ನು ತುಂಬಾ ಕೆರಳಿಸಿದ್ದರೆ, ಬಹುಕಾಲದಿಂದ ಹಿಂದೂ-ಮುಸ್ಲಿಂ ಐಕ್ಯತೆಯ ಸಂಕೇತವಾಗಿರುವ ಭಾರತವನ್ನು ಅವರು ಏಕೆ ಬಹಿಷ್ಕರಿಸುವುದಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv








