ಹೈದರಾಬಾದ್: ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರೆಲ್ಲರೂ ಹುತಾತ್ಮರು ಎಂದು ಸಂಸದ ಹಾಗೂ ಎಐಎಮ್ ಐಎಮ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ತೆಲಂಗಾಣದಲ್ಲಿ ಕೊರೊನಾಗೆ ಸಾವನ್ನಪ್ಪಿದ 9 ಜನರ ಅಂತ್ಯಕ್ರಿಯೆ ವೇಳೆ ಮೃತದೇಹಗಳಿಗೆ ಸ್ನಾನ ಮಾಡಿಸಲು ಹಾಗೂ ಕಫನ್ ಹೊದಿಸಲು ಬಿಟ್ಟಿರಲಿಲ್ಲ. ಮೃತದೇಹವನ್ನು ಮುಟ್ಟಲು, ಆಲಿಂಗಿಸಲು ಹಾಗೂ ಚುಂಬಿಸಲು ಕೂಡ ಅವಕಾಶ ನೀಡಲಾಗಿರಲಿಲ್ಲ. ಕೇಂದ್ರ ಆರೋಗ್ಯ ಸಚಿವಾಲಯದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿತ್ತು. ಈ ಬಗ್ಗೆ ಓವೈಸಿ ಟ್ವೀಟ್ ಮಾಡಿದ್ದು, ಯಾವ ವ್ಯಕ್ತಿಯ ಸಾವು ಸೋಂಕಿನಿಂದ ಆಗುತ್ತದೆಯೋ ಆ ವ್ಯಕ್ತಿ ಹುತಾತ್ಮನಾಗುತ್ತಾನೆ ಎಂದು ಇಸ್ಲಾಂನಲ್ಲಿ ಇದೆ. ಹೀಗೆ ಹುತಾತ್ಮರಾದವರಿಗೆ ಯಾವುದೇ ಕಫನ್ ಆಗಲಿ ಅಥವಾ ಸ್ನಾನದ ಅವಶ್ಯಕತೆಯಿಲ್ಲ. ಕೆಲವೇ ಕೆಲವು ಜನರು ಅಂತ್ಯಕ್ರಿಯೆಗೆ ಹೋದರೆ ಸಾಕು ಎಂದಿದ್ದಾರೆ.
ಹಳೆಯ ಬಟ್ಟೆಗಳನ್ನು ನೆಲ ಒರೆಸಲು ಬಳಸುತ್ತಿದ್ದೀರಾ? ಈ ಸಮಸ್ಯೆ ತಪ್ಪಿದ್ದಲ್ಲ!
ಹಳೆಯ ಬಟ್ಟೆಗಳನ್ನು ನೆಲ ಒರೆಸಲು ಬಳಸುತ್ತಿದ್ದೀರಾ? ಈ ಸಮಸ್ಯೆ ತಪ್ಪಿದ್ದಲ್ಲ! ಸಾಮಾನ್ಯವಾಗಿ ಸಾಕಷ್ಟು ಮನೆಗಳಲ್ಲಿ ಮನೆ ಒರೆಸಲು ಹಳೆಯ ಬಟ್ಟೆಗಳನ್ನು ಬಳಸುತ್ತಾರೆ. ಆದರೆ ಈರೀತಿಯ ಅಭ್ಯಾಸ ತಪ್ಪು...








