ADVERTISEMENT
Wednesday, March 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಮೇರಿಕನ್‌ ಯಾತ್ರೆ-ಅಮೇರಿಕಾದ ಈ ಪುಟ್ಟ ನಗರ ವರ್ಮೌಂಟ್‌ ನಾಸ್ತಿಕರ ತವರೂರು:

Shwetha by Shwetha
January 17, 2021
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Saakshatv yatrika episode 12
Share on FacebookShare on TwitterShare on WhatsappShare on Telegram

ಅಮೇರಿಕನ್‌ ಯಾತ್ರೆ-ಅಮೇರಿಕಾದ ಈ ಪುಟ್ಟ ನಗರ ವರ್ಮೌಂಟ್‌ ನಾಸ್ತಿಕರ ತವರೂರು: Saakshatv yatrika episode 12

ನಾವು ನ್ಯೂಹ್ಯಾಂಪ್‌ಶೈರ್ ಮತ್ತು ವರ್ಮೌಂಟ್ ರಾಜ್ಯಗಳ ಪ್ರವಾಸಕ್ಕೆ ಹೋದಾಗ ನಮ್ಮ ಎರಡನೇ ದಿನದ ಪ್ರವಾಸ ಮುಗಿಸಿ ಹೋಟೇಲಿನ ಕಡೆ ತೆರಳುತ್ತಿದ್ದೆವು. ಮುಸ್ಸಂಜೆಯ ಹೊತ್ತಲ್ಲಿ ಚಿಕ್ಕದೊಂದು ಪಟ್ಟಣ ಸಿಕ್ಕಿತು. ನಮ್ಮ ತಾಳಗುಪ್ಪಾದಷ್ಟು ಚಿಕ್ಕ ಊರು. ಅಲ್ಲಿ ಒಂದು ಕಟ್ಟಡ ನೋಡ್ತಾ ಇದ್ದಹಾಗೇ ರಾಜ್ಯ ಸೌಧದ ಕಟ್ಟಡದ ಹಾಗೇ ಅನ್ನಿಸಿ ನಾವು ದಾಟಿದ್ದು ವರ್ಮೌಂಟ್ ರಾಜ್ಯದ ರಾಜಧಾನಿಯೇ ಅನ್ನುವ ಅನುಮಾನ ಬಂತು. ಸಂಜೆ ರೂಮಿಗೆ ಹೋಗಿ ಪರಿಶೀಲಿಸಿದಾಗ ಹೌದು. ನಾವು ದಾಟಿದ್ದು ಮೋಂಟ್‌ಪೀಲಿಯರ್ ಎಂಬ ಪುಟ್ಟ ರಾಜಧಾನಿಯನ್ನು. ಇದು ರಾಜಧಾನಿಗಳಲ್ಲೇ ಅತೀ ಚಿಕ್ಕ ನಗರ ಎಂಬ ಹೆಗ್ಗಳಿಕೆ ಪಡಿದಿದೆ. ಇಲ್ಲಿನ ಜನಸಂಖ್ಯೆ ಬರೀ 7000 ಚಿಲ್ಲರೆ. ಹೀಗೆ ಅನೀರೀಕ್ಷಿತವಾಗಿ ರಾಜಧಾನಿಯ ಮೂಲಕ ಹಾದು ಹೋಗಿದ್ದೆವು. Saakshatv yatrika episode 12

Related posts

anantmukhesha ambani

ವಂತಾರ ಸಂಸ್ಥಾಪನಾ ದಿನ: ಉದ್ಘಾಟನೆಯ ಒಂದು ವರ್ಷದ ನಂತರ ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ

March 4, 2026
ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

March 4, 2026

Saakshatv yatrika episode 12

ವರ್ಮೌಂಟ್ ಎಂಬ ಸುಖೀರಾಜ್ಯದ ವಿಸ್ತೀರ್ಣ ಸುಮಾರು 24000 ಚದರ ಕಿಲೋಮೀಟರುಗಳು. ಜನಸಂಖ್ಯೆ ಬರೀ 6 ಲಕ್ಷ ಚಿಲ್ಲರೆ. ಅಲ್ಲಿನ ಸೀಮಿತ ತಿರುಗಾಟದಲ್ಲಿ ಅನೇಕ ಪುಟ್ಟ ಪುಟ್ಟ ಹಳ್ಳಿಗಳೂ ಇದ್ದುದರಲ್ಲೇ ತೃಪ್ತಿಪಟ್ಟು ಖುಷಿಯಿಂದಿರುವಂತೆ ತೋರುವ ಜನರೂ ಕಂಡರು. ಮತ್ತೊಂದು ವಿಶೇಷವೇನೆಂದರೆ ಅಮೆರಿಕಾದಲ್ಲೇ ಅತೀ ಹೆಚ್ಚು ಪ್ರತಿಶತ ನಾಸ್ತಿಕರಿರುವುದು (ಅಥವಾ ಯಾವ ಧರ್ಮದೊಂದಿಗೂ ತಮ್ಮನ್ನು ಗುರುತಿಸಿಕೊಳ್ಳದ) ಈ ರಾಜ್ಯದಲ್ಲೇ. ಇಲ್ಲಿನ ಮೂರನೇ ಒಂದಕ್ಕೂ ಜಾಸ್ತಿ ಜನ ಮತರಹಿತರು. ಇಲ್ಲಿ ನನಗೆ ಶ್ರೀಮಂತಿಕೆ ಕಾಣದಿದ್ದರೂ ತೃಪ್ತಿ ಕಂಡಿತು. ಅಮೆರಿಕಾವೆನ್ನುವ ಅಪ್ಪಟ ಬಂಡವಾಳಶಾಹಿ ದೇಶದಲ್ಲಿ ಸಮಾಜವಾದ ಇನ್ನೂ ಜೀವಂತವಾಗಿರುವ ಕೆಲವೇ ಪ್ರದೇಶಗಳಲ್ಲಿ ಇದೂ ಒಂದು.

Saakshatv yatrika episode 12

ಡೆಮಾಕ್ರಟಿಕ್‌ ಪಕ್ಷದಿಂದ ಅಧ್ಯಕ್ಷಯೀಯ ಚುನಾವಣೆಗೆ ಅಭ್ಯರ್ಥಿಯಾಗಲು ಸಿದ್ಧರಾಗಿ ಕೊನೆಗೆ ಬಿಡೆನ್ ಅವರಿಂದ ಸೋಲಲ್ಪಟ್ಟ ಸ್ಯಾಂಡರ್ಸ್ ಇದೇ ರಾಜ್ಯದವರು.

ಈ ರಾಜ್ಯ ಮೇಪಲ್ ಸಿರಪ್ಪಿಗೂ ಬಹಳ ಪ್ರಸಿದ್ಧ. ಅಂದರೆ ಮೇಪಲ್ ಮರದಿಂದ ಒಸರುವ ಸಿಹಿಯಾದ ಜೇನಿನಂತಹ ದ್ರವ. ಇದನ್ನು ಬೆಳಗಿನ ಉಪಾಹಾರಕ್ಕೆ ಪ್ಯಾನ್ ಕೇಕ್ (ದೋಸೆಯ ತಮ್ಮ) ಅಥವಾ ವಾಫಲ್ ಗೆ ಸೇರಿಸಿ ತಿನ್ನಲು ಬಹಳ ರುಚಿಕರ. ನಮ್ಮಕಡೆ ತೆಳ್ಳೇವು (ಮಲೆನಾಡ ಶೈಲಿಯ ದೋಸೆ) ಮತ್ತು ಜೋನಿಬೆಲ್ಲದ ಕಾಂಬಿನೇಶನ್ ಇದ್ದಂತೆ.

Saakshatv yatrika episode 12

ಅಗಾಧ ಅರಣ್ಯ ಪ್ರದೇಶಗಳ ಹೊಂದಿರೋ ಈ ರಾಜ್ಯ ತನ್ನ ಪಶ್ಚಿಮದಲ್ಲಿ ಚಾಂಪ್ಲೈನ್ ಸರೋವರವನ್ನೂ ಅದರ ತೀರದಲ್ಲಿ ಸಂಪದ್ಭರಿತ ಕೃಷಿ ಭೂಮಿಯನ್ನೂ ಹೊಂದಿದೆ. ಅದರಾಚೆಗೆ ನ್ಯೂಯಾರ್ಕ್ ರಾಜ್ಯ ಬರುತ್ತದೆ. ಹಾಗೇ ಉತ್ತರದ ಭಾಗದಲ್ಲಿ ಕೆನಡಾವನ್ನೂ, ಪೂರ್ವದಲ್ಲಿ ನ್ಯೂ ಹ್ಯಾಂಪ್‌ಶೈರ್ ರಾಜ್ಯವನ್ನೂ, ದಕ್ಷಿಣದಲ್ಲಿ ಮ್ಯಾಸಚೂಸೆಟ್ಸ್ ರಾಜ್ಯವನ್ನು ಗಡಿಗಳಾಗಿ ಹೊಂದಿದೆ. ಈ ಪುಟ್ಟ ರಾಜ್ಯದ ಬಗ್ಗೆ ಹೇಳಲು ನನ್ನಲ್ಲಿ ಇನ್ನೇನೂ ಉಳಿದಿಲ್ಲ ನಿಮಗೆ ಅಮೆರಿಕಾದ ಪೂರ್ವ ಕರಾವಳಿಗೆ ಭೇಟಿಕೊಡುವ ಅಥವಾ ನೆಲೆಸುವ ಅವಕಾಶ ಸಿಕ್ಕರೆ ಖಂಡಿತಾ ಇಲ್ಲಿಗೊಮ್ಮೆ ಭೇಟಿ ಕೊಡಿ.

–ಗಿರಿಧರ್‌ ಭಟ್‌ ಗುಂಜಗೋಡು
ಸಾಫ್ಟ್‌ ವೇರ್‌ ಉದ್ಯೋಗಿ ಮತ್ತು ಹವ್ಯಾಸಿ ಬರಹಗಾರ
ಸಿದ್ದಾಪುರ

 

ಯಾತ್ರಿಕ – ಅಂಕಣಕಾರ ಗಿರಿಧರ್ ಭಟ್ ಗುಂಜಗೋಡು ಅವರ ಕಿರು ಪರಿಚಯ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: Saakshatv yatrikaSaakshatv yatrika episodeSaakshatv yatrika episode 12
ShareTweetSendShare
Join us on:

Related Posts

anantmukhesha ambani

ವಂತಾರ ಸಂಸ್ಥಾಪನಾ ದಿನ: ಉದ್ಘಾಟನೆಯ ಒಂದು ವರ್ಷದ ನಂತರ ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ

by admin
March 4, 2026
0

ಜಾಮ್‌ನಗರ - ಪ್ರಧಾನಿ ನರೇಂದ್ರ ಮೋದಿ ಅವರು 'ವಂತಾರ'ವನ್ನು ಉದ್ಘಾಟಿಸಿ, ಒಂದು ವರ್ಷ ಕಳೆದಿದ್ದು ಈ ಒಂದು ವರ್ಷದಲ್ಲಿ ವನ್ಯಜೀವಿ ರಕ್ಷಣೆ, ಸುಧಾರಿತ ವೈದ್ಯಕೀಯ ಆರೈಕೆ ಮತ್ತು...

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

by Shwetha
March 4, 2026
0

ಉಪ ಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಕಮಿಟಿ (KPCC) ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಅವರು ಆ ಹುದ್ದೆಯಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ...

ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

by Shwetha
March 4, 2026
0

ಇರಾನ್–ಇಸ್ರೇಲ್ ನಡುವಿನ ಸಂಘರ್ಷ ಜಾಗತಿಕ ವ್ಯಾಪಾರಕ್ಕೆ ಧಕ್ಕೆಯೊಡ್ಡುತ್ತಿರುವ ಹಿನ್ನೆಲೆ, ಅದರ ಪರಿಣಾಮ ಬೆಂಗಳೂರಿನ ಮಾರುಕಟ್ಟೆಯ ಮೇಲೂ ಬೀರುವ ಸಾಧ್ಯತೆ ಇದೆ ಎಂದು ಸ್ಥಳೀಯ ವ್ಯಾಪಾರಿಗಳು ಹೇಳುತ್ತಿದ್ದಾರೆ. ವಿಶೇಷವಾಗಿ...

ಅಧಿಕಾರ ಹಸ್ತಾಂತರದ ಸುಳಿವು ನೀಡಿದ್ರಾ ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಇರ್ತಾರೆ ಎಂದ ಮಾತುಗಳ ಹಿಂದಿನ ಮರ್ಮವೇನು

ಅಧಿಕಾರ ಹಸ್ತಾಂತರದ ಸುಳಿವು ನೀಡಿದ್ರಾ ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಇರ್ತಾರೆ ಎಂದ ಮಾತುಗಳ ಹಿಂದಿನ ಮರ್ಮವೇನು

by Shwetha
March 4, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ರಣರೋಚಕ ಚರ್ಚೆ ಶುರುವಾಗಿದೆ. ರಾಜ್ಯ ಬಜೆಟ್ ಮಂಡನೆ ಯಶಸ್ವಿಯಾಗಿ ಮುಗಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಡಿಸಿರುವ ಪತ್ರಿಕಾ ಪ್ರಕಟಣೆ...

ದರ್ಶನ್ ಕೇಸ್‌ನಲ್ಲಿ ಪೊಲೀಸರ ಎಡವಟ್ಟು ಬಯಲು ಕೋರ್ಟ್ ಅಂಗಳದಲ್ಲಿ ತನಿಖಾಧಿಕಾರಿಗಳ ವಿರುದ್ಧ ಸಿಡಿದೆದ್ದ ಜಡ್ಜ್

ದರ್ಶನ್ ಕೇಸ್‌ನಲ್ಲಿ ಪೊಲೀಸರ ಎಡವಟ್ಟು ಬಯಲು ಕೋರ್ಟ್ ಅಂಗಳದಲ್ಲಿ ತನಿಖಾಧಿಕಾರಿಗಳ ವಿರುದ್ಧ ಸಿಡಿದೆದ್ದ ಜಡ್ಜ್

by Shwetha
March 4, 2026
0

ರಾಜ್ಯವನ್ನೇ ಬೆಚ್ಚಿಬೀಳಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರಬೀಳುತ್ತಿದೆ. ಇದೀಗ ಹೈ ಪ್ರೊಫೈಲ್ ಆರೋಪಿ ದರ್ಶನ್ ತೂಗುದೀಪ ಮತ್ತು ಗ್ಯಾಂಗ್ ವಿರುದ್ಧದ ತನಿಖೆಯಲ್ಲಿ ಪೊಲೀಸರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram