ADVERTISEMENT
Wednesday, August 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

4 ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ : Simple and Tatsy

Namratha Rao by Namratha Rao
March 6, 2021
in Cooking, Newsbeat, ಅಡುಗೆ
Share on FacebookShare on TwitterShare on WhatsappShare on Telegram

5 ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ : Simple and Tatsy

ಪೂರ್ಣ ರೆಸಿಪಿಗಾಗಿ ಲಿಂಕ್ ಗಳನ್ನು ಕ್ಲಿಕ್ ಮಾಡಿ

ಮಾವಿನ ಕಾಯಿ ಚಟ್ನಿ

ಮಾವಿನ ಕಾಯಿ ಚಟ್ನಿ

Related posts

crossing-paths-documentary-samyukta-hornad-human-elephant-conflict-karnataka

ಕ್ರಾಸಿಂಗ್ ಪಾತ್ಸ್ (CROSSING PATHS): ಮಾನವ-ಆನೆ ಸಂಘರ್ಷದ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಯುಕ್ತಾ ಹೊರನಾಡು ನಿರ್ದೇಶನ

August 12, 2026
second-case-of-seetharam-amazon-prime-streaming-record-250-million-minutes

ಅಮೆಜಾನ್ ಪ್ರೈಮ್‌ನಲ್ಲಿ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಐತಿಹಾಸಿಕ ಸಾಧನೆ: 25 ಕೋಟಿಗೂ ಅಧಿಕ ಸ್ಟ್ರೀಮಿಂಗ್ ನಿಮಿಷಗಳ ದಾಖಲೆ!

August 12, 2026

ಮಾಡುವ ವಿಧಾನ:
ಮಾವಿನ ಕಾಯಿಯ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ. ಅದಕ್ಕೆ ತುರಿದ ತೆಂಗಿನಕಾಯಿ ಶುಂಠಿ ಬೆಳ್ಳುಳ್ಳಿ, ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿ ಉಪ್ಪು ಸೇರಿಸಿ. (ಮಾವಿನ ಹುಳಿಗೆ ಅನುಗುಣವಾಗಿ ಮೆಣಸಿನಕಾಯಿಗಳನ್ನು ಬಳಸಿ).
ಅಗತ್ಯವಿರುವಷ್ಟು ನೀರು ಸೇರಿಸಿ, ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿ. ಹಸಿಮೆಣಸಿನಕಾಯಿ ಚಟ್ನಿ ಸಿದ್ಧವಾಗಿದೆ. ಈಗ ಎಣ್ಣೆ ಬಿಸಿ ಮಾಡಿ ಸಾಸಿವೆ ಹಾಕಿ ಕೆಂಪು ‌ಮೆಣಸಿನ ಒಗ್ಗರಣೆ ಕೊಡಿ.
Saakshatv cooking recipes mango chutney

ಈ ಚಟ್ನಿಯನ್ನು ಸಾಮಾನ್ಯವಾಗಿ ಮಾವಿನ ಸಮಯದಲ್ಲಿ ಮಂಗಳೂರಿನ ಮನೆಗಳಲ್ಲಿ ತಯಾರಿಸಲಾಗುತ್ತದೆ ಮತ್ತು ಇದು ಗಂಜಿಯೊಂದಿಗೆ ಸೇವಿಸಲು ಚೆನ್ನಾಗಿರುತ್ತದೆ.

2 ರೀತಿಯಲ್ಲಿ ಬಾಳೆಹಣ್ಣಿನ ಪ್ಯಾನ್ ಕೇಕ್ ಮಾಡುವ ವಿಧಾನ..! without egg and with egg

2 ರೀತಿಯಲ್ಲಿ ಬಾಳೆಹಣ್ಣಿನ ಪ್ಯಾನ್ ಕೇಕ್ ಮಾಡುವ ವಿಧಾನ..! without egg and with egg

ಮೊಟ್ಟೆ ಹಾಕಿ ಮಾಡುವ ವಿಧಾನ
ಮೊದಲಿಗೆ ಒಂದು ಮಿಕ್ಸಿ ಜಾರ್ ನಲ್ಲಿ 2 ಬಾಳೆಹಣ್ನನ್ನ ಹಾಕಿ. ಅದಕ್ಕೆ ಅರ್ಧ ಕಪ್ ಅಥವ ನಿಮ್ಮ ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ. ಬಳಿಕ ಏಲಕ್ಕೆ ಚೆಚ್ಚಿ ಹಾಕಿ. ಆದ್ರೆ ಏಲಕ್ಕಿ ಹಾಕಿದರೆ ವೆನ್ನಿಲಾ ಎಸೆನ್ಸ್ ಹಾಕಬಾರದು. ಒಂದು ವೇಳೆ ವೆನಿಲಾ ಎಸೆನ್ಸ್ ಹಾಕಿದ್ರೆ ಏಲಕ್ಕಿ ಸೇರಿಸಬೇಡಿ. ಇದಕ್ಕೆ ಅರ್ಧ ಕಪ್ ಹಾಲು ಹಾಕಿ. ಇದೇ ಜಾರಿಗೆ 2 ಮೊಟ್ಟೆ ಹೊಡೆದು ಹಾಕಿ. ಈಗ ಈ ಮಿಶ್ರಣ ನುಣ್ಣಗಾಗುವರೆಗೂ ರುಬ್ಬಿ. ಬಳಿಕ ಒಂದು ಬೌಲ್ ಗೆ ಮೈದಾ ಹಿಟ್ಟು ಹಾಕಿ ಮೊದಲಿಗೆ 1 ಕಪ್ ಹಾಕಿ ಹಾಕಿ. ಇದಕ್ಕೆ ಚಿಟಕೆ ಅಡುಗೆ ಸೋಡಾ ಹಾಕಿ ಮೊದಲಿಗೆ ಕಲಿಸಿ. ನಂತರ ರುಬ್ಬಿದ ಮಿಶ್ರಣವನ್ನ ಇದಕ್ಕೆ ಸೇರಿಸಿ ಗಂಟು ಆಗದಂತೆ ಚೆನ್ನಾಗಿ ಸ್ಪೂನ್ ನ ಸಹಾಯದಿಂದ ಕಲಸಿ. ಈ ಮಿಶ್ರಣ ದೋಸೆ ಹಿಟ್ಟಿನ ಮಿಶ್ರಣದ ಹದಕ್ಕಿಂತ ಸ್ವಲ್ಪ ಗಟ್ಟಿಯಿರಬೇಕು. ಈಗ ಒಂದು ಪ್ಯಾನ್ ಕಾಯಲು ಸ್ಟವ್ ಮೇಲಿಡಿ. ಮೀಡಿಯಮ್ ಫ್ಲೋ ನಲ್ಲಿ ಪ್ಯಾನ್ ಕಾದ ನಂತರ, ಬೆಣ್ಣೆ ಅಥವಾ ತುಪ್ಪವನ್ನ ಪ್ಯಾನ್ ಮೇಲೆ ಸವರಿ. ಬಳಿಕ ಒಂದೊಂದೇ ಸೌಟ್ ನಲ್ಲಿ ಮಿಶ್ರಣವನ್ನ ಚಿಕ್ಕ ಚಿಕ್ಕ ದೋಸೆಗಳಂತೆ ಪ್ಯಾನ್ ಮೇಲೆ ಹಾಕಿ ಆದ್ರೆ ಅದರ ಮೇಲೆ ಸವರವುದಾಗಲಿ ಬಳೆಯುವುದಾಗಲಿ ಮಾಡದಿರಿ. ನೆನಪಿಡಿ ಸ್ವವ್ ನ ಫ್ಲೇಮ್ ತುಂಬ ಸಿಮ್ ಅಥವಾ ಮೀಡಿಯಮ್ ಆಗಿಯೇ ಇರಬೇಕು. ಪ್ಯಾನ್ ಕೇಕ್ ಒಂದು ಕಡೆ ಬೆಂದ ತಕ್ಷಣ ಅದರ ಮೇಲೆ ಚುಕ್ಕಿಗಳು ಕಾಣಿಸುತ್ತದೆ. ಇದಾದ ನಂತರ ಮತ್ತೊಂದು ಕಡೆ ತೆರುಗಿಸಿ ಬೇಯಿಸಿ. ಈಗ ಈ ಪ್ಯಾನ್ ಕೇಕ್ ಅನ್ನು ಸರ್ವಿಂಗ್ ಪ್ಲೇಟ್ ಗೆ ಹಾಕಿ ಬಿಸಿ ಇರುವಾಗಲೇ ಜೇನುತುಪ್ಪ ಒಂದು ಸ್ಪೂನ್, ಹಾಗೂ ಬೇಕಿದ್ರೆ ಬೆಣ್ಣೆಯನ್ನ ಅದರ ಮೇಲೆ ಹಾಕಿ. ಜೊತೆಗೆ ಸಕ್ಕರೆ ಪುಡಿಯಿಂದಲೂ ಗಾರ್ನಿಶ್ ಮಾಡಿ ಸವಿಯಬಹುದು. ಕೊನೆಯ ಸ್ಟೆಪ್ ಆಪ್ಷನಲ್.

ಮೊಟ್ಟೆ ಇಲ್ಲದೆ ಮಾಡುವ ವಿಧಾನ

ಮೊದಲಿಗೆ ಒಂದು ಮಿಕ್ಸಿ ಜಾರ್ ನಲ್ಲಿ 2 ಬಾಳೆಹಣ್ನನ್ನ ಹಾಕಿ. ಬಳಿಕ ಏಲಕ್ಕೆ ಚೆಚ್ಚಿ ಹಾಕಿ. ಆದ್ರೆ ಏಲಕ್ಕಿ ಹಾಕಿದರೆ ವೆನ್ನಿಲಾ ಎಸೆನ್ಸ್ ಹಾಕಬಾರದು. ಇದಕ್ಕೆ ಅರ್ಧ ಕಪ್ ಹಾಲು ಹಾಕಿ. ಈಗ ಈ ಮಿಶ್ರಣ ನುಣ್ಣಗಾಗುವರೆಗೂ ರುಬ್ಬಿ. ಈಗ ಒಂದು ಬೌಲ್ ಗೆ ಮೆಲ್ಟೆಡ್ ಬಟರ್ / ಬೆಣ್ಣೆ ಹಾಕಿ ಅದಕ್ಕೆ ಪುಡಿ ಮಾಡಿದ ಸಕ್ಕರೆಯನ್ನ ರುಚಿಗೆ ತಕ್ಕಷ್ಟು ಹಾಕಿ. ಬೇಕಿದ್ರೆ ಕಂಡೆನ್ಸಡ್ ಮಿಲ್ಕ್ ಅನ್ನು ಸಹ ಸಕ್ಕರೆ ಬದಲಾಗಿ ಉಪಯೋಗಿಸಬಹುದು. ಈಗ ಇದನ್ನ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನ ಹಾಗೂ ಮೊದಲು ರುಬ್ಬಿಟ್ಟುಕೊಂಡ ಮಿಶ್ರಣವನ್ನ ಒಂದು ಅಥವಾ 1 ವರೆ ಕಪ್ ಮೈದಾ ಜೊತೆಗೆ ಗಂಟು ಇಲ್ಲದ ರೀತಿಯಲ್ಲಿ ಒಟ್ಟಿಗೆ ಸೇರಿಸಿ ಕಲಸಿ ದೋಸೆ ಹಿಟ್ಟಿನ ಹದಕ್ಕೆ ತನ್ನಿ. ಈಗ ಇದಕ್ಕೆ ಚಿಟಕೆ ಅಡಿಗೆ ಸೋಡಾ ಸೇರಿಸಿ ಕಲಸಿ. ಬಳಿಕ ಪ್ಯಾನ್ ಬಿಸಿ ಮಾಡಿ ಹಿಂದೆನ ವಿದಾನದಲ್ಲಿ ಹೇಳಿದಂತೆಯೇ ಪ್ಯಾನ್ ಕೇಕ್ ತಯಾರಿಸಿ. ರುಚಿಕರ ಪ್ಯಾನ್ ಕೇಕ್ ನೀವೂ ಟ್ರೈ ಮಾಡಿ ಅಭಿಪ್ರಾಯ ತಿಳಿಸಿ.

 

ಮಸಾಲಾ ಕುಷ್ಕಾ ರೈಸ್ (plain biryani without meat or vegetables)

ಮಸಾಲಾ ಕುಷ್ಕಾ ರೈಸ್ 

ಮಾಡುವ ವಿಧಾನ

ಅಕ್ಕಿಯನ್ನು ತೊಳೆದು ನೀರಿನಲ್ಲಿ 10ನಿಮಿಷ ನೆನೆಸಿಡಿ. ‌ನಂತರ ಒಲೆಯ ಮೇಲೆ ಕುಕ್ಕರ್ ಇಟ್ಟು, ಅದಕ್ಕೆ 4 ಚಮಚ ಎಣ್ಣೆ ಮತ್ತು 2 ಚಮಚ ತುಪ್ಪ ‌ಹಾಕಿ.‌ ಕಾದ ಬಳಿಕ ಅದಕ್ಕೆ ಚಕ್ಕೆ ಲವಂಗ, ಎಲಕ್ಕಿ, ಮರಾಠಿ ಮೊಗ್ಗು, ಸೋಂಪು ಹಾಕಿ 30 ಸೆಕೆಂಡ್ ಕೆಂಪಗಾಗುವವರೆಗೆ ಹುರಿಯಿರಿ.
ಕತ್ತರಿಸಿದ ಹಸಿಮೆಣಸಿನ ಕಾಯಿ ಸೇರಿಸಿ 30 ಸೆಕೆಂಡ್ ‌ಹುರಿಯಿರಿ. ಕತ್ತರಿಸಿ ಇಟ್ಟುಕೊಂಡ ಈರುಳ್ಳಿ ಪುದೀನ ಸೇರಿಸಿ ಮಧ್ಯಮ ಜ್ವಾಲೆಯಲ್ಲಿ ‌ 3 ನಿಮಿಷ ಹುರಿಯಿರಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 30‌ ಸೆಕೆಂಡ್ ‌ಹುರಿಯಿರಿ. ನಂತರ ಕತ್ತರಿಸಿದ ಟೊಮೆಟೊ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಟೊಮೆಟೊ ಮೃದುವಾಗುವವರೆಗೆ ಬೇಯಿಸಿ. ‌
Saakshatv cooking recipes Kuska rice

ನಂತರ ಅದಕ್ಕೆ ಅರಿಶಿನ ಪುಡಿ, ಖಾರದ ಪುಡಿ, ಗರಂ ಮಸಾಲೆ ಪುಡಿ, ಮೊಸರು ಹಾಕಿ 5 ನಿಮಿಷ ಬೆರೆಸಿ. ನೆನೆಸಿಟ್ಟುಕೊಂಡ ಅಕ್ಕಿಯನ್ನು ಹಾಕಿ 2 ನಿಮಿಷ ಚೆನ್ನಾಗಿ ಬೆರೆಸಿ.ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ.
ಈಗ 2 ಬಟ್ಟಲು ನೀರು ಹಾಕಿ ಕುಕ್ಕರ್ ಮುಚ್ಚಳವನ್ನು ಮುಚ್ಚಿ 1-2 ವಿಸಿಲ್ ಕೂಗಿಸಿದರೆ ರುಚಿಕರವಾದ ಕುಷ್ಕಾ ರೈಸ್ ಸವಿಯಲು ಸಿದ್ಧ.

ಅನ್ನ ಮಿಕ್ಕಿದ್ದರೆ ತಯಾರಿಸಿ ಸಿಹಿಯಾದ ರಸಗುಲ್ಲಾ !

ಅನ್ನ ಮಿಕ್ಕಿದ್ದರೆ ತಯಾರಿಸಿ ಸಿಹಿಯಾದ ರಸಗುಲ್ಲಾ !

ಮಾಡುವ ‌ವಿಧಾನ

ಉಳಿದ ಅನ್ನವನ್ನು ‌ ಮಿಕ್ಸಿಯಲ್ಲಿ ನೀರು ಹಾಕದೆ ರುಬ್ಬಿಕೊಳ್ಳಿ. ನಂತರ ತುಪ್ಪದಿಂದ ಗ್ರೀಸ್ ಮಾಡಿದ ಪಾತ್ರೆಗೆ ಅದನ್ನು ಹಾಕಿ.
ಅದಕ್ಕೆ ಮೈದಾ ಹಿಟ್ಟು, ಹಾಲಿನ‌ ಹುಡಿ ಮತ್ತು ಕಾರ್ನ್ ಪ್ಲೋರ್ ಸೇರಿಸಿ‌ ಚೆನ್ನಾಗಿ ಮಿಕ್ಸ್ ಮಾಡಿ.
ಈ ಮಿಶ್ರಣವನ್ನು ಹಿಟ್ಟಿನಂತೆ ಚೆನ್ನಾಗಿ ಕಲೆಸಿಕೊಳ್ಳಿ. ಹೆಚ್ಚು ನಾದಿದಷ್ಷು ರಸಗುಲ್ಲಾ ಮೃದುವಾಗುತ್ತದೆ.
ಬಳಿಕ ಆ ಹಿಟ್ಟಿನಿಂದ ‌ಚಿಕ್ಕ ‌ಚಿಕ್ಕ‌ ಉಂಡೆಗಳನ್ನು ಮಾಡಿ. ಅವುಗಳು ಒಡೆದಿಲ್ಲ ಎಂಬುದನ್ನು ಖಾತ್ರಿ ‌ಪಡಿಸಿಕೊಳ್ಳಿ.
ಬಳಿಕ ಒಂದು ಪಾತ್ರೆಯಲ್ಲಿ ‌ 1 ಕಪ್ ಸಕ್ಕರೆ ಮತ್ತು 1 ಕಪ್ ನೀರನ್ನು ತೆಗೆದುಕೊಂಡು ಚೆನ್ನಾಗಿ ಕುದಿಸಿ. ಅದಕ್ಕೆ ನಿಂಬೆ ರಸ ಮತ್ತು ಏಲಕ್ಕಿ ಪುಡಿ ಹಾಕಿ ಸಕ್ಕರೆ ಪಾಕ ತಯಾರಿಸಿ.
Saakshatv cooking recipes rice rasgulla

ಪಾಕ ಸಿದ್ಧವಾದ ನಂತರ ಸಕ್ಕರೆ ಪಾಕದಲ್ಲಿ, ರಸಗುಲ್ಲಾವನ್ನು ಚೆನ್ನಾಗಿ ಬೇಯಿಸಿ.‌ ಸಕ್ಕರೆ ‌ಪಾಕದ ಪಾತ್ರೆಯನ್ನು ಅರ್ಧ ಮುಚ್ಚಿ ಮಧ್ಯಮ ಉರಿಯಲ್ಲಿ 2 ರಿಂದ 3 ನಿಮಿಷ ಬೇಯಿಸಿ. 2 ನಿಮಿಷಗಳ ನಂತರ, ರಸಗುಲ್ಲಾಗಳ ಇನ್ನೊಂದು ಬದಿಯನ್ನು ಬೇಯಿಸಿ. ಇದರ ನಂತರ, ಕಡಿಮೆ ಉರಿಯಲ್ಲಿ 10 ರಿಂದ 15 ನಿಮಿಷಗಳ ಕಾಲ ಬೇಯಿಸಿ.
ಸ್ವಲ್ಪ ತಣ್ಣಗಾದ ಬಳಿಕ‌ ಸರ್ವ್ ಮಾಡಿ. ಸಿಹಿಯಾದ ರಸಗುಲ್ಲಾವನ್ನು‌ ಸವಿಯಿರಿ.

Tags: Foodfood recipies in kannadatasty food recipies
ShareTweetSendShare
Join us on:

Related Posts

crossing-paths-documentary-samyukta-hornad-human-elephant-conflict-karnataka

ಕ್ರಾಸಿಂಗ್ ಪಾತ್ಸ್ (CROSSING PATHS): ಮಾನವ-ಆನೆ ಸಂಘರ್ಷದ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಯುಕ್ತಾ ಹೊರನಾಡು ನಿರ್ದೇಶನ

by admin
August 12, 2026
0

'ವಿಶ್ವ ಆನೆಗಳ ದಿನ'ದಂದು ಅನಾವರಣಗೊಳ್ಳುತ್ತಿರುವ 'ಕ್ರಾಸಿಂಗ್ ಪಾತ್ಸ್' ಸಾಕ್ಷ್ಯಚಿತ್ರದ ಮೂಲಕ ನಟಿ ಸಂಯುಕ್ತಾ ಹೊರನಾಡು ಅವರು ಪ್ರಥಮ ಬಾರಿಗೆ ನಿರ್ದೇಶಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಈ ಸಾಕ್ಷ್ಯಚಿತ್ರವು ತೀವ್ರಗೊಳ್ಳುತ್ತಿರುವ...

second-case-of-seetharam-amazon-prime-streaming-record-250-million-minutes

ಅಮೆಜಾನ್ ಪ್ರೈಮ್‌ನಲ್ಲಿ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಐತಿಹಾಸಿಕ ಸಾಧನೆ: 25 ಕೋಟಿಗೂ ಅಧಿಕ ಸ್ಟ್ರೀಮಿಂಗ್ ನಿಮಿಷಗಳ ದಾಖಲೆ!

by admin
August 12, 2026
0

ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರಸಿದ್ದ ಕಂಟೆಂಟ್ ಆಧಾರಿತ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಕನ್ನಡದ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' (Second Case of Seetharam)...

varamahalakshmi-vrata-mantra-for-wealth-and-prosperity

ವರಮಹಾಲಕ್ಷ್ಮಿ ವ್ರತ ದಿನದಂದು ಒಂದು ಮನಇಚ್ಚಾ ಪದ 8 ಬಾರಿ ಹೇಳಿದರೆ ಅಷ್ಟ ಐಶ್ವರ್ಯ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ.

by admin
August 12, 2026
0

ಮನೆಗೆ ಅಷ್ಟ ಐಶ್ವರ್ಯ ತರುವ ಮಂತ್ರ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್ ನಿಮ್ಮ...

depuy-synthes-ralc-bangalore-orthopedic-training-center

ಮೂಳೆ ಶಸ್ತ್ರಚಿಕಿತ್ಸಾ ವಲಯದಲ್ಲಿ ಹೊಸ ಮೈಲಿಗಲ್ಲು, ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅತ್ಯಾಧುನಿಕ ತರಬೇತಿ ಕೇಂದ್ರ

by admin
August 12, 2026
0

ಬೆಂಗಳೂರು: ಮೂಳೆ ಚಿಕಿತ್ಸಾ ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ 'ಡಿಪ್ಯೂ ಸಿಂಥೆಸ್' ಸಂಸ್ಥೆಯು, ಬೆಂಗಳೂರಿನ ಪ್ರತಿಷ್ಠಿತ 'ರಾಮಯ್ಯ ಅಡ್ವಾನ್ಸ್ಡ್ ಲರ್ನಿಂಗ್ ಸೆಂಟರ್' (ಆರ್‌ಎಎಲ್‌ಸಿ) ಜೊತೆ ಮಹತ್ವದ ಒಪ್ಪಂದ...

nephroplus-q1-2026-net-profit-surges-41-percent-revenue-growth

ಏಷ್ಯಾದ ಅತಿದೊಡ್ಡ ಡಯಾಲಿಸಿಸ್ ನೆಟ್‌ವರ್ಕ್ ನೆಫ್ರೋಪ್ಲಸ್ ಭರ್ಜರಿ ಸಾಧನೆ, ನಿವ್ವಳ ಲಾಭದಲ್ಲಿ 41% ಭಾರೀ ಏರಿಕೆ!

by admin
August 12, 2026
0

ಬೆಂಗಳೂರು: ಕಿಡ್ನಿ ವೈಫಲ್ಯಕ್ಕೆ ತುತ್ತಾದ ರೋಗಿಗಳಿಗೆ ಆಸರೆಯಾಗಿರುವ, ಏಷ್ಯಾದ ಅತಿದೊಡ್ಡ ಡಯಾಲಿಸಿಸ್ ಸೇವಾ ಜಾಲವಾದ ‘ನೆಫ್ರೋಪ್ಲಸ್’ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭರ್ಜರಿ ಆರ್ಥಿಕ ಪ್ರಗತಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram