ಇತ್ತೀಚಿಗೆ “ಅಮೃತ್ ಅಪಾರ್ಟ್ಮೆನಟ್ಸ್” ತಂಡದ ತಂತ್ರಜ್ಞರಿರೆಲ್ಲಾ ಸೇರಿ ಚಿತ್ರವನ್ನು ಸಿನೆಮಾ ಮಂದಿರದಲ್ಲಿ ವೀಕ್ಷಿಸಿದರು. ತಾವು ಪ್ರತ್ಯೇಕವಾಗಿ ಮಾಡಿದ ತಮ್ಮ ವಿಭಾಗದ ಕೆಲಸವನ್ನು ಇಡೀ ಚಿತ್ರದ ಜೊತೆ ಒಟ್ಟಾರೆಯಾಗಿ ನೋಡಿದರು.
ಒಂದು ಸಿನೆಮಾಗೆ ಕೆಲಸ ಮಾಡಿದ ತಂತ್ರಜ್ಞರೆಲ್ಲಾ ಒಟ್ಟಾಗಿ ಸೇರಿ ಸಿನೆಮಾ ನೋಡುತ್ತ ಪೊಪ್ಕಾರ್ನ್ ಮೆಲ್ಲುತ್ತ, ಪೆಪ್ಸಿ ಹೀರುತ್ತ ಒಂದೇ ಚಿತ್ರ ಮಂದಿರದಲ್ಲಿ ಕೂತು ನೋಡುವ ಅನುಭವ ಮಜವಾಗಿತ್ತು. ಆಗಾಗ ಸಿಳ್ಳೆ ಚಪ್ಪಾಳೆಗಳ ಮೂಲಕ ಒಬ್ಬರೊಬ್ಬರ ಕೆಲಸವನ್ನು ಆನಂದಿಸಿ, ಅಭಿನಂದಿಸುತ್ತಿದ್ದರು.
ಕರೋನಾದ ಹೊಡೆತಕ್ಕೆ ಸಿಕ್ಕು ಹಲವಾರು ತಿಂಗಳುಗಳಿಂದ ಒತ್ತಡದಲ್ಲಿದ್ದ ತಂತ್ರಜ್ಞರೆಲ್ಲಾ ತಮ್ಮ ಸಹೋದ್ಯೋಗಿಗಳನ್ನು ಮುಖತಃ ಭೇಟಿಯಾಗುವ ಸಂತಸದ ಜೊತೆಗೆ ತಾವು ಕೆಲಸ ಮಾಡಿದ ಸಿನೆಮಾ ತೆರೆಯ ಮೇಲೆ ಸೊಗಸಾಗಿ ಮೂಡಿಬಂದದ್ದನ್ನು ನೋಡಿ ಎಲ್ಲರ ಖುಷಿ ಇನ್ನು ಹೆಚ್ಚಾಯಿತು.
ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು..!
ಇತ್ತೀಚಿಗೆ ತನ್ನ ಡಿ.ಓ.ಪಿ ಕೆಲಸದಿಂದಲೂ ಸೌಂಡ್ ಮಾಡುತ್ತಿರುವ ಬಾಲಾಜಿ ಮನೋಹರ್ ವಿಶೇಷ ಆಹ್ವಾನಿತ ತಂತ್ರಜÐರಾಗಿ ಬಂದು “ಅಮೃತ್ ಆಪಾರ್ಟ್ಮೆಂಟ್ಸ್” ಚಿತ್ರ ತಂಡದ ಕೆಲಸವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು.
“ಅಮೃತ್ ಆಪಾರ್ಟ್ಮೆಂಟ್ಸ್” ಫ್ಯಾಮಿಲಿ ಥ್ರಿಲ್ಲರ್ ಸಿನೆಮಾ ಆಗಿದ್ದು ಕನ್ನಡ ಪ್ರೇಕ್ಷಕ ತನ್ನ ಕುಟುಂಬದ ಜೊತೆಗೆ ಕೂತು ನೋಡುವಂತಹ ಚಿತ್ರವಾಗಿದೆ. ತಾರಾಗಣದಲ್ಲಿ ತಾರಕ್ ಪೊನ್ನಪ್ಪ, ಕನ್ನಡ ಪ್ರೇಕ್ಷಕನಿಗೆ ಹೊಸದಾಗಿ ಪರಿಚಯವಾಗುತ್ತಿರುವ ಊರ್ವಶಿ ಗೋವರ್ಧನ್, ವಿಶಿಷ್ಟ ಪಾತ್ರದಲ್ಲಿ ಬಾಲಾಜಿ ಮನೋಹರ್, ಸಂಪತ್ ಕುಮಾರ್, ಮಾನಸ ಜೋಶಿ ಮತ್ತು ಸೀತ ಕೋಟೆ ಮೊದಲಾದವರಿದ್ದಾರೆ. ಗುರುರಾಜ ಕುಲಕರ್ಣಿ (ನಾಡಗೌಡ) ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. ಕ್ಯಾಮರ – ಅರ್ಜುನ್ ಅಜಿತ್, ಸಂಕಲನ – ಬಿ.ಎಸ್. ಕೆಂಪರಾಜು, ಗೀತೆಗಳ ಸಂಗೀತ – ಎಸ್.ಡಿ. ಅರವಿಂದ, ಹಿನ್ನೆಲೆ ಸಂಗೀತ – ಚೆನ್ನೈ ಮೂಲದ ಎ.ಎಂ ಷಾ, ಸೌಂಡ್ ಡಿಸೈನರ್ – ವಿ.ಜಿ. ರಾಜನ್ ಎಲ್ಲರೂ
ಆಯಾ ವಿಭಾಗದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.
– ಗುರುರಾಜ್ , ನಿರ್ಮಾಪಕ, ನಿರ್ದೇಶಕರು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








