ADVERTISEMENT
Saturday, May 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಭಾರತದ ಮಾರ್ಕೊಸ್ ಕಮಾಂಡೋ ಪಡೆಯ ಭಯಾನಕ ತರಬೇತಿ ಬಗ್ಗೆ ನಿಮಗೆಷ್ಟು ಗೊತ್ತು…!

Namratha Rao by Namratha Rao
April 22, 2021
in National, Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ನಾವುನೆಮ್ಮದಿಯಿಂದ ಇರಲು ನಮ್ಮ ದೇಶದ ಭದ್ರತಾ ಪಡೆಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಅದರಲ್ಲೂ ದೇಶದ ವಿಶೇಷ ಭದ್ರತಾ ಪಡೆಗಳ ಕಾರ್ಯ ಮೈ ನವಿರೇಳುವಂತೆ ಮಾಡುತ್ತದೆ.

ಇಂಥದ್ದೇ ವಿಶೇಷ ಭದ್ರತಾ ಪಡೆಗಳಲ್ಲೊಂದು ಮಾರ್ಕೊಸ್ ಕಮಾಂಡೋ ಫೋರ್ಸ್, ಈ ಪಡೆಯು ಭಯಾನಕವಾದ ಪಡೆಗಳಲ್ಲಿ ಒಂದಾಗಿದೆ. ಮಾರ್ಕೊಸ್ ಪಡೆ ಆಧುನಿಕ ರೀತಿಯ ಎಲ್ಲ ತರಬೇತಿಯನ್ನೂ ಹೊಂದಿವೆ. ಮಾರ್ಕೊಸ್ ಫೋರ್ಸ್ ನಲ್ಲಿ ಸೇರುವುದು ಸುಲಭವಾದ ಕೆಲಸವಲ್ಲ.

Related posts

ದಿನ ಭವಿಷ್ಯ (03-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (09-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

May 9, 2026
ಟಿಎಂಸಿ ಗೂಂಡಾಗಳಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ  : ನಮ್ಮ ಸರ್ಕಾರ ಬಂದ ಮೇಲೆ ಎಲ್ಲರನ್ನೂ ಮಟ್ಟ ಹಾಕುತ್ತೇವೆ ಎಂದ ಬಿಜೆಪಿ ನಾಯಕ

ಟಿಎಂಸಿ ಗೂಂಡಾಗಳಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ : ನಮ್ಮ ಸರ್ಕಾರ ಬಂದ ಮೇಲೆ ಎಲ್ಲರನ್ನೂ ಮಟ್ಟ ಹಾಕುತ್ತೇವೆ ಎಂದ ಬಿಜೆಪಿ ನಾಯಕ

May 8, 2026

ಏಕೆಂದರೆ ಇದರ ತರಬೇತಿ ಜಗತ್ತಿನಲ್ಲಿ ಎಲ್ಲ ತರಬೇತಿಗಳಿಗಿಂತ ತುಂಬಾ ಭಯಾನಕವಾಗಿದೆ. ಇಲ್ಲಿ ಕಮಾಂಡೋಗಳಿಗೆ ಮಾನಸಿಕ ಮತ್ತು ಶಾರೀರಿಕ ಕ್ರೂರತೆಗೆ ಹೆಚ್ಚು ಒತ್ತು ನೀಡಿ ತರಬೇತಿ ನೀಡಲಾಗುತ್ತೆ. ಇದರಿಂದ ಎಂಥ ಕಠಿಣ ಪರಿಸ್ಥಿತಿ ಬಂದರೂ ಮುನ್ನುಗ್ಗುವ ಮನಸ್ಸು ಕಮಾಂಡೋಗಳಿಗೆ ಸಾಧ್ಯವಾಗುತ್ತದೆ.

ಇದು ಭಾರತದ ವಿಶೇಷವಾದ ಮತ್ತು ಶಕ್ತಿಶಾಲಿ ಪಡೆಯಾಗಿದೆ. ಮಾರ್ಕೋಸ್ ಫೋರ್ಸ್ ಭಾರತೀಯ ನೌಕಾಪಡೆಯ ವಿಶೇಷ ಭದ್ರತಾ ಪಡೆ. ಭಾರತದ ಹೆಮ್ಮೆಯ ಮಾರ್ಕೋಸ್ ಪಡೆ ವಿಶ್ವದ ೧೦ ವಿಶೇಷ ಭದ್ರತಾ ಪಡೆಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಪಡೆಯನ್ನು‌ ಮೊದಲು‌ ಮರೈನ್ ಕಮಾಂಡೋ ಎಂದು ಕರೆಯಲಾಗುತ್ತಿತ್ತು.

ದಿ ಫೆವ್ ದಿ ಫಿಯರ್ಲೆಸ್ ಎಂಬುದು ಮಾರ್ಕೋಸ್ ಪಡೆಯ ಧ್ಯೇಯವಾಕ್ಯ. ಅತಿ ಕಠಿಣ ತರಬೇತಿ ಪಡೆದ ಬಳಿಕವಷ್ಟೇ ಇವರನ್ನು ಸೇವೆಗೆ ನಿಯೋಜಿಸಲಾಗುತ್ತದೆ. ಮೈ‌ನವಿರೇಳಿಸುವ ಕಠಿಣ ತರಬೇತಿಯಲ್ಲಿ ಕೆಲವರು‌ ಮಾತ್ರ ಆಯ್ಕೆಯಾಗುತ್ತಾರೆ.

ಮಾರ್ಕೋಸ್ ಪಡೆಯ ಕಾರ್ಯಾಚರಣೆ ಗುಪ್ತವಾಗಿರುತ್ತದೆ. ಇನ್ನೂ ಅಚ್ಚರಿ ಎನಿಸುವ ವಿಚಾರವಂದ್ರೆ ಮಾರ್ಕೋಸ್ ಸೈನಿಕರ ಮನೆಯವರಿಗೆ ಸಹ ಅವರು ಮಾರ್ಕೋಸ್ ಪಡೆಯಲ್ಲಿರುವುದು ತಿಳಿದಿರುವುದಿಲ್ಲ.

ಮುಂಬೈ, ಕೊಚ್ಚಿನ್ ಮತ್ತು ವಿಶಾಖಪಟ್ಟಣಂ ಮತ್ತಯ ಪೋರ್ಟ್ ಬ್ಲೇರ್ ನಲ್ಲಿರುವ ಭಾರತೀಯ ನೌಕಾಸೇನೆಯ ನೆಲೆಯಲ್ಲಿ ಇವರು ನೆಲೆಸಿರುತ್ತಾರೆ. ಕಠಿಣ ಪರಿಸ್ಥಿತಿ ಎದುರಾದ ಕೆಲವೇ ನಿಮಿಷಗಳಲ್ಲಿ ಆ ಸ್ಥಳ ತಲುಪಿ ಪ್ರಾಣ ಪಣಕ್ಕಿಟ್ಟು ದೇಶಕ್ಕಾಗಿ ಹೋರಾಡುತ್ತಾರೆ. ಇವರು ಅದೆಷ್ಟರ ಮಟ್ಟಿಗೆ ಗಟ್ಟಿಗರಾಗಿರುತ್ತಾರೆಂದರೆ, ಇವರ ಕೈ ಕಾಲು ಕಟ್ಟಿ ಸಮುದ್ರಕ್ಕೆಸೆದರೂ ಕಟ್ಟು ಬಿಚ್ಚಿಕೊಂಡು ಕೆಲವೇ ಕ್ಷಣಗಳಲ್ಲಿ ಮೇಲಕ್ಕೆ ಬರುತ್ತಾರೆ.

ಇವರನ್ನು ಎಲ್ಲ ತರಹದ ಕಾರ್ಯಾಚರಣೆಗೆ ಬಳಸಲಾಗುತ್ತದೆ. ಮಾರ್ಕೋಸ್ ಪಡೆ ಪಾಲ್ಗೊಂಡ ಕಾರ್ಯಾಚರಣೆ ಫೇಲ್ ಆಗುವುದರಲ್ಲಿ ಛಾನ್ಸೇ ಇಲ್ಲ. ಈ ಪಡೆ ನಮ್ಮ ದೇಶದ ಹೆಮ್ಮೆ ಎಂದರೆ ತಪ್ಪಾಗಲಾರದು. ಇತ್ತೀಚೆಗಷ್ಟೇ ನಡೆದ ಭಾರತ-ಚೀನಾ ಗಡಿ ಗಲಾಟೆಯಲ್ಲಿ ಮಾರ್ಕೋಸ್ ಪಡೆಯನ್ನು ಪ್ಯಾಂಗಾಂಗ್ ಸರೋವರದ ಬಳಿ ನಿಯೋಜಿಸಲಾಗಿತ್ತು.

ಮುಂಬೈ ಭಯೋತ್ಪಾದನಾ ದಾಳಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಈ ಪಡೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದೆ. ಇನ್ನು ನಿಮಗೆ ಮಾರ್ಕೋಸ್ ಕಮಾಂಡೋ ಆಗಿ ದೇಶ ಸೇವೆ ಮಾಡುವ ಆಸೆಯಿದ್ದಲ್ಲಿ ಮೊದಲು ಭಾರತೀಯ ನೌಕಾಸೇನೆ ಸೇರಬೇಕು. ನಾಲ್ಕು ಹಂತಗಳಲ್ಲಿ ಮಾರ್ಕೋಸ್ ಕಮಾಂಡೋ ಆಯ್ಕೆ ನಡೆಯುತ್ತದೆ. ಮೊದಲ ಹಂತದಲ್ಲಿ ಆಪ್ಟಿಟ್ಯೂಡ್ ಮತ್ತು ಫಿಸಿಕಲ್ ಟೆಸ್ಟ್ ನಲ್ಲಿ ತೇರ್ಗಡೆಯಾಗಬೇಕು.

ಇದರಲ್ಲಿ ಆಯ್ಕೆಯಾದವರಿಗೆ ಎರಡನೇ ಹಂತದಲ್ಲಿ ಐದು ವಾರಗಳ ಕಠಿಣ ತರಬೇತಿ ಇರುತ್ತದೆ. ಈ ಹಂತದಲ್ಲಿ ಕೆಡೆಟ್ಗಳಿಗೆ ಕೇವಲ ೨-೩ ತಾಸು‌ ನಿದ್ರಿಸಲು ಅವಕಾಶ ನೀಡಿ ಕಠಿಣ ತರಬೇತಿ ನೀಡಲಾಗುತ್ತದೆ. ಈ ತರಬೇತಿಯನ್ನು ಯಶಸ್ವಿಯಾಗಿ ಪೂರೈಸುವ ಕೆಲವೇ ಕೆಡೆಟ್ ಗಳನ್ನು‌ ಮುಂದಿನ ಹಂತದ ತರಬೇತಿಗಾಗಿ ಕೊಚ್ಚಿನ್ ನಲ್ಲಿರುವ ಡೈವಿಂಗ್ ಸ್ಕೂಲ್ ಗೆ ಕಳಿಸಲಾಗುತ್ತದೆ.

ಇದಾದ ಬಳಿಕ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುವುದರ ಬಗ್ಗೆಯೂ ತರಬೇತಿ ನೀಡಲಾಗುತ್ತದೆ. ನಂತರ ಭಾರತೀಯ ಭೂಸೇನೆಯಲ್ಲಿ ಪ್ಯಾರಾಶೀಟ್ ತರಬೇತಿಗಾಗಿ ಕಳಿಸಲಾಗುತ್ತದೆ. ಕೊನೆಗೆ ಜಂಗಲ್ ವಾರ್ ಟೆಕ್ನಿಕ್ಸ್ ಟ್ರೇನಿಂಗ್ ನೀಡಲಾಗುತ್ತದೆ. ಮೈ ಝುಂ‌ಎನ್ನಿಸುವ ಕಠಿಣ ತರಬೇತಿಯನ್ನು ಪಡೆದು ಪ್ರಾಣವನ್ನು ಪಣಕ್ಕಿಟ್ಟು ದೇಶಕ್ಕಾಗಿ ಹೋರಾಡುವ ಈ ವಿಶೇಷ ಭದ್ರತಾ ಪಡೆ ನಮ್ಮ ಹೆಮ್ಮೆ. ಮುಂದಿನ‌ಸಂಚಿಕೆಯಲ್ಲಿ ಮತ್ತೊಂದು ವಿಶೇಷ ಭದ್ರತಾ ಪಡೆಯ ಬಗ್ಗೆ ತಿಳಿಯೋಣ.

Tags: difficult trainingINDIAN ARMYmarcos comandomilitaryspecial defence force
ShareTweetSendShare
Join us on:

Related Posts

ದಿನ ಭವಿಷ್ಯ (03-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (09-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
May 9, 2026
0

ದಿನ ಭವಿಷ್ಯ : 09-05-2026 ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಅತ್ಯಂತ ಕಾರ್ಯನಿರತ ದಿನವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಹಿರಿಯ...

ಟಿಎಂಸಿ ಗೂಂಡಾಗಳಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ  : ನಮ್ಮ ಸರ್ಕಾರ ಬಂದ ಮೇಲೆ ಎಲ್ಲರನ್ನೂ ಮಟ್ಟ ಹಾಕುತ್ತೇವೆ ಎಂದ ಬಿಜೆಪಿ ನಾಯಕ

ಟಿಎಂಸಿ ಗೂಂಡಾಗಳಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ : ನಮ್ಮ ಸರ್ಕಾರ ಬಂದ ಮೇಲೆ ಎಲ್ಲರನ್ನೂ ಮಟ್ಟ ಹಾಕುತ್ತೇವೆ ಎಂದ ಬಿಜೆಪಿ ನಾಯಕ

by Shwetha
May 8, 2026
0

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಸಮರ ತಾರಕಕ್ಕೇರಿದ್ದು, ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ಭೀಕರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಆಪ್ತ...

ಬಂಗಾಳ ಗೆಲುವಿನ ಸಂಭ್ರಮದ ನಡುವೆಯೇ ಮೇ 10ಕ್ಕೆ ರಾಜ್ಯಕ್ಕೆ ಮೋದಿ ಆಗಮನ :ಡಾ ಸಿ ಎನ್ ಮಂಜುನಾಥ್

ಬಂಗಾಳ ಗೆಲುವಿನ ಸಂಭ್ರಮದ ನಡುವೆಯೇ ಮೇ 10ಕ್ಕೆ ರಾಜ್ಯಕ್ಕೆ ಮೋದಿ ಆಗಮನ :ಡಾ ಸಿ ಎನ್ ಮಂಜುನಾಥ್

by Shwetha
May 8, 2026
0

ಬೆಂಗಳೂರು ಪಶ್ಚಿಮ ಬಂಗಾಳದ ರಾಜಕೀಯ ರಣಕಣದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಮೇ 10 ರಂದು ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಎಂದು ಬೆಂಗಳೂರು...

ಮ್ಯಾಜಿಕ್ ಫಿಗರ್ ತಲುಪದ ಟಿವಿಕೆ; ಸೂಪರ್ ಸ್ಟಾರ್ ಸರ್ಕಾರ ರಚನೆಗೆ ಸ್ಟಾಲಿನ್ ಅಡ್ಡಗಾಲು ಹಾಕದಿರಲು ಕಾರಣವೇನು?

ಮ್ಯಾಜಿಕ್ ಫಿಗರ್ ತಲುಪದ ಟಿವಿಕೆ; ಸೂಪರ್ ಸ್ಟಾರ್ ಸರ್ಕಾರ ರಚನೆಗೆ ಸ್ಟಾಲಿನ್ ಅಡ್ಡಗಾಲು ಹಾಕದಿರಲು ಕಾರಣವೇನು?

by Shwetha
May 8, 2026
0

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಹಿಂದೆಂದೂ ಕಾಣದಂತಹ ನಾಟಕೀಯ ಬೆಳವಣಿಗೆಗಳು ನಡೆಯುತ್ತಿವೆ. ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ರಚನೆಯ ಕುರಿತು...

ನಿವೃತ್ತಿ ಸೌಲಭ್ಯಗಳಿಗಾಗಿ ಡಿಜಿಪಿ ಅಮಾನತು ಆದೇಶ ವಾಪಸ್: ರಾಮಚಂದ್ರ ರಾವ್ ಅವರಿಗೆ ಬಿಗ್ ರಿಲೀಫ್ ನೀಡಿದ ಸರ್ಕಾರ

ನಿವೃತ್ತಿ ಸೌಲಭ್ಯಗಳಿಗಾಗಿ ಡಿಜಿಪಿ ಅಮಾನತು ಆದೇಶ ವಾಪಸ್: ರಾಮಚಂದ್ರ ರಾವ್ ಅವರಿಗೆ ಬಿಗ್ ರಿಲೀಫ್ ನೀಡಿದ ಸರ್ಕಾರ

by Shwetha
May 8, 2026
0

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಡಿಜಿಪಿ ಡಾ. ರಾಮಚಂದ್ರ ರಾವ್ ಅವರ ಅಮಾನತು ಆದೇಶವನ್ನು ಸರ್ಕಾರ ಹಿಂಪಡೆದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram