ಹೈದರಾಬಾದ್: ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರೆಲ್ಲರೂ ಹುತಾತ್ಮರು ಎಂದು ಸಂಸದ ಹಾಗೂ ಎಐಎಮ್ ಐಎಮ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ತೆಲಂಗಾಣದಲ್ಲಿ ಕೊರೊನಾಗೆ ಸಾವನ್ನಪ್ಪಿದ 9 ಜನರ ಅಂತ್ಯಕ್ರಿಯೆ ವೇಳೆ ಮೃತದೇಹಗಳಿಗೆ ಸ್ನಾನ ಮಾಡಿಸಲು ಹಾಗೂ ಕಫನ್ ಹೊದಿಸಲು ಬಿಟ್ಟಿರಲಿಲ್ಲ. ಮೃತದೇಹವನ್ನು ಮುಟ್ಟಲು, ಆಲಿಂಗಿಸಲು ಹಾಗೂ ಚುಂಬಿಸಲು ಕೂಡ ಅವಕಾಶ ನೀಡಲಾಗಿರಲಿಲ್ಲ. ಕೇಂದ್ರ ಆರೋಗ್ಯ ಸಚಿವಾಲಯದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿತ್ತು. ಈ ಬಗ್ಗೆ ಓವೈಸಿ ಟ್ವೀಟ್ ಮಾಡಿದ್ದು, ಯಾವ ವ್ಯಕ್ತಿಯ ಸಾವು ಸೋಂಕಿನಿಂದ ಆಗುತ್ತದೆಯೋ ಆ ವ್ಯಕ್ತಿ ಹುತಾತ್ಮನಾಗುತ್ತಾನೆ ಎಂದು ಇಸ್ಲಾಂನಲ್ಲಿ ಇದೆ. ಹೀಗೆ ಹುತಾತ್ಮರಾದವರಿಗೆ ಯಾವುದೇ ಕಫನ್ ಆಗಲಿ ಅಥವಾ ಸ್ನಾನದ ಅವಶ್ಯಕತೆಯಿಲ್ಲ. ಕೆಲವೇ ಕೆಲವು ಜನರು ಅಂತ್ಯಕ್ರಿಯೆಗೆ ಹೋದರೆ ಸಾಕು ಎಂದಿದ್ದಾರೆ.
ಕೇಂದ್ರ ಮಾದರಿ ವೇತನ ಮತ್ತು OPS ಮರು ಜಾರಿ ಗ್ಯಾರಂಟಿ! ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ
ಬೆಂಗಳೂರು: ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಅತ್ಯಂತ ಸಂತಸದ ಸುದ್ದಿಯೊಂದು ಸಿಗುವ ಲಕ್ಷಣಗಳು ದಟ್ಟವಾಗಿವೆ. ರಾಜ್ಯ ಸರ್ಕಾರಿ ನೌಕರರು ಇನ್ನು ಮುಂದೆ ಕೇಂದ್ರ ಸರ್ಕಾರದ ಮಾದರಿಯಲ್ಲಿ...








