ಬಳ್ಳಾರಿ : ಜಿಲ್ಲೆಯಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಉತ್ತಮ ಮಳೆ Rain ಆಗುತ್ತಿದೆ. ಈ ಹಿನ್ನೆಲೆ ಅಂತರ್ಜಲ ಹೆಚ್ಚಳವಾಗಿದ್ದು, ಪಾಳು ಬಿದ್ದ ಬೋರ್ ವೆಲ್ ನಲ್ಲಿ ನೀರು ಉಕ್ಕುತ್ತಿದೆ.

ಹೌದು..! ಬಳ್ಳಾರಿ Bellary ಯ ಸಂಡೂರು ತಾಲೂಕಿನ ಸಿಂಗನಕೆರೆ ಬಳಿ ಈ ಘಟನೆ ನಡೆದಿದೆ. ಸಿಂಗನಕೆರೆ ಬಳಿ ರೈತರೊಬ್ಬರು ಬೋರ್ ವೆಲ್ ಕೊರೆಸಿ ನೀರು ಬಾರದ ಹಿನ್ನೆಲೆ ಅದನ್ನ ಕೈ ಬಿಟ್ಟಿದ್ದರು.
ಆದ್ರೆ ಈಗ ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿರುವ ಪರಿಣಾಮ ಆ ಬೋರ್ ವೆಲ್ ನೀರು ಚಿಮ್ಮುತ್ತಿದೆ.

ಇದರಿಂದ ರೈತ ಫುಲ್ ಖುಷ್ ಆಗಿದ್ದಾನೆ. ಇನ್ನು ಇದನ್ನು ನೋಡಲು ಸುತ್ತಮುತ್ತಲಿನ ಜನರು ಆಗಮಿಸುತ್ತಿದ್ದಾರೆ. ಹಾಗೇ ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







