ADVERTISEMENT
Saturday, July 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಆಸೀಸ್ ಟಿ-20 ತಂಡದಲ್ಲಿ ಭಾರತೀಯ ಮೂಲದ ಆಟಗಾರ.. ಭವಿಷ್ಯದ ಮ್ಯಾಜಿಷಿಯನ್ ಬೌಲರ್ …!

admin by admin
January 28, 2021
in Newsbeat, Sports, ಕ್ರೀಡೆ
Tanveer Sangha austrelia saakshatv
Share on FacebookShare on TwitterShare on WhatsappShare on Telegram

ಆಸೀಸ್ ಟಿ-20 ತಂಡದಲ್ಲಿ ಭಾರತೀಯ ಮೂಲದ ಆಟಗಾರ.. ಭವಿಷ್ಯದ ಮ್ಯಾಜಿಷಿಯನ್ ಬೌಲರ್ …!

Tanveer Sangha austrelia saakshatvತನ್ವೀರ್ ಸಂಘಾ….
ಆಸ್ಟ್ರೇಲಿಯಾದ ಯುವ ಸ್ಪಿನ್ನರ್.. 19ರ ಹರೆಯದ ತನ್ವೀರ್ ಸಂಘಾ ಆಸ್ಟ್ರೇಲಿಯಾ ಟಿ-20 ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಭಾರತೀಯ ಮೂಲದ ಆಟಗಾರ. ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ತನ್ವೀರ್ ಸಂಘಾ ಮೂಲತಃ ಜಲಂಧರ್ ನವರು.
1997ರಲ್ಲಿ ತನ್ವೀರ್ ಸಂಘಾ ಅವರ ತಂದೆ ಜೋಗಾ ಅವರು ಸಿಡ್ನಿಗೆ ತೆರಳಿದ್ದರು. ಅಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಜೋಗಾ ಅವರು ಆಸ್ಟ್ರೇಲಿಯಾದ ನಾಗರೀಕತೆಯನ್ನು ಪಡೆದುಕೊಂಡ್ರು.
ಇದೀಗ ಮಗ ತನ್ವೀರ್ ಸಂಘಾ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದಾಗ ಅವರ ಖುಷಿಗೆ ಪಾರವೇ ಇಲ್ಲ. ಆದ್ರೆ ತನ್ನ ಮಗ ಕ್ರಿಕೆಟಿಗನಾಗುತ್ತಾನೆ.. ಮುಂದೊಂದು ದಿನ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದುಕೊಳ್ಳುತ್ತಾನೆ ಅಂತ ಕನಸಿನಲ್ಲೂ ಅಂದುಕೊಂಡಿರಲಿಲ್ಲ.
ಯಾಕಂದ್ರೆ ತನ್ವೀರ್ ಅವರ ತಂದೆ ಭಾರತದಲ್ಲಿ ಇರುವಾಗ ಕ್ರಿಕೆಟ್ ಪಂದ್ಯವನ್ನೇ ನೋಡುತ್ತಿರಲಿಲ್ಲ. ಕ್ರಿಕೆಟ್ ಬಗ್ಗೆ ಆಸಕ್ತಿಯೂ ಇರಲಿಲ್ಲ. ಕಬಡ್ಡಿ, ವಾಲಿಬಾಲ್, ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಜೋಗಾ ಅವರು ತನ್ನ ಮಗನ ಕ್ರಿಕೆಟ್ ಆಸಕ್ತಿಗೆ ಪ್ರೀತಿಯಿಂದಲೇ ಪ್ರೇರಣೆ ನೀಡಿದ್ದರು. ಮಗನ ಕ್ರಿಕೆಟ್ ಪ್ರತಿಭೆಯನ್ನು ಅರಿತುಕೊಂಡಿದ್ದ ಜೋಗ ಅವರು, ತನ್ವೀರ್ ಸಂಘಾ ಅವರ ಕ್ರಿಕೆಟ್ ಅಭ್ಯಾಸಕ್ಕಾಗಿ ಬೆನ್ನಲುಬಾಗಿ ನಿಂತ್ರು. ರಾತ್ರಿ ವೇಳೆ ಟ್ಯಾಕ್ಸಿ ಓಡಿಸಿ ಸಂಪಾದನೆ ಮಾಡುತ್ತಿದ್ದರು.
ತನ್ನ ಹತ್ತನೇ ಹರೆಯದಲ್ಲಿ ಕ್ರಿಕೆಟ್ ಗ್ರಾಮರ್ ಗಳನ್ನು ಕಲಿತುಕೊಂಡ ತನ್ವೀರ್ ಆಸ್ಟ್ರೇಲಿಯಾ ವಿವಿಧ ವಯೋಮಿತಿ ಟೂರ್ನಿಯಲ್ಲಿ ಗಮನ ಸೆಳೆಯುವಂತಹ ಪ್ರದರ್ಶನ ನೀಡಿದ್ದರು. ಅಲ್ಲದೆ 19 ವಯೋಮಿತಿ ಕ್ರಿಕೆಟ್ ಟೂರ್ನಿಯಲ್ಲೂ ಆಡಿದ್ದರು.
ಅಂದ ಹಾಗೇ ಲೆಗ್ ಸ್ಪಿನ್ನರ್ ಆಗಿರುವ ತನ್ವೀರ್ ಸಂಘಾ ಅವರು ಇತ್ತೀಚೆಗೆ ಮುಕ್ತಾಯಗೊಂಡ ಬಿಗ್ ಬ್ಯಾಷ್ ಲೀಗ್ ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಸಿಡ್ನಿ ಥಂಡರ್ Tanveer Sangha austrelia saakshatvತಂಡದ ಪರವಾಗಿ ಆಡಿದ್ದ ತನ್ವೀರ್, 14 ಪಂದ್ಯಗಳಲ್ಲಿ 21 ವಿಕೆಟ್ ಗಳನ್ನು ಕಬಳಿಸಿದ್ದರು. ಅಲ್ಲದೆ ರಾಷ್ಟ್ರೀಯ ಆಯ್ಕೆ ಸಮಿತಿಯ ಗಮನ ಕೂಡ ಸೆಳೆದಿದ್ದರು.
ವಯಸ್ಸಿಗೂ ಮೀರಿದ ಪ್ರತಿಭೆಯನ್ನು ಹೊಂದಿರುವ ತನ್ವೀರ್ ಸಂಘಾ ಅವರು ಅಸ್ಟ್ರೇಲಿಯಾದ ಭವಿಷ್ಯದ ಮ್ಯಾಜಿಷಿಯನ್ ಬೌಲರ್ ಅಂತಲೇ ಬಿಂಬಿತರಾಗುತ್ತಿದ್ದಾರೆ.
ಫೆಬ್ರವರಿ 27ರಿಂದ ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ತನ್ವೀರ್ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.
ಹಾಗೇ ಆಸ್ಟ್ರೇಲಿಯಾ ತಂಡದಲ್ಲಿ ಭಾರತೀಯ ಮೂಲದ ನಾಲ್ಕನೇ ಆಟಗಾರನಾಗಿದ್ದಾರೆ ತನ್ವೀರ್ ಸಂಘಾ. ಇದೀಗ ಮುಂದಿನ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಭಾರತದಲ್ಲಿ ಆಡುವ ಆಸೆಯನ್ನಿಟ್ಟುಕೊಂಡಿದ್ದಾರೆ.

Related posts

fifa world cup trophy old and new

fifa trophy : ಹಿಟ್ಲರ್ ಕೈಗೆ ಸಿಗದೆ..ಸಾಕು ನಾಯಿಯಿಂದ ಕಳ್ಳರ ಕೈಯಿಂದ ತಪ್ಪಿಸಿಕೊಂಡು..ಲೂಟಿಕೋರರ ದಾಳಿಗೆ ನಲುಗಿ ಹೋದ ಜಗದೇಕ ಸುಂದ್ರಿ..!

July 18, 2026
ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ ಕರ್ನಾಟಕ ಲೋಕಾಯುಕ್ತದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಇಂದೇ ಅರ್ಜಿ ಸಲ್ಲಿಸಿ

ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ ಕರ್ನಾಟಕ ಲೋಕಾಯುಕ್ತದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಇಂದೇ ಅರ್ಜಿ ಸಲ್ಲಿಸಿ

July 18, 2026
Tags: #Adam Zampa#saakshatvaustreliaindiajalandharjoganewziland cricketShane WarneSydneyt-20 cricketTanveer Sangha
ShareTweetSendShare
Join us on:

Related Posts

fifa world cup trophy old and new

fifa trophy : ಹಿಟ್ಲರ್ ಕೈಗೆ ಸಿಗದೆ..ಸಾಕು ನಾಯಿಯಿಂದ ಕಳ್ಳರ ಕೈಯಿಂದ ತಪ್ಪಿಸಿಕೊಂಡು..ಲೂಟಿಕೋರರ ದಾಳಿಗೆ ನಲುಗಿ ಹೋದ ಜಗದೇಕ ಸುಂದ್ರಿ..!

by admin
July 18, 2026
0

ಈಕೆ ಅಂತಿಂಥ ಚೆಲುವೆಯಲ್ಲ..! ಶಿಲ್ಪಿಯ ಕೈಯಲ್ಲಿ ಅರಳಿದ ಅಪ್ರತಿಮ ರೂಪಸಿ..! ಹೌದು, ಸರ್ವಾಧಿಕಾರಿ ಹಿಟ್ಲರ್‍ನ ಕೈ ಹಿಡಿಯಲಿಲ್ಲ. ಆಂಗ್ಲರ ಮೋಹದ ಬಲೆಗೂ ಬೀಳಲಿಲ್ಲ. ಕಳ್ಳರ ಕೈಗೆ ಸಿಲುಕಿದಾಗ...

ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ ಕರ್ನಾಟಕ ಲೋಕಾಯುಕ್ತದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಇಂದೇ ಅರ್ಜಿ ಸಲ್ಲಿಸಿ

ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ ಕರ್ನಾಟಕ ಲೋಕಾಯುಕ್ತದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಇಂದೇ ಅರ್ಜಿ ಸಲ್ಲಿಸಿ

by Shwetha
July 18, 2026
0

ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ನೀವು ಕೇವಲ ಪಿಯುಸಿ ಪಾಸಾಗಿದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಪ್ರತಿಷ್ಠಿತ ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಪಡೆಯಬೇಕೆಂದು ಬಯಸುತ್ತಿದ್ದರೆ ನಿಮಗಾಗಿ ಒಂದು...

ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ

ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ

by Shwetha
July 18, 2026
0

ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ದೇಶದ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಆಡಳಿತಾರೂಢ ಎನ್‌ಡಿಎ ಹಾಗೂ ವಿರೋಧ ಪಕ್ಷಗಳ ಒಕ್ಕೂಟದ ನಡುವೆ ತೀವ್ರ ವಾಕ್ಸಮರ...

ಮೊಟ್ಟೆ ದರದಲ್ಲಿ ನಿರಂತರ ಏರಿಕೆ; ಉತ್ಪಾದನೆ ಕುಸಿತದಿಂದ ಗ್ರಾಹಕರಿಗೆ ಬೆಲೆ ಬರೆ

ಮೊಟ್ಟೆ ದರದಲ್ಲಿ ನಿರಂತರ ಏರಿಕೆ; ಉತ್ಪಾದನೆ ಕುಸಿತದಿಂದ ಗ್ರಾಹಕರಿಗೆ ಬೆಲೆ ಬರೆ

by Shwetha
July 18, 2026
0

ರಾಜ್ಯದಲ್ಲಿ ಕೋಳಿ ಮೊಟ್ಟೆಯ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಗ್ರಾಹಕರಿಗೆ ಹೆಚ್ಚುವರಿ ಹೊರೆ ಉಂಟಾಗಿದೆ. ಕೆಲವೇ ವಾರಗಳ ಹಿಂದೆ 5 ರಿಂದ 6 ರೂಪಾಯಿಗೆ ದೊರೆಯುತ್ತಿದ್ದ ಮೊಟ್ಟೆ ಇದೀಗ...

ಅಧಿಕಾರಕ್ಕಿಂತ ನಿಯಮವೇ ದೊಡ್ಡದು ಚಾಮುಂಡಿ ಬೆಟ್ಟಕ್ಕೆ ಬಂದರೂ ದರ್ಶನ ಪಡೆಯದೆ ಮರಳಿದ ಸಚಿವ ಯತೀಂದ್ರ :ಯತೀಂದ್ರ ಸಿದ್ದರಾಮಯ್ಯ ಅವರ ಸರಳತೆಗೆ ಮೈಸೂರು ಜನತೆ ಫಿದಾ

ಅಧಿಕಾರಕ್ಕಿಂತ ನಿಯಮವೇ ದೊಡ್ಡದು ಚಾಮುಂಡಿ ಬೆಟ್ಟಕ್ಕೆ ಬಂದರೂ ದರ್ಶನ ಪಡೆಯದೆ ಮರಳಿದ ಸಚಿವ ಯತೀಂದ್ರ :ಯತೀಂದ್ರ ಸಿದ್ದರಾಮಯ್ಯ ಅವರ ಸರಳತೆಗೆ ಮೈಸೂರು ಜನತೆ ಫಿದಾ

by Shwetha
July 18, 2026
0

ಸಾಂಸ್ಕೃತಿಕ ನಗರಿ ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಿನ್ನೆ ಮೊದಲ ಆಷಾಢ ಶುಕ್ರವಾರದ ಶುಭ ಸಂದರ್ಭದಲ್ಲಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರು ತೋರಿದ ಸೌಜನ್ಯದ ನಡೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram