ಶ್ರೀಲಂಕಾದ ನೌಕಾಪಡೆಯಿಂದ ರಾಮೇಶ್ವರದ 9 ಮೀನುಗಾರರ ಬಂಧನ
ಶ್ರೀಲಂಕಾ : ಅಂತರರಾಷ್ಟ್ರೀಯ ಕಡಲ ಗಡಿರೇಖೆಯನ್ನು ಅತಿಕ್ರಮಣ ಮಾಡಿದ್ದಕ್ಕಾಗಿ ರಾಮೇಶ್ವರದ 9 ಮಂದಿ ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆಯು ಬಂಧಿಸಿದೆ. ರಾಮೇಶ್ವರಂನ ಒಂಬತ್ತು ಮೀನುಗಾರರನ್ನು ಕಚ್ಚಾಹೀವು ಬಳಿ ಶ್ರೀಲಂಕಾ ನೌಕಾಪಡೆ ಬಂಧಿಸಿದೆ. ಯಾಂತ್ರಿಕೃತ ದೋಣಿಯ ಮಾಲೀಕರಾದ ಎ ಕಿರುಬಾಯಿ, ಎಸ್ ವಾಲನ್ ಕೌಶಿಕ್ , ಮೈಕಿಯಾಸ್, ಆರ್ ಕಿಶೋರ್ , ಮಾರಿ ಎ ಕೆನ್ನಿಂಗ್ಸ್ಟನ್, ಆರ್ ಸ್ಯಾಮ್ ಸ್ಟಿಲ್ಲರ್, ಎ ನಿಜಾನ್, ಬ್ರೈಟನ್ ಅವರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ.
ಭಾರತೀಯ ಸಿನಿಮಾರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸಿದ ಕೆಜಿಎಫ್ 2 ಟೀಸರ್: 100 ಮಿಲಿಯನ್ ವೀವ್ಸ್..!
ಐಎಂಬಿಎಲ್ ಅನ್ನು ಅತಿಕ್ರಮಣ ಮಾಡಿಕೊಂಡು ಕಾಟ್ಚತೀವು ಬಳಿ ಮೀನುಗಾರಿಕೆ ನಡೆಸಿದ್ದಕ್ಕಾಗಿ ರಾಮೇಶ್ವರಂನ ಮೀನುಗಾರರನ್ನು ಬಂಧಿಸಲಾಗಿದೆ. ದೋಣಿ ಸಹ ವಶಪಡಿಸಿಕೊಳ್ಳಲಾಗಿದೆ. ಕಟ್ಚತೀವು ಬಳಿ ಸುಮಾರು 20 ಯಾಂತ್ರಿಕೃತ ದೋಣಿಗಳಲ್ಲಿ ಲಂಕಾ ನೌಕಾಪಡೆಯ ಸಿಬ್ಬಂದಿ ಮೀನುಗಾರಿಕಾ ಬಲೆಗಳನ್ನು ಬೀಳಿಸಿದ್ದಾರೆಂದು ವರದಿಯಾಗಿದೆ. ಈ ಹಿನ್ನೆಲೆ ಅವರನ್ನ ಬಂಧಿಸಲಾಗಿದೆ.. ಇನ್ನೂ ಬಂಧನ ಖಂಡಿಸಿ ಮೀನುಗಾರರು ಅನಿರ್ಧಿಷ್ಟಾವದಿ ಮುಷ್ಕರ ಘೋಷಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








