ಆಸೀಸ್ ವಿರುದ್ಧ ಕ್ಲೀನ್ ಸ್ವೀಪ್ ಮಾಡುವ ತವಕದಲ್ಲಿ ಟೀಮ್ ಇಂಡಿಯಾ
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಸೋಲಿಗೆ ಟೀಮ್ ಇಂಡಿಯಾ ಟಿ-ಟ್ವೆಂಟಿ ಸರಣಿಯನ್ನು ಗೆಲ್ಲುವ ಮೂಲಕ ಸೇಡು ತೀರಿಸಿಕೊಂಡಿದೆ. ಇದೀಗ ಟಿ-ಟ್ವೆಂಟಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ತವಕದಲ್ಲಿದೆ ಕೊಹ್ಲಿ ಬಳಗ. ಅದೇ ರೀತಿ ತವರಿನಲ್ಲಿ ಮುಖಭಂಗವನ್ನು ತಪ್ಪಿಸಲು ಆಸ್ಟ್ರೇಲಿಯಾ ತಂಡ ಹೋರಾಟ ನಡೆಸಲಿದೆ.
ಡಿಸೆಂಬರ್ 7ರಂದು ಟಿ-ಟ್ವೆಂಟಿ ಸರಣಿಯ ಅಂತಿಮ ಹಾಗೂ ಮೂರನೇ ಪಂದ್ಯ ನಡೆಯಲಿದೆ. ಸತತ ಎರಡು ಪಂದ್ಯಗಳನ್ನು ಸೋತಿರುವ ಮ್ಯಾಥ್ಯೂ ವಾಡೆ ಬಳಗ ಸಾಕಷ್ಟು ಒತ್ತಡದಲ್ಲಿದೆ. ಇನ್ನು ವಿರಾಟ್ ಕೊಹ್ಲಿ ಬಳಗ ಆರಾಮವಾಗಿದೆ. ಮೂರನೇ ಪಂದ್ಯವನ್ನು ಗೆದ್ದು ತನ್ನ ಸಾಮಥ್ರ್ಯವನ್ನು ಪ್ರದರ್ಶಿಸಲು ಟೀಮ್ ಇಂಡಿಯಾ ಹುಡುಗರು ತುದಿಗಾಲಿನಲ್ಲಿ ನಿಂತಿದ್ದಾರೆ.
ಏಕದಿನ ಸರಣಿಯ ಸತತ ಎರಡು ಸೋಲುಗಳಿಂದ ಹೊರಬಂದಿರುವ ಭಾರತ ತಂಡ ಅತ್ಯುತ್ತಮ ಲಯದಲ್ಲಿದೆ. ವಿರಾಟ್ ಪಡೆಯ ಹುಡುಗರು ಕೂಡ ಆತ್ಮವಿಶ್ವಾಸದಿಂದ ಬೀಗುತ್ತಿದ್ದಾರೆ. ಅತ್ತ ಆಸ್ಟ್ರೇಲಿಯಾ ತಂಡ ಪೆಟ್ಟು ತಿಂದ ಹುಲಿಯಂತಾಗಿದೆ. ತವರು ನೆಲದಲ್ಲಿ ಟಿ-ಟ್ವೆಂಟಿ ಪಂದ್ಯಗಳಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಆಸ್ಟ್ರೇಲಿಯಾ ತಂಡ ಗೆಲುವಿನ ಟ್ರ್ಯಾಕ್ಗೆ ಮರಳಲು ಒದ್ದಾಟ ನಡೆಸುತ್ತಿದೆ.
ಇನ್ನೊಂದೆಡೆ ಟೀಮ್ ಇಂಡಿಯಾದಲ್ಲಿ ಕೆಲವೊಂದು ಬದಲಾವಣೆಯಾಗುವ ಸಾಧ್ಯತೆ ಇದೆ. ಶ್ರೇಯಸ್ ಅಯ್ಯರ್ ಬದಲು ಮನೀಷ್ ಪಾಂಡೆ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಅದೇ ರೀತಿ ಶಿಖರ್ ಧವನ್ ಗೆ ವಿಶ್ರಾಂತಿ ನೀಡಿ ಮಯಾಂಕ್ ಅಗರ್ ವಾಲ್ ಆಡುವ ತಂಡದಲ್ಲಿ ಕಾಣಿಸಿಕೊಂಡ್ರೂ ಅಚ್ಚರಿ ಇಲ್ಲ. ಇನ್ನುಳಿದಂತೆ ಬೌಲಿಂಗ್ ವಿಭಾಗದಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿಲ್ಲ.
ಮತ್ತೊಂದೆಡೆ ಆಸ್ಟ್ರೇಲಿಯಾ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಗಳಾಗಿರುವ ಅಲೆಕ್ಸ್ ಕಾರೆ ಬದಲು ಡಿ ಆರ್ಸಿ ತಂಡವನ್ನು ಸೇರಿಕೊಳ್ಳಬಹುದು.
ಆಸ್ಟ್ರೇಲಿಯಾ ತಂಡ – ಮ್ಯಾಥ್ಯೂ ವಾಡೆ (ನಾಯಕ ವಿಕೆಟ್ ಕೀಪರ್), ಡಿ ಆರ್ಸಿ/ಅಲೆಕ್ಸ್ ಕಾರೆ, ಸ್ಟೀವ್ ಸ್ಮೀತ್, ಮೋಸೆಸ್ ಹೆನ್ರಿಕ್ಸ್, ಗ್ಲೇನ್ ಮ್ಯಾಕ್ಸ್ ವೆಲ್, ಮಾರ್ಕಸ್ ಸ್ಟೋನಿಸ್, ಡೇನಿಯಲ್ ಸ್ಯಾಮ್ಸ್, ಆಂಡ್ರ್ಯೂ ಟೈ, ಮಿಟ್ಚೆಲ್ ಸ್ವೆಪ್ಸನ್, ಆಡಮ್ ಝಂಪಾ
ಟೀಮ್ ಇಂಡಿಯಾ – ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್. ರಾಹುಲ್ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್), ಶಿಖರ್ ಧವನ್/ಮಯಾಂಕ್ ಅಗರ್ ವಾಲ್, ಶ್ರೇಯಸ್ ಅಯ್ಯರ್ / ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಥಾಕೂರ್, ದೀಪಕ್ ಚಾಹರ್, ಟಿ.ನಟರಾಜನ್, ಯುಜುವೇಂದ್ರ ಚಾಹಲ್.