ADVERTISEMENT
Wednesday, May 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮ್ಯಾಕ್ಸ್ ವೆಲ್, ಸ್ಟಾರ್ಕ್, ಜೆಮಿಸನ್ ಮೇಲೆ ಆರ್ ಸಿಬಿ ಕಣ್ಣು..!

admin by admin
January 28, 2021
in Newsbeat, Sports, ಕ್ರೀಡೆ
ipl-2022-rcb-break-bank-rope-jason-holder saaksha tv
Share on FacebookShare on TwitterShare on WhatsappShare on Telegram

ಮ್ಯಾಕ್ಸ್ ವೆಲ್, ಸ್ಟಾರ್ಕ್, ಜೆಮಿಸನ್ ಮೇಲೆ ಆರ್ ಸಿಬಿ ಕಣ್ಣು..!

ನಾವು ಈಗಾಗಲೇ ಐಪಿಎಲ್ ತಂಡಗಳ ರಿಟೈನ್ – ರಿಲೀಸ್ ಮಾಡಿದ ಆಟಗಾರರ ಪಟ್ಟಿಯನ್ನ ನೋಡಿಬಿಟ್ಟಿದ್ದೀವಿ. ಅಚ್ಚರಿ ಎಂಬಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೋಬ್ಬರಿ 10 ಆಟಗಾರರನ್ನು ತಂಡದಿಂದ ರಿಲೀಸ್ ಮಾಡಿದೆ. ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಯಾಕೆಂದ್ರೆ 2020ರ ಐಪಿಎಲ್ ಸೀನನ್ ನಲ್ಲಿ ಆರ್ ಬಿಸಿ ಉತ್ತಮವಾದ ಪ್ರದರ್ಶನವನ್ನೇ ನೀಡಿದೆ. ಮೂರು ವರ್ಷಗಳ ಬಳಿಕ ಪ್ಲೇ ಅಪ್ ಗೂ ಕೂಡ ಎಂಟ್ರಿ ಕೊಟ್ಟಿತ್ತು. ಟೂರ್ನಿ ಆರಂಭದಲ್ಲಿ ಕಪ್ ಗೆಲ್ಲುವ ಸೂಚನೆಯನ್ನೂ ಕೂಡ ಕೊಡ್ತು. ಆದ್ರೆ ಟೂರ್ನಿಯ ದ್ವಿತಿಯಾರ್ಧದಲ್ಲಿ ಬರೊಬ್ಬರಿ ಐದು ಪಂದ್ಯಗಳನ್ನ ಸೋತರೂ ಒಟ್ಟಾರೆ 2020 ಆರ್ ಸಿಬಿಗೆ ಒಳ್ಳೆ ಸೀಸನ್ ಆಗಿತ್ತು.

Related posts

ತುಮಕೂರು 2ನೇ ಬೆಂಗಳೂರು ಆಗಲಿ: ಡಿಕೆ ಶಿವಕುಮಾರ್ ಬೆಂಬಲ

ತುಮಕೂರು 2ನೇ ಬೆಂಗಳೂರು ಆಗಲಿ: ಡಿಕೆ ಶಿವಕುಮಾರ್ ಬೆಂಬಲ

May 20, 2026
ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯಬೇಡಿ: ಇಂಧನ ದರ ಏರಿಕೆ ವಿರುದ್ಧ ಸಿಎಂ ಗುಡುಗು ; ಪ್ರಧಾನಿ ಮೋದಿ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

ದೇಶದ ಬೆಲೆ ಏರಿಕೆಗೆ ಮೋದಿ ಸರ್ಕಾರವೇ ಕಾರಣ: ಸಿದ್ದರಾಮಯ್ಯ

May 20, 2026

ಆದರೂ ಕೂಡ 10 ಮಂದಿ ಆಟಗಾರರನ್ನು ಬಿಟ್ಟುಕೊಟ್ಟಿದೆ ಅಂದ್ರೆ, ಎಲ್ಲೋ ಒಂದು ಕಡೆ ಟೀಂ ಮ್ಯಾನೆಜ್ ಮೆಂಟ್, ತಂಡಕ್ಕೆ ಹೊಸ ಲುಕ್ ಕೊಡಲು ಪ್ರಯತ್ನ ಮಾಡಿದಂತಿದೆ.

ಹಾಗಾದ್ರೆ ಹೊಸ ಲುಕ್ ಕೊಡಲು ಏನು ಮಾಡ್ಬೇಕು..?

ಸದ್ಯದ ಮಾಹಿತಿ ಪ್ರಕಾರ ಆರ್ ಸಿಬಿ 13 ಆಟಗಾರರನ್ನ ಖರೀದಿ ಮಾಡಬಹುದು. ನಾಲ್ಕು ವಿದೇಶಿ ಆಟಗಾರರನ್ನೂ ಸೇರಿಸಿ. ಆದ್ರೆ ಈಗಾಗಲೇ ಟ್ರೆಡಿಂಗ್ ರೂಪದಲ್ಲಿ ಆರ್ ಸಿಬಿ ತಂಡ, ಆಸ್ಟ್ರೇಲಿಯಾದ ಎಡಗೈ ವೇಗಿ ಡೇನಿಯಲ್ ಸೆಮ್ಸ್, ಮತ್ತು ವೇಗದ ಬೌಲಿಂಗ್ ಜೊತೆ ಬ್ಯಾಟಿಂಗ್ ಕೂಡ ಮಾಡಬಲ್ಲ ಹರ್ಷಲ್ ಪಟೇಲ್ ಅವರನ್ನ ಟ್ರೆಡಿಂಗ್ ರೂಪದಲ್ಲಿ ಡೆಲ್ಲಿಯಿಂದ ತೆಗೆದುಕೊಂಡಿದ್ದಾರೆ. ಹೀಗಾಗಿ ಇನ್ನ 11 ಮಂದಿ ಆಟಗಾರರನ್ನ ಮಾತ್ರ ಖರೀದಿ ಮಾಡಬಹುದು.

RCB
ಈ 11 ಮಂದಿ ಆಟಗಾರರಲ್ಲಿ 3 ವಿದೇಶಿ ಆಟಗಾರರನ್ನು ಖರೀದಿ ಮಾಡಬೇಕು. ಇದ್ರಲ್ಲಿ ಹೆಚ್ಚು ಜಾಗ್ರತೆ ವಹಿಸಿಬೇಕು. ಯಾಕೆಂದ್ರ ಸದ್ಯ ಆರ್ ಸಿಬಿ ಟೀಂನಲ್ಲಿ ಐದು ಮಂದಿ ವಿದೇಶಿ ಆಟಗಾರರಿದ್ದಾರೆ. ಇದರಲ್ಲಿ ಎಬಿಡಿ ವಿಲಿಯರ್ಸ್ ಮಾತ್ರ ಆಡುವ ಹನ್ನೊಂದರಲ್ಲಿ ಇರ್ತಾರೆ. ಇನ್ನುಳಿದಂತೆ ನಾಲ್ವರು ( ಪಿಲಿಪ್, ಜಂಪಾ, ರಿಚರ್ಡ್ ಸನ್, ಸ್ಯಾಮ್ ಸನ್) ವಿದೇಶ ಆಟಗಾರರ ಪೈಕಿ ಇಂತಹವರು ಖಂಡಿತವಾಗಿ ತಂಡದಲ್ಲಿ ಆಡೇ ಆಡ್ತಾರೆ ಅನ್ನೋ ಪ್ಲೇಯರ್ ಗಳಿಲ್ಲ. ಹೀಗಾಗಿ ಹರಾಜು ಪ್ರಕ್ರಿಯೆಯಲ್ಲಿ ಬಹಳ ಜಾಗ್ರತೆ ವಹಿಸಿ, ಖಂಡಿತವಾಗಿ ಆಡುವ ಹನ್ನೊಂದರಲ್ಲಿ ಬರುವ ಆಟಗಾರರನ್ನು ಖರೀದಿ ಮಾಡಬೇಕು. ಅಂದಹಾಗೆ ಆರ್ ಸಿಬಿ ಬಳಿ ಸದ್ಯ 35 ಕೋಟಿ ಇದೆ.

ಮೊದಲು ಬ್ಯಾಟಿಂಗ್ ವಿಚಾರಕ್ಕೆ ಬಂದ್ರೆ ಕಳೆದ ಕೆಲ ಸೀಸನ್ ಗಳಿಂದ ಆರ್ ಸಿಬಿಗೆ ಬ್ಯಾಟಿಂಗ್ ವಿಭಾಗ ತಲೆನೋವಾಗಿತ್ತು. ಮುಖ್ಯವಾಗಿ ಕೆಳಕ್ರಮಾಂಕದಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ಕೊಹ್ಲಿ, ಎಬಿಡಿ ಬಿಟ್ಟರೇ ಉಳಿದ ಬ್ಯಾಟ್ಸ್ ಮೆನ್ ಗಳು ನಿರೀಕ್ಷೆಗಳನ್ನ ಉಳಿಸಿಕೊಂಡಿಲ್ಲ. ಮೂರನೇ ಬ್ಯಾಟ್ಸ್ ಮೆನ್ ಆಗಿ ವಿರಾಟ್ ಬಂದ್ರೆ, ನಾಲ್ಕನೇ ಸ್ಥಾನದಲ್ಲಿ ಎಬಿಡಿ ಕ್ರೀಸ್ ಗೆ ಬರ್ತಾರೆ. ಇದಾದ ಬಳಿಕ ತಂಡದಲ್ಲಿ ಐದು ಮತ್ತು ಆರನೇ ಸ್ಥಾನವನ್ನ ತುಂಬುವ ಆಟಗಾರನ ಕೊರತೆ ಇದೆ. ಇದೇ ಕಾರಣಕ್ಕೆ ಕಳೆದ ಸೀಸನ್ ನಲ್ಲಿ ವಿರಾಟ್ – ಎಬಿಡಿ ನಿಧಾನಗತಿ ಬ್ಯಾಟಿಂಗ್ ಗೆ ಮೊರೆ ಹೋಗಿದ್ದರು. ಹೀಗಾಗಿ ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಐದು ಮತ್ತು ಆರನೇ ಸ್ಥಾನವನ್ನ ತುಂಬುವಂತಹ ಆಟಗಾರನಿಗೆ ಆರ್ ಸಿಬಿ ಬಲೆ ಬೀಸಬೇಕಿದೆ.

ಸ್ಟೀವ್ ಸ್ಮಿತ್ ಗೆ ಮಣೆ..?

ಈ ಬಾರಿ ಹರಾಜಿನಲ್ಲಿ ಸ್ಟೀವ್ ಸ್ಮಿತ್ ಕೂಡ ಇರಲಿದ್ದಾರೆ. ಟೆಕ್ನಿಕಲಿ ನೋಡಿದ್ರೆ ಸ್ಮಿತ್ ಒಳ್ಳೆಯ ಬ್ಯಾಟ್ಸ್ ಮೆನ್. ಆರ್ ಸಿಬಿ ಸ್ಮಿತ್ ಗೆ ಮಣೆ ಹಾಕುತ್ತಾ, ಅಂದ್ರೆ ಸಾಧ್ಯತೆ ತುಂಬಾ ಕಡಿಮೆ ಇದೆ. ಯಾಕೆಂದ್ರೆ ಐದನೇ ಸ್ಥಾನದಲ್ಲಿ ಬಿಗ್ ಹಿಟ್ಟಿಂಗ್ ಪ್ಲೇಯರ್ ಗಳ ಅವಶ್ಯಕತೆ ಇರುತ್ತೆ. ಕೊನೆಯಲ್ಲಿ ಮೂರು ಅಥವಾ ನಾಲ್ಕು ಓವರ್ ಗಳು ಮಾತ್ರ ಬಾಕಿ ಇರುತ್ವೆ ಈ ಸಮಯದಲ್ಲಿ ದೊಡ್ಡ ಹೊಡೆತಗಳ ಅವಶ್ಯಕತೆ ಇರುತ್ತೆ. ಆದ್ರೆ ಸ್ಮಿತ್ ಬಿಗ್ ಹಿಟ್ಟಿಂಗ್ ಪ್ಲೇಯರ್ ಅಲ್ಲ.

ಗ್ಲೇನ್ ಮ್ಯಾಕ್ಸ್ ವೆಲ್ : ಸದ್ಯ ಹರಾಜಿನಲ್ಲಿ ಮ್ಯಾಕ್ಸ್ ವೆಲ್ ನತ್ತ ಆರ್ ಸಿಬಿ ಒಲವು ತೋರಿಸುವ ಸಾಧ್ಯತೆಗಳಿವೆ. ಯಾಕೆಂದ್ರೆ ಐದನೇ ಸ್ಥಾನಕ್ಕೆ ಮ್ಯಾಕ್ಸಿ ಹೇಳಿ ಮಾಡಿಸಿದ ಆಟಗಾರ. ಆದ್ರೆ ಕಳೆದ ಸೀಸನ್ ನಲ್ಲಿ ಅವರ ಪ್ರದರ್ಶನ ಹೇಳಿಕೊಳ್ಳುವ ರೀತಿ ಇರಲಿಲ್ಲ. ಆದ್ರೆ ಒಬ್ಬ ಆಪ್ ಬ್ರೇಕ್ ಸ್ಪಿನ್ನರ್ ಗಾಗಿ ಫೀಲ್ಡರ್ ಆಗಿ ಅವರು ನೀಡುವ ಪ್ರದರ್ಶನ ತಂಡಕ್ಕೆ ಉಪಯುಕ್ತವಾಗಿರುತ್ತೆ.

RCB

ಕ್ಯಾಮರನ್ ಗ್ರೀನ್ :
ಗ್ರೀನ್ ಟೆಸ್ಟ್ ನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ. ಆದ್ರೆ ಏಕದಿನ, ಟಿ 20ಯಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಆರನೇ ಬೌಲರ್ ಆಗಿ ಕೂಡ ಅವರನ್ನ ಬಳಸಿಕೊಳ್ಳಬಹುದು.

ಇಂಡಿಯನ್ಸ್ ಗೆ ಮಣೆ ಹಾಕ್ತಾರಾ..?
ವಿದೇಶಿ ಆಟಗಾರರಲ್ಲಿ ಮ್ಯಾಕ್ಸಿ ಬಿಟ್ಟರೇ ಬೇರೆ ಯಾವ ಆಟಗಾರನೂ ಬೆಟರ್ ಆಪ್ಷನ್ ಆಗಿ ಕಾಣ್ತಿಲ್ಲ. ಹೀಗಾಗಿ ಇಂಡಿಯನ್ಸ್ ಪ್ಲೇಯರ್ ಕಡೆ ಒಲವು ತೋರಿಸಿದ್ರೆ, ಮುಷ್ತಾಕ್ ಅಲಿ ಟ್ರೋಪಿಯಲ್ಲಿ ಮಿಂಚಿನ ತಮಿಳುನಾಡಿನ ಶಾರುಖ್ ಖಾನ್, ಕೇರಳದ ಅಜರುದ್ದೀನ್ ಅವರನ್ನ ಬಿಡ್ ಮಾಡಬಹುದು.

ಸಾಲಿಡ್ ಪ್ಲೇಯರ್ ಗಳತ್ತ ನೋಡೋದಾದ್ರೆ, ಕರುಣ್ ನಾಯರ್, ಕೇಧಾರ್ ಜಾದವ್ ರನ್ನ ಕೂಡ ಕನ್ಸಿಡೇರ್ ಮಾಡಬಹುದು.

ಇನ್ನು ಓಪನರ್ ವಿಚಾರಕ್ಕೆ ಬಂದ್ರೆ, ಪಿಂಚ್ ಅವರನ್ನ ಬಿಟ್ಟುಕೊಟ್ಟಿರುವುದರಿಂದ ಆರ್ ಸಿಬಿಗೆ ಆರಂಭಿಕರ ಅವಶ್ಯಕತೆ ಇದೆ. ಹೀಗಾಗಿ ಡೇವಿಡ್ ಮಲನ್, ಜೇಸನ್ ರಾಯ್ ಅವರಿಗೆ ಮಣೆ ಹಾಕುವ ಸಾಧ್ಯತೆಗಳಿವೆ.

ಬೌಲಿಂಗ್ ವಿಚಾರಕ್ಕೆ ಆರ್ ಸಿಬಿಗೆ ಡೆತ್ ಓವರ್ ಗಳಲ್ಲಿ ರನ್ ಗೆ ಕಡಿವಾಣ ಹಾಕುವ ವೇಗಿಯ ಅವಶ್ಯಕತೆ ಇದೆ. ಸಿರಾಜ್, ಸೈನಿ ಇದ್ದರೂ ಕೂಡ ಇವರ ಮೇಲೆ ಹೆಚ್ಚು ನಿರೀಕ್ಷೆಗಳಿಲ್ಲ. ಹೀಗಾಗಿ ವಿದೇಶಿ ವೇಗಿಗಳಿಗೆ ಮಣಿ ಹಾಕಬೇಕಾಗುತ್ತದೆ. ಹರಾಜಿನಲ್ಲಿ ನ್ಯೂಜಿಲೆಂಡ್ ನ ಖೈಲ್ ಜೇಮಿಸನ್, ಆಸ್ಟ್ರೇಲಿಯಾದ ಸಾರ್ಕ್ ಇದ್ದು, ಈ ಇಬ್ಬರು ವೇಗಿಗಳಿಗೆ ಆರ್ ಸಿಬಿ ಮಣೆ ಹಾಕುವ ಸಾಧ್ಯತೆಗಳಿವೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: RCBsmithstarc
ShareTweetSendShare
Join us on:

Related Posts

ತುಮಕೂರು 2ನೇ ಬೆಂಗಳೂರು ಆಗಲಿ: ಡಿಕೆ ಶಿವಕುಮಾರ್ ಬೆಂಬಲ

ತುಮಕೂರು 2ನೇ ಬೆಂಗಳೂರು ಆಗಲಿ: ಡಿಕೆ ಶಿವಕುಮಾರ್ ಬೆಂಬಲ

by Shwetha
May 20, 2026
0

ಡಿಕೆ ಶಿವಕುಮಾರ್ ಅವರು ತುಮಕೂರನ್ನು 2ನೇ ಬೆಂಗಳೂರು ಆಗಿ ಅಭಿವೃದ್ಧಿಪಡಿಸುವ ಆಲೋಚನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆ ತುಮಕೂರಿನಲ್ಲಿ ಆಯೋಜಿಸಿದ್ದ...

ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯಬೇಡಿ: ಇಂಧನ ದರ ಏರಿಕೆ ವಿರುದ್ಧ ಸಿಎಂ ಗುಡುಗು ; ಪ್ರಧಾನಿ ಮೋದಿ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

ದೇಶದ ಬೆಲೆ ಏರಿಕೆಗೆ ಮೋದಿ ಸರ್ಕಾರವೇ ಕಾರಣ: ಸಿದ್ದರಾಮಯ್ಯ

by Shwetha
May 20, 2026
0

ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ದೇಶದಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವೇ ನೇರ ಕಾರಣ ಎಂದು...

ರೇಷನ್ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್

ರೇಷನ್ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್

by Shwetha
May 20, 2026
0

ರಾಜ್ಯದ ಜನಸಾಮಾನ್ಯರಿಗೆ ಮತ್ತು ಬಡ ಕುಟುಂಬಗಳಿಗೆ ಕರ್ನಾಟಕ ಸರ್ಕಾರವು ಮಹತ್ವದ ಕೊಡುಗೆಯೊಂದನ್ನು ನೀಡಿದೆ. ಇನ್ನು ಮುಂದೆ ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದರೆ ಕೇವಲ ಅಕ್ಕಿ, ಬೇಳೆ...

ನಮ್ಮ ದೇವಾಲಯಕ್ಕೆ ಚಪ್ಪಲಿ ಧರಿಸಿ ಬರಬೇಡ:ಮುಸ್ಲಿಂ ಯುವತಿಯನ್ನು ತರಾಟೆಗೆ ತೆಗೆದುಕೊಂಡ ಪ್ರವಾಸಿಗರು

ನಮ್ಮ ದೇವಾಲಯಕ್ಕೆ ಚಪ್ಪಲಿ ಧರಿಸಿ ಬರಬೇಡ:ಮುಸ್ಲಿಂ ಯುವತಿಯನ್ನು ತರಾಟೆಗೆ ತೆಗೆದುಕೊಂಡ ಪ್ರವಾಸಿಗರು

by Shwetha
May 20, 2026
0

ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಬಾದಾಮಿ ಗುಹಾಲಯದಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿಶ್ವ ವಿಖ್ಯಾತ ಬಾದಾಮಿ ಗುಹೆಗಳಲ್ಲಿ ಮುಸ್ಲಿಂ ಯುವತಿಯೊಬ್ಬಳು ಚಪ್ಪಲಿ...

ವಿದೇಶಿ ಮಾಧ್ಯಮಗಳ ಮುಂದೆ ಮೋದಿ ಸೈಲೆಂಟ್: ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಮಹುವಾ ಮೊಯಿತ್ರಾ ವ್ಯಂಗ್ಯ

ವಿದೇಶಿ ಮಾಧ್ಯಮಗಳ ಮುಂದೆ ಮೋದಿ ಸೈಲೆಂಟ್: ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಮಹುವಾ ಮೊಯಿತ್ರಾ ವ್ಯಂಗ್ಯ

by Shwetha
May 20, 2026
0

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಹಂಚಿಕೊಂಡಿರುವ ಒಂದು ಪೋಸ್ಟ್ ಈಗ ಭಾರತದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಾರ್ವೆ ಭೇಟಿಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram