ಇತಿಹಾಸದಲ್ಲಿ ಕರಾಳ ವರ್ಷವಾಗಿ ಉಳಿಯಲಿದೆ 2020..! 2021 ರಲ್ಲೂ ತಪ್ಪಲ್ಲ ಸಂಕಷ್ಟ..!
2020ನೇ ವರ್ಷ ಇತಿಹಾಸದಲ್ಲೇ ಅತ್ಯಂತ ಕರಾಳ ವರ್ಷವಾಗಿ ಉಳಿಯಲಿದೆ ಅಂದ್ರೆ ತಪ್ಪಾಗೋದಿಲ್ಲ. ಈ ವರ್ಷ ಅನೇಕ ಸಿನಿಮಾ ತಾರೆಯರು , ರಾಜಕಾರಣಿಗಳು, ಬೇರೆ ಬೇರೆ ಕ್ಷೇತ್ರಗಳ ಗಣ್ಯರು ತಮ್ಮ ಜೀವನದ ಪಯಣ ಮುಗಿಸಿದ್ದಾರೆ. ಈ ವರ್ಷ ಬರೀ ಸಂತೋಷಕ್ಕಿಂತ ಹೆಚ್ಚಾಗಿ ದುಃಖವೇ ಮಡುಗಟ್ಟಿತ್ತು. ಇನ್ನೂ ಕಳೆದ ವರ್ಷ ಚೀನಾದ ವುಹಾನ್ ನಲ್ಲಿ ಜನ್ಮ ತಾಳಿದ ಮಾರಕ ಕೊರೊನಾ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಈ ವರ್ಷ ಇನ್ನೇನು ಮುಗಿಯುತ್ತ ಬಂದರೂ ಕೊರೊನಾ ಆರ್ಭಟ ನಿಂತಿಲ್ಲ.
ಕೊರೊನಾ 2ನೇ ಅಲೆ ಮುಚ್ಚಿಟ್ಟುಕೊಂಡ್ರೆ ದೊಡ್ಡ ಅನಾಹುತ: ಸರ್ಕಾರಕ್ಕೆ ಹೆಚ್.ಕೆ ಪಾಟೀಲ್ ವಾರ್ನ್..!
ಕೊರೊನಾ ರೌದ್ರನರ್ತನಕ್ಕೆ ಇಡೀ ವಿಶ್ವವೇ ತತ್ತರಿಸಿಹೋಗಿದೆ. ವಿಶ್ವದ ದೊಡ್ಡಣ್ಣ ಅಮೆರಿಕಾ, ಬ್ರೆಜಿಲ್, ರಷ್ಯಾ, ಇಟಲಿ, ಸೌತ್ ಕೊರಿಯಾ, ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಹೆಮ್ಮಾರಿಯ ಹೊಡೆತದಿಂದ ಇವರೆಗೂ ಸುಧಾರಿಸಿಕೊಳ್ಳಲಾಗುತ್ತಿಲ್ಲ. ಇತ್ತ ಕೊರೊನಾ ಆರ್ಭಟಕ್ಕೆ ಬ್ರೇಕ್ ಹಾಕಲು ಬಹುತೇಕ ವಿಶ್ವಾದ್ಯಾಂತ ಎಲ್ಲಾ ರಾಷ್ಟ್ರಗಳಲ್ಲೂ ಲಾಕ್ ಡೌನ್ ಹೇರಲಾಗಿತ್ತು. ಭಾರತದಲ್ಲೂ ತಿಂಗಳಾನುಗಟ್ಟಲೆ ಲಾಕ್ ಡೌನ್ ಜಾರಿ ಮಾಡಲಾಗಿತ್ತು ಪರಿಣಾಮ ಬಡಬಗ್ಗರು, ದಿನಗೂಲಿ ನೌಕರರು, ವಲಸೆ ಕಾರ್ಮಿಕರು ಪಡಬಾರದ ಕಷ್ಟ ಪಟ್ಟರು. ಬಹುತೇಕ ಎಲ್ಲಾ ಉದ್ಯಮಗಳು ನೆಲಕಚ್ಚಿದ್ವು. ಎಷ್ಟೋ ವ್ಯಾಪಾರ ವಹಿವಾಟುಗಳು ನಿಂತು ಹೋದ್ವು. ಅನೇಕ ಉದ್ಯಮಗಳು ನಷ್ಟ ಅನುಭವಿಸಿ ಮುಚ್ಚುವ ಹಂತ ತಲುಪಿದ್ವು. ಇತ್ತ ಅನೇಕರು ನಿರುದ್ಯೋಗಿಗಳಾಗಿ ಬೀದಿಗೆ ಬೀಳುವಂತಾಯ್ತು. ಹೀಗೆ ಅದೆಷ್ಟೋ ಕೋಟಿ ಜನರ ಬದುಕು ಮೂರಾಬಟ್ಟೆಯಾಗಿದೆ. ಇನ್ನೂವರೆಗೂ ಚೇತರಿಸಿಕೊಳ್ಳಲು ಎಲ್ಲಾ ರಾಷ್ಟ್ರಗಳು ಒದ್ದಾಟ ನಡೆಸ್ತಿವೆ.
ಬೆಂಗಳೂರು ಟು ಕಾರ್ಕಳ.. ಇದು ಅಂಪೈರ್ ಭಟ್ರ ಕೊರೋನಾ ಜರ್ನಿ…!
ಭಾರತದಲ್ಲೀ ಕೋಟ್ಯಾಂತರ ಜನರಿಗೆ ಸೋಂಕು ತಗುಲಿತ್ತು. ಅನೇಕರು ಗುಣಮುಖರಾಗಿದ್ಧಾರೆ. ಲಕ್ಷಾಂತರ ಮಂದಿ ಜೀವ ಕಳೆದುಕೊಂಡಿದ್ದಾರೆ. ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದಿವೆ. ಹೀಗೆ ಎಲ್ಲಿ ನೋಡಿದ್ರು ಸಾವು ನೋವುಗಳೇ ಸಂಭವಿಸಿದ ಕರಾಳತೆಗೆ 2020 ನೇ ವರ್ಷ ಸಾಕ್ಷಿಯಾಗಿದೆ.
ಇನ್ನೇನು ಹೆಮ್ಮಾರಿ ಕೊರೊನಾ ಕಾಟ ಕಡಿಮೆಯಾಗ್ತಿದೆ ಅನ್ನೋವಾಗ್ಲೇ ಇಲ್ಲ ಸಲ್ಲದ ತಲೆನೋವುಗಳು ಪ್ರಾರಂಭವಾಗ್ತಿವೆ. ಹೌದು ಇತ್ತೀಚೆಗಷ್ಟೇ ಆಂಧ್ರಪ್ರದೇಶದಲ್ಲಿ ನಿಗೂಢ ಸೋಂಕು ಪತ್ತೆಯಾಗಿ ನೂರಾರು ಜನರಿಗೆ ಸೋಂಕು ತಗುಲಿತ್ತು. ಬೆರಳೆಣಿಕೆಯಷ್ಟು ಮಂದಿ ಜೀವವನ್ನೂ ಕಳೆದುಕೊಳ್ಳಬೇಕಾಯ್ತು. ಇನ್ನೇನು ಅದರಿಂದಲೂ ಚೇತರಿಸಿಕೊಳ್ಳೋ ಸಮಯದಲ್ಲಿ ಕೇರಳದಲ್ಲಿ ಮತ್ತೊಂದು ಬ್ಯಾಕ್ಟೀರಿಯಾದ ಸಮಸ್ಯೆ ಶುರುವಾಯ್ತು.
ಕೊರೊನಾ ಕಾಟದ ನಡುವೆ ಮತ್ತೊಂದು ಸಂಕಷ್ಟ : ಮೆದುಳು ತಿನ್ನುವ ಅಮೀಬಾ.!
ಕೇರಳದಲ್ಲಿ ಶಿಗ್ಗಿಲ್ಲಾ ಎಂಬ ಬ್ಯಾಕ್ಟೀರಿಯಾ ಸೋಂಕು ಹತ್ತಾರು ಜನರಿಗೆ ಕಾಣಿಸಿಕೊಂಡಿದೆ. ಈಗಾಗಲೇ ಈ ಬ್ಯಾಕ್ಟೀರಿಯಾದಿಂದ 11 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಇದು ಒಂದೆಡೆ ಭಯ ಹುಟ್ಟಿಸಿದೆ. ಮತ್ತೊಂದೆಡೆ ಕೊರೊನಾ ಹೊಸ ಸ್ವರೂಪ ತಾಳಿದೆ. ಬ್ರಿಟನ್ ನಲ್ಲಿ ಹೊಸ ಮಾದರಿಯ ಕೊರೊನಾ ಸೋಂಕು ಪತ್ತೆಯಾಗಿ ವೇಗವಾಗಿ ಹಬ್ಬತ್ತಿದೆ. ಇದೀಗ ಭಾರತ, ಇಟಲಿ ಸೇರಿದಂತೆ ಅನೇಕ ರಾಷ್ಟ್ರಗಳಿಗೂ ಈ ಮಹಾಮಾರಿ ಹಬ್ಬಿದೆ. ಬಾರತದಲ್ಲೂ ಬ್ರಿಟನ್ ನಿಂದ ಬಂದ ಸುಮಾರು 10 ಜನರಲ್ಲಿ ಈ ಹೊಸ ಕೊರೊನಾ ಸೋಂಕು ಕಾಣಿಸಿಕೊಂಡಿರೋದು ನಜಕ್ಕೂ ಗಾಯದ ಮೇಲೆ ಬರೆ ಎಳೆದಂತಾಗಿದೆ.
ದೇಶದಲ್ಲೂ ಕೊರೊನಾ ಹೊಸ ತಳಿ ಪತ್ತೆ: ಕೇಂದ್ರದಿಂದ ಕೋವಿಡ್ ಮಾರ್ಗಸೂಚಿ ರಿಲೀಸ್..!
ಇತ್ತ ಭಾರತ ಹಾಗೂ ರಾಜ್ಯದಲ್ಲಿ ಶಾಲಾ ಕಾಲೇಜುಗಳು ಬಂದ್ ಆಗಿ ಹತ್ತಿರ ಹತ್ತಿರ ಒಂದು ವರ್ಷವೇ ಆಗುತ್ತಾ ಬಂದಿದೆ. ಈವರೆಗೂ ಶಾಲೆಗಳ ತೆರೆಯಲು ಸರ್ಕಾರ ಧೈರ್ಯ ಮಾಡ್ತಿಲ್ಲ. ಇತ್ತ ಆನ್ ಲೈನ್ ಕ್ಲಾಸ್ ಗಳು ನಡೆಯುತ್ತಿವೆ. ಆದ್ರೆ ಅದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಅನ್ನೋ ಪ್ರಶ್ನೆ ಪೋಷಕರದ್ದು. ಇತ್ತ ರಾಜ್ಯ ಸರ್ಕಾರ ಶಾಲೆಗಳನ್ನ ತೆರೆಯುವ ಧೈರ್ಯ ಮಾಡಿ ಶೀಘ್ರವೇ ನಿರ್ಧಾರ ಮಾಡಲು ಮುಂದಾಗಿತ್ತು. ಆದ್ರೆ ಕೊರೊನಾ ಎರಡನೇ ಅಲೆಯ ಭೀತಿಗೆ ಸದ್ಯಕ್ಕಂತು ಶಾಲೆಗಳನ್ನ ತೆರೆಯೋದು ಬಹುತೇಕ ಅನುಮಾನವೇ. ಆದ್ರೆ ಇದರಿಂದ ತೊಂದರೆ ಅನುಭವಿಸುತ್ತಿರೋದು ವಿದ್ಯಾರ್ಥಿಗಳು ಹಾಗೂ ಅತಿಥಿ ಉಪನ್ಯಾಸಕರು, ಖಾಸಗಿ ಶಾಲೆಗಳ ಶಿಕ್ಷಕರು.
ಕೊರೊನಾ ನಿಯಮಾಗಳು ‘ಸಿನಿಮಾ ತಾರೆಯರಿಗೆ’ ಅನ್ವಯಿಸಲ್ವಾ..?
ಹೀಗೆ 2020 ಮುಗಿಯುತ್ತಾ ಬಂದರೂ ಒಂದಾದ ಮೇಲೊಂದು ಸಂಕಷ್ಟ ಎದುರಾಗರ್ತಲೇ ಇದೆ. 2021ನೇ ವರ್ಷದಲ್ಲಿ ಮಹಾಮಾರಿ ಆರ್ಭಟ ಕಡಿಮೆಯಾಗಿ ಜೀವನ ಸುಧಾರಿಸುತ್ತೆ . ನೆಮ್ಮದಿಯಾಗಿರಬಹುದು ಎಂದುಕೊಂಡಿದ್ದ ಜನರಿಗೆ ಮತ್ತೆ ಆಗಾತ ಎದುರಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








