ಸ್ವಚ್ಛ ಭಾರತ ಕಲ್ಪನೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಸ್ವಚ್ಛತೆಯ ರಾಯಭಾರಿ
ಸ್ವಚ್ಛತೆಯ ನಿಜವಾದ ರಾಯಭಾರಿ ಇಲ್ಲಿದ್ದಾರೆ. ಇವರಿಗೆ ಈ ಹುದ್ದೆಯನ್ನು ಸರ್ಕಾರ ಅಥವಾ ಬೇರೊಬ್ಬರು ನೀಡಿಲ್ಲ. ಅವರು ತಮ್ಮ ನಿಸ್ವಾರ್ಥ ಸೇವೆಯಿಂದ ಸ್ವಚ್ಛ ಭಾರತ ಪರಿಕಲ್ಪನೆಗೆ ಕೊಡುಗೆಯನ್ನು ನೀಡುತ್ತಿದ್ದಾರೆ.

ಸಂಪಾಜೆ ಗ್ರಾಮದ ಗೂನಡ್ಕ ಮುಖ್ಯ ರಸ್ತೆಯ ಬಳಿ ವಾಸವಾಗಿರುವ ಅಬ್ದುಲ್ ಖಾದರ್ ಎಳೆಯ ವಯಸ್ಸಿನಲ್ಲಿ ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡರು. ಇದರಿಂದಾಗಿ ಅವರಿಗೆ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಜೀವನೋಪಾಯಕ್ಕಾಗಿ, ಅವರು ಬೀದಿ ವ್ಯಾಪಾರಿಯಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು. ಅವರು ಸರ್ಕಾರದಿಂದ ತ್ರಿಚಕ್ರ ವಾಹನವನ್ನು ಪಡೆದ ನಂತರ, ಸುಳ್ಯದಿಂದ ಸಂಪಾಜೆಗೆ ತಾಜಾ ಮೀನು ಮತ್ತು ಬಟ್ಟೆಗಳನ್ನು ವ್ಯಾಪಾರ ಮಾಡುತ್ತಿದ್ದರು.
ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣಿಸುವ ಸಮಯದಲ್ಲಿ, ಜನರು ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಎಸೆಯುತ್ತಿರುವುದು ಕಂಡುಬಂದಿತು. ಕಾಲಕ್ರಮೇಣ, ಪರಿಸರ ಸಂರಕ್ಷಣೆಗಾಗಿ ಏನಾದರೂ ಮಾಡಬೇಕೆಂಬ ಹಂಬಲ ಅವರಿಗೆ ಹುಟ್ಟಿತು. ಅದರ ನಂತರ, ಸಮಯ ಸಿಕ್ಕಗೆಲ್ಲಾ ಅವರು ರಸ್ತೆ ಪಕ್ಕದಲ್ಲಿ ಸ್ವಚ್ಛ ಭಾರತ ಲಾಂಛನವನ್ನು ಹೊಂದಿರುವ ಫಲಕಗಳನ್ನು ನೆಡುತ್ತಿದ್ದಾರೆ.

ಸ್ವಚ್ಛತೆ ಮತ್ತು ನೈರ್ಮಲ್ಯದ ಅಭ್ಯಾಸವನ್ನು ಅಳವಡಿಸಿಕೊಳ್ಳಬೇಕೆಂದು ಜನರನ್ನು ಒತ್ತಾಯಿಸುತ್ತಿದ್ದಾರೆ. ಕಸದ ಬುಟ್ಟಿಗಳನ್ನು ಇರಿಸಿ ಎಲ್ಲೆಂದರಲ್ಲಿ ಕಸ ಎಸೆಯುವ ಜನರಿಗೆ ಪಾಠ ಮಾಡುತ್ತಿದ್ದಾರೆ. ಪ್ರವಾಸಿಗರು ಒಂದು ಕ್ಷಣ ನಿಂತು ಸ್ವಚ್ಛ ಭಾರತ ಸಂದೇಶವನ್ನು ಗಮನಿಸುವಂತೆ ಗಾಂಧೀಜಿಯವರ ಕನ್ನಡಕದ ಮಾದರಿಯನ್ನು ಸ್ಥಾಪಿಸಿದ್ದಾರೆ.
ಪ್ರವಾಸಿಗರು ವಿಲೇವಾರಿ ಮಾಡುವ ಪ್ಲಾಸ್ಟಿಕ್ ಮತ್ತು ಇತರ ಕಸವನ್ನು ನೋಡಿ ಆತಂಕಗೊಂಡಿದ್ದೇನೆ ಎಂದು ಖಾದರ್ ಹೇಳುತ್ತಾರೆ. ಪರಿಸರ ಸಂರಕ್ಷಣೆಯ ಪರಿಕಲ್ಪನೆಗೆ ಸಣ್ಣ ಕೊಡುಗೆ ರೂಪದಲ್ಲಿ ತನ್ನ ಕಲ್ಪನೆಯನ್ನು ಜಾರಿಗೆ ತಂದಿರುವುದಾಗಿ ಅವರು ಹೇಳುತ್ತಾರೆ.
https://twitter.com/SaakshaTv/status/1380210170370818052?s=19
https://twitter.com/SaakshaTv/status/1380209602923356160?s=19
https://twitter.com/SaakshaTv/status/1380566775004241922?s=19
https://twitter.com/SaakshaTv/status/1380567052214132736?s=19
#ambassador #cleanliness








