ADVERTISEMENT
Saturday, June 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮಣ್ಣಿನ ಪರಿಸರ ವ್ಯವಸ್ಥೆ ಎಂಜಿನಿಯರ್‌ಗಳು, ಪರಿಸರ ಮತ್ತ ರೈತ ಮಿತ್ರ ಜೀವಿಗಳು ಇರುವೆಗಳು – ಎರೆಹುಳುಗಳು – ಸಗಣಿ ಜೀರುಂಡೆಗಳು:

Shwetha by Shwetha
January 28, 2021
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಮಣ್ಣಿನ ಪರಿಸರ ವ್ಯವಸ್ಥೆ ಎಂಜಿನಿಯರ್‌ಗಳು, ಪರಿಸರ ಮತ್ತ ರೈತ ಮಿತ್ರ ಜೀವಿಗಳು ಇರುವೆಗಳು – ಎರೆಹುಳುಗಳು – ಸಗಣಿ ಜೀರುಂಡೆಗಳು:

ನಮ್ಮ ಪರಿಸರ ವ್ಯವಸ್ಥೆ ಅದೆಷ್ಟು ವ್ಯವಸ್ಥಿತವೆಂದರೆ, ಇಲ್ಲಿ ಪ್ರತೀ ಜೀವಿಗಳಿಗೂ ಪರಿಸರ ಸಮತೋಲನ ಮತ್ತು ಪರಿಸರದ ಕಟ್ಟುವಕೆಯಲ್ಲಿ ತಮ್ಮದೇ ಆದ ಕರ್ತವ್ಯಗಳಿವೆ. ಈ ಜೀವಿಗಳು ತಮ್ಮ ಪಾಲಿನ ಜಾಯಕವನ್ನು ನಿಸ್ವಾರ್ಥವಾಗಿ ಮಾಡುತ್ತಲೇ ಇವೆ. ಪರಿಸರವನ್ನು ನಾಶ ಮಾಡುವ ಏಕೈಕ ಜೀವಿ ಮಾನವ ಮಾತ್ರ.
Environment friendly

Related posts

ಭಾರತಕ್ಕೆ FATFನಲ್ಲಿ ಐತಿಹಾಸಿಕ ಗೆಲುವು: IAS ಅಧಿಕಾರಿ ವಿವೇಕ್ ಅಗರ್ವಾಲ್ ಉಪಾಧ್ಯಕ್ಷರಾಗಿ ಆಯ್ಕೆ

ಭಾರತಕ್ಕೆ FATFನಲ್ಲಿ ಐತಿಹಾಸಿಕ ಗೆಲುವು: IAS ಅಧಿಕಾರಿ ವಿವೇಕ್ ಅಗರ್ವಾಲ್ ಉಪಾಧ್ಯಕ್ಷರಾಗಿ ಆಯ್ಕೆ

June 20, 2026
TMC ಯಲ್ಲಿ ಭಾರೀ ರಾಜಕೀಯ ಬಿಕ್ಕಟ್ಟು..20 ಸಂಸದರನ್ನು(MP) ಅನರ್ಹಗೊಳಿಸಲು ಸ್ಪೀಕರ್‌ಗೆ ಮನವಿ

TMC ಯಲ್ಲಿ ಭಾರೀ ರಾಜಕೀಯ ಬಿಕ್ಕಟ್ಟು..20 ಸಂಸದರನ್ನು(MP) ಅನರ್ಹಗೊಳಿಸಲು ಸ್ಪೀಕರ್‌ಗೆ ಮನವಿ

June 20, 2026

ಪರಿಸರ ವ್ಯವಸ್ಥೆಯ ಎಂಜಿನಿಯರ್‌ಗಳು ಎಂದೇ ಕರೆಸಿಕೊಂಡ ಕೆಲವು ಜೀವಿಗಳು ಈ ಸೃಷ್ಟಿಯಲ್ಲಿವೆ. ತಮ್ಮ ಭೌತಿಕ ಪರಿಸರದಲ್ಲಿ ಪ್ರಮುಖ ಬದಲಾವಣೆಗಳನ್ನು ಇವು ಮಾಡುತ್ತವೆ. ಇವುಗಳ ದಿನನಿತ್ಯದ ಕಾರ್ಯಚಟುವಟಿಕೆಗಳು ನಮ್ಮ ಪರಿಸರ ವ್ಯವಸ್ಥೆಯಲ್ಲಿನ ಇತರ ಅನೇಕ ಜೀವಿಗಳ ಆವಾಸಸ್ಥಾನಗಳ ಮೇಲೆ ಪ್ರಭಾವ ಬೀರುತ್ತದೆ. ಈ ಜೀವಿಗಳನ್ನೇ ಪರಿಸರ ವ್ಯವಸ್ಥೆಯ ಎಂಜಿನಿಯರ್‌ಗಳು ಎಂದು ಕರೆಯುವುದಕ್ಕೆ ಕಾರಣಗಳಿವೆ. ಈ ಜೀವ ಪ್ರಭೇದಗಳು ಕಟ್ಟುವಿಕೆಯನ್ನೇ ಕಸುಬಾಗಿಸಿಕೊಂಡ ಸೂಕ್ಷ್ಮ ಜೀವಿಗಳು. ಇವುಗಳಲ್ಲಿ ಕೆಲವು ಜೀವಿಗಳು ಮರುಭೂಮಿಯ ಮರಳು ಮಿಶ್ರಿತ ಮಣ್ಣಿನಲ್ಲಿಯೂ ಸಹ ವಿರಳವಾದ ನೀರಿನ ಸರಬರಾಜನ್ನು ಪ್ರಾದೇಶಿಕವಾಗಿ ಕೇಂದ್ರೀಕರಿಸುವ ಒಂದು ಅಗ್ರಾಹ್ಯ ಮೇಲ್ಮೈ ಹೊರಪದರವನ್ನು ಸೃಷ್ಟಿಸುತ್ತವೆ.
Environment friendly

ಪರಿಸರವೆಂಬ ಅನೂಹ್ಯ ಲೋಕದ ಸೃಜನಶೀಲ ಕಾರ್ಯಶೀಲ ಎಂಜಿನಿಯರ್ ಗಳಲ್ಲಿ ಬಿಲ ಪ್ರಾಣಿಗಳೂ ಸೇರಿವೆ. ಇವು ಮಣ್ಣಿನಲ್ಲಿ ಗಾಳಿ ಮತ್ತು ನೀರಿನ ಚಲನೆಯನ್ನು ಸರಾಗಗೊಳಿಸುವ ಮೂಲಕ ಇತರ ಜೀವಿಗಳಿಗೆ ಬದುಕುವ ಅವಕಾಶಗಳನ್ನು ಒದಗಿಸಿಕೊಡುತ್ತವೆ. ಮಣ್ಣಿನಾಳದಲ್ಲಿ ಬಿಲ ತೋಡಿ ಬದುಕುವ ಕೆಲವು ಸರಿಸೃಪಗಳು ಮತ್ತು ಉರಗಜಾತಿಯ ಜೀವಿಗಳಿಂದ ಪರಿಸರದ ಸಮತೋಲನಕ್ಕೆ ಸಾಕಷ್ಟು ಕೊಡುಗೆಗಳಿವೆ. ಸಮುದ್ರ ತಟದಲ್ಲಿ ಆಮೆ, ಮೊಸಳೆಗಳಂತ ಜಲಚರಗಳು, ಮರಳುಗಾಡಿನಲ್ಲಿ ಮರುಭೂಮಿಯ ಇಲಿ ಹಾಗೂ ಮೃದ್ವಂಗಿಗಳಿ ಬಿಲವಾಸಿ ಜೀವಿಗಳಾಗಿ ತಮ್ಮ ಪಾಲಿನ ಪರಿಸರ ನಿರ್ಮಾಣದ ಕಾಯಕ ಮಾಡುತ್ತವೆ. ಗೋಫರ್ಸ್ ಮತ್ತು ಮೋಲ್ ಎಂಬ ಪ್ರಭೇದದ ಇಲಿಗಳ ಅತ್ಯದ್ಭುತ ಕಾರ್ಯಾಚರಣೆಯಿಂದ ಮಣ್ಣಿನ ಹದ ಹೆಚ್ಚಾಗುತ್ತದೆ. ಇವು ಬಿಲ ತೋಡುವ ಜೊತೆಗೆ ಮಣ್ಣಿನ ಕುಂಬಾರಿಕೆಯನ್ನೂ ಮಾಡುತ್ತವೆ. ಇದೇ ತರಹ ದೊಡ್ಡ ಜೀವಿಗಳಾದ ಬಿಲವಾಸಿಗಳೂ ಆದ ಚಿಪ್ಪು ಹಂದಿ ಅಥವಾ ಪ್ಯಾಂಗೋಲಿನ್, ಮುಳ್ಳು ಹಂದಿಗಳಿಂದ ಮಣ್ಣನ ಸಾರವರ್ಧನೆಗೆ ಆಗುವ ಉಪಕಾರ ಅಷ್ಟಿಷ್ಟಲ್ಲ.

ಗೆದ್ದಲುಗಳು, ಎರೆಹುಳುಗಳು ಮತ್ತು ಇರುವೆಗಳು ಪ್ರಕೃತಿ ಸೃಷ್ಟಿಸಿಕೊಂಡಿರುವ ಅತ್ಯುತ್ತಮ ಎಂಜಿನಿಯರ್ ಗಳು. ಇವು ಮಣ್ಣಿನ ಸಾಂದ್ರತೆಯನ್ನು ಸಾರವನ್ನು ಮತ್ತು ಸಾವಯವತೆಯನ್ನು ಹೆಚ್ಚಿಸುತ್ತವೆ. ಗೆದ್ದಲು ಕಟ್ಟುವ ಹುತ್ತ ಅದ್ಭುತವಾದ ಸಾರಯುಕ್ತ ಮಣ್ಣು. ಹಾಗೆಯೇ ಇರುವೆಗಳೂ ಸಹ ತಮ್ಮ ಗೂಡು ನಿರ್ಮಿಸುವೆಡೆಯಲ್ಲಿ ಮಣ್ಣಿನ ಕಣಗಳನ್ನು ನವಿರಾಗಿಸುತ್ತವೆ. ಎರೆಹುಳುಗಳಂತೂ ಅಕ್ಷರಶಃ ಮಣ್ಣಿನ್ನು ತಿನ್ನುತ್ತವೆ ಮತ್ತು ಇವು ವಿಸರ್ಜಿಸುವ ಮಣ್ಣು ಅದ್ಭುತವಾದ ಸಾರ ಹೊಂದಿರುವ ಪ್ರಾಕೃತಿಕ ಗೊಬ್ಬರ. ಹಾಗಾಗೇ ಎರಹುಳುವನ್ನು ರೈತನ ಮಿತ್ರ ಎಂದು ಕರೆಯಲಾಗುತ್ತದೆ. ಇವು ಸಸ್ಯದ ಅವಶೇಷಗಳನ್ನು ಮಣ್ಣಿನೊಳಕ್ಕೆ ಹಾಯಿಸುತ್ತವೆ. ತಮ್ಮ ದೇಹದಿಂದ ಖನಿಜ ಮಣ್ಣಿನ ಕಣಗಳೊಂದಿಗೆ ಹಾದುಹೋಗುವ ಮೂಲಕ ಫಲವತ್ತಾದ ಮಣ್ಣನ್ನು ಸಂಯೋಜಿಸುತ್ತವೆ.

ಪರಿಸರ ವ್ಯವಸ್ಥೆಯ ಇನ್ನೊಂದು ವರ್ಗದ ಎಂಜಿನಿಯರ್ ಜೀವಿಗಳೆಂದರೇ ಸಗಣಿ ಜೀರುಂಡೆಗಳು. ಈ ಸಗಣಿ ಜೀರುಂಡೆಗಳು ಪ್ರಾಣಿಗಳ ಸಗಣಿಗಳನ್ನು ಸಣ್ಣ ಸುರಂಗಗಳಲ್ಲಿ ಹೂತುಹಾಕುವ ಮೂಲಕ ಪೋಷಕಾಂಶಗಳ ವೃದ್ಧಿಗೊಳಿಸುತ್ತವೆ. ಇವು ಅನೇಕ ದೊಡ್ಡ ಸಸ್ತನಿಗಳ ವಿಸರ್ಜಿತ ಮಲದ ತುಂಡುಗಳನ್ನು ಕತ್ತರಿಸಿ, ಆ ಸಗಣಿ ಚೆಂಡುಗಳನ್ನು ಹೊಸ ಸ್ಥಳಕ್ಕೆ ಸುತ್ತಲು ಅನುವು ಮಾಡಿಕೊಡುತ್ತದೆ. ಹೆಣ್ಣು ಸಗಣಿ ಜೀರುಂಡೆಯು ತನ್ನ ಮೊಟ್ಟೆಗಳನ್ನು ಸಗಣಿ ಚೆಂಡಿನಲ್ಲಿ ಇರಿಸಿ ಮಣ್ಣಿನಲ್ಲಿ ಹೂತುಹಾಕುತ್ತದೆ. ಸಗಣಿ ಹರಡುವುದು ಮತ್ತು ಹೂಳುವುದು ಜೀರುಂಡೆ ಲಾರ್ವಾಗಳಿಗೆ ಆಹಾರ ಮೂಲವನ್ನು ಒದಗಿಸುವುದಲ್ಲದೆ, ಗೊಬ್ಬರದಲ್ಲಿರುವ ಪೋಷಕಾಂಶಗಳ ಹರಿವನ್ನು ಸುಲಭವಾಗಿ ರಕ್ಷಿಸುತ್ತದೆ. ಈ ಜೀರುಂಡೆಗಳು ಸಗಣಿ ತುಏಉಗಳನ್ನು ತ್ವರಿತವಾಗಿ ಹೂತುಹಾಕುವುದರಿಂದ ಮಾಂಸಾಹಾರಿ ನೊಣಗಳು ಮತ್ತು ಹಾನಿಕಾರಕ ಕ್ರಿಮಿ ಕೀಟಗಳ ಸಂತಾನೋತ್ಪತ್ತಿಯನ್ನು ತಡೆಯುತ್ತದೆ. ಪರಿಸರ ವ್ಯವಸ್ಥೆಯಲ್ಲಿ ಫಲವತ್ತಾದ ಮಣ್ಣಿನ ಕೊರತೆಯಿದ್ದರೆ, ಈ ಸೂಕ್ತ ಜಾತಿಯ ಸಗಣಿ ಜೀರುಂಡೆಗಳನ್ನು ಅಥವಾ ಎರೆಹುಳುಗಳನ್ನು ಪರಿಚಯಿಸುವುದು ಅತ್ಯಂತ ಲಾಭಕರ.
Environment friendly

ಮೊದಲಿಗೆ, ಮಣ್ಣಲ್ಲಿ ನೀರು ಇಂಗುವಂತಹ ಸಣ್ಣ ಸುರಂಗಗಳ ನಿರ್ಮಾಣವಾಗಬೇಕು. ಇದು ಸಾಧ್ಯವಾಗುವುದು ಮಣ್ಣೊಳಗೆಯೇ ಸಂಚರಿಸುವ ಜೀವಾಣುಗಳಿಂದ. ಈ ಮಣ್ಣುಜೀವಿಗಳಿಗೆ ಸಾವಯವ ವಸ್ತುಗಳೇ ಮೂಲಾಹಾರ. ಮಣ್ಣಿಗೆ ಸಾವಯವ ಅಂಶ ಬೆರೆಸಿದಾಗ, ಅದನ್ನು ಆಹಾರವಾಗಿ ಸೇವಿಸುವ ಜೀವಿಗಳು ಓಡಾಡಿದಾಗ, ಸುರಂಗಗಳು ಸೃಷ್ಟಿಯಾಗುತ್ತವೆ. ಇವುಗಳಲ್ಲಿ ಗಾಳಿಯಾಡುತ್ತದೆ – ನೀರು ಹರಿಯುತ್ತದೆ. ಹೀಗಾದಾಗ ಸಹಜವಾಗಿ ಸರಳವಾಗಿ ಮತ್ತು ಸುಲಭವಾಗಿ ಆ ಪ್ರದೇಶದ ಮಣ್ಣು ಸಾವಯವಯುಕ್ತವಾಗುತ್ತದೆ ಮತ್ತು ಸಾರಯುಕ್ತವಾಗುತ್ತದೆ.

ಫಲವತ್ತಾದ /ಆರೋಗ್ಯಯುತ ಮತ್ತು ಉತ್ಪಾದನಾ ತಾಕತ್ತು ಹೊಂದಿರುವ ಮಣ್ಣುಗಳ ಬಣ್ಣ ದಟ್ಟವಾಗಿರುತ್ತದೆ. ಈ ಮಣ್ಣನ್ನ ಮೇಲಿಂದ ಕೆಳಗೆ ನೆಲಕ್ಕೆ ಹಾಕಿದಾಗ, ಧೂಳಾಗಿ ಬೀಳದೆ ಉದುರು ಉದುರಾಗಿ ಗುಪ್ಪೆ ಗುಪ್ಪೆಯಾಗಿ ಬೀಳುತ್ತದೆ. ಇದನ್ನು ಕೈಯಲ್ಲಿರಿಸಿದಾಗ ತಂಪಾಗಿರುತ್ತದೆ. ಈ ಮಣ್ಣಲ್ಲಿ, ಸಾವಯವ ವಸ್ತುಗಳಾದ ಕಸ – ಕಡ್ಡಿಗಳು ಸಣ್ಣಪ್ರಮಾಣದಲ್ಲಿ ಕಾಣಿಸುತ್ತವೆ. ಇವು ಒಂದು ತರಹದ ಕರ್ಪೂರದ ವಾಸನೆ ಹೊಂದಿರುತ್ತದೆ. ಈ ಮಣ್ಣನ್ನು ಆಳವಾಗಿ ಅಥವಾ ಸೂಕ್ಷ್ಮವಾಗಿ ಗಮನಿಸಿದಾಗ, ಒಂದೆರಡು ಬಗೆಯ ಜೀವಾಣುಗಳು ಸಹ ಕಾಣಿಸುತ್ತವೆ. ಇಂತಹ ಮಣ್ಣುಗಳಲ್ಲಿ ಮಳೆನೀರು ಹಿಡಿದಿಡುವ ಸಾಮರ್ಥ್ಯ ಇರುತ್ತದೆ. ಈ ತರಹದ ಫಲವತ್ತಾದ ಮಣ್ಣು ಕೇವಲ ನೈಸರ್ಗಿಕ ಕಾರ್ಖಾನೆಯ ಪರಿಸರ ಎಂಜಿನಿಯರ್ ಗಳಿಂದ ಮಾತ್ರ ಸಾಧ್ಯ.

–ದೇವಿಕಾ
ಕೃಷಿಕರು, ಮೈಸೂರು

***

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

https://t.co/ZaEt7XcIUi

— Saaksha TV (@SaakshaTv) January 27, 2021

ರಾಜ್ಯ ಸರ್ಕಾರದ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಭಾಜನರಾದ ಬಾಲ ಪ್ರತಿಭೆ ಆಶ್ರಯ ಪಿhttps://t.co/COtsY4G6S3

— Saaksha TV (@SaakshaTv) January 27, 2021

 

Tags: EcosystemsFarmersSoil Ecosystem Engineers
ShareTweetSendShare
Join us on:

Related Posts

ಭಾರತಕ್ಕೆ FATFನಲ್ಲಿ ಐತಿಹಾಸಿಕ ಗೆಲುವು: IAS ಅಧಿಕಾರಿ ವಿವೇಕ್ ಅಗರ್ವಾಲ್ ಉಪಾಧ್ಯಕ್ಷರಾಗಿ ಆಯ್ಕೆ

ಭಾರತಕ್ಕೆ FATFನಲ್ಲಿ ಐತಿಹಾಸಿಕ ಗೆಲುವು: IAS ಅಧಿಕಾರಿ ವಿವೇಕ್ ಅಗರ್ವಾಲ್ ಉಪಾಧ್ಯಕ್ಷರಾಗಿ ಆಯ್ಕೆ

by admin
June 20, 2026
0

ಭಾರತಕ್ಕೆ FATFನಲ್ಲಿ ಐತಿಹಾಸಿಕ ಗೆಲುವು: IAS ಅಧಿಕಾರಿ ವಿವೇಕ್ ಅಗರ್ವಾಲ್ ಉಪಾಧ್ಯಕ್ಷರಾಗಿ ಆಯ್ಕೆ ಭಾರತಕ್ಕೆ ಜಾಗತಿಕ ಹಣಕಾಸು ಮತ್ತು ಭದ್ರತಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಸಾಧನೆ ದೊರೆತಿದ್ದು,...

TMC ಯಲ್ಲಿ ಭಾರೀ ರಾಜಕೀಯ ಬಿಕ್ಕಟ್ಟು..20 ಸಂಸದರನ್ನು(MP) ಅನರ್ಹಗೊಳಿಸಲು ಸ್ಪೀಕರ್‌ಗೆ ಮನವಿ

TMC ಯಲ್ಲಿ ಭಾರೀ ರಾಜಕೀಯ ಬಿಕ್ಕಟ್ಟು..20 ಸಂಸದರನ್ನು(MP) ಅನರ್ಹಗೊಳಿಸಲು ಸ್ಪೀಕರ್‌ಗೆ ಮನವಿ

by admin
June 20, 2026
0

TMC ಯಲ್ಲಿ ಭಾರೀ ರಾಜಕೀಯ ಬಿಕ್ಕಟ್ಟು..20 ಸಂಸದರನ್ನು(MP) ಅನರ್ಹಗೊಳಿಸಲು ಸ್ಪೀಕರ್‌ಗೆ ಮನವಿ ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ಸಂಭವಿಸಿದ್ದು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ...

SRA (Slum Rehabilitation Authority) ಯೋಜನೆಗೆ ಬೆದರಿಕೆ…ಕೋಟಿ ಕೋಟಿ ಲೂಟಿ..?

SRA (Slum Rehabilitation Authority) ಯೋಜನೆಗೆ ಬೆದರಿಕೆ…ಕೋಟಿ ಕೋಟಿ ಲೂಟಿ..?

by admin
June 20, 2026
0

SRA (Slum Rehabilitation Authority) ಯೋಜನೆಗೆ ಬೆದರಿಕೆ ಹಾಕಿ ಕೋಟ್ಯಂತರ ರೂಪಾಯಿ ವಸೂಲಿ..? ಮುಂಬೈ Crime Branch ಭರ್ಜರಿ ಕಾರ್ಯಾಚರಣೆ ಮುಂಬೈ (Mumbai) ನಗರದಲ್ಲಿ ನಡೆಯುತ್ತಿರುವ ಮಹತ್ವದ...

TRAFFIC FINE ಕಟ್ಟಲು ಮತ್ತೆ 50% ರಿಯಾಯಿತಿ (DISCOUNT)…ಮುಖ್ಯವಾದ ದಿನಾಂಕಗಳನ್ನ ತಿಳಿಯಿರಿ

TRAFFIC FINE ಕಟ್ಟಲು ಮತ್ತೆ 50% ರಿಯಾಯಿತಿ (DISCOUNT)…ಮುಖ್ಯವಾದ ದಿನಾಂಕಗಳನ್ನ ತಿಳಿಯಿರಿ

by admin
June 20, 2026
0

ಜೂನ್ 21ರಿಂದ ಜುಲೈ 10ರವರೆಗೆ ವಾಹನ ಸವಾರರಿಗೆ ಸುವರ್ಣಾವಕಾಶ ರಾಜ್ಯದ ವಾಹನ ಸವಾರರಿಗೆ ಮತ್ತೊಮ್ಮೆ ಭಾರೀ ರಿಯಾಯಿತಿ ಘೋಷಣೆ ಮಾಡಲಾಗಿದ್ದು, ಬಾಕಿ ಉಳಿದಿರುವ ಟ್ರಾಫಿಕ್ ಇ-ಚಲನ್‌ಗಳನ್ನು ಪಾವತಿಸಲು...

ರಾಮಮಂದಿರ ಹಗರಣ ಆರೋಪ -500 ವರ್ಷ ಕಾದಿದ್ದೀರಿ ಇನ್ನೊಂದು 15 ದಿನ ಕಾಯಿರಿ:ರಾಮಭಕ್ತರ ಮೇಲೆ ಗುಂಡು ಹಾರಿಸಿದವರು ಈಗ ಧರ್ಮೋಪದೇಶ ಮಾಡುತ್ತಿದ್ದಾರೆ ಕಾಂಗ್ರೆಸ್ ಮತ್ತು ಎಸ್‌ಪಿ ವಿರುದ್ಧ ಯೋಗಿ ಆಕ್ರೋಶ

ರಾಮಮಂದಿರ ಹಗರಣ ಆರೋಪ -500 ವರ್ಷ ಕಾದಿದ್ದೀರಿ ಇನ್ನೊಂದು 15 ದಿನ ಕಾಯಿರಿ:ರಾಮಭಕ್ತರ ಮೇಲೆ ಗುಂಡು ಹಾರಿಸಿದವರು ಈಗ ಧರ್ಮೋಪದೇಶ ಮಾಡುತ್ತಿದ್ದಾರೆ ಕಾಂಗ್ರೆಸ್ ಮತ್ತು ಎಸ್‌ಪಿ ವಿರುದ್ಧ ಯೋಗಿ ಆಕ್ರೋಶ

by Shwetha
June 20, 2026
0

ಅಯೋಧ್ಯಾ ರಾಮಮಂದಿರ ದೇಣಿಗೆ ವಿಚಾರದಲ್ಲಿ ಕೇಳಿಬರುತ್ತಿರುವ ಹಗರಣದ ಆರೋಪಗಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರೋಧ ಪಕ್ಷಗಳ ವಿರುದ್ಧ ಅಬ್ಬರಿಸಿದ್ದಾರೆ. ಅಯೋಧ್ಯೆಯ ಅಭಿವೃದ್ಧಿಯನ್ನು ಸಹಿಸಲಾಗದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram