ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ – ಮಕ್ಕಳನ್ನ ಕೊಲೆ ಮಾಡುವುದಾಗಿ ಧಮ್ಕಿ..!
ಹರಿಯಾಣ : ರೆಸ್ಟೋರೆಂಟ್ ನಲ್ಲಿ ಮಹಿಳೆಯ ಮೇಲೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಹರಿಯಾಣದ ಯಮುನಾನಗರದಲ್ಲಿ ಬೆಳಕಿಗೆ ಬಂದಿದೆ. ಸಂತ್ರಸ್ತೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಒಬ್ಬನ ಹೆಸರನ್ನ ಮಾಸನ ಗ್ರಾಮದ ಭಗವಾನ್ ಸಿಂಗ್ ಎಂದು ಹೇಳಿದ್ದಾಳೆ. ಉಳಿದವರು ಅಪರಿಚಿತರೆಂದು ತಿಳಿಸಿದ್ಧಾಳೆ.
ಮಹಿಳೆ ತನ್ನ ಪತಿಯೊಂದಿಗೆ ಡೈವೋರ್ಸ್ ಪಡೆದು ತನ್ನ ಇಬ್ಬರು ಹೆಣ್ಣಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದಳು.. ಈ ವೇಳೆ ಭಗವಾನ್ ಎಂಬಾತ ಆಕೆಯ ನಂಬರ್ ಪಡೆದು ಸಂಪರ್ಕ ಬೆಳೆಸಿದ್ದ.. ಇವರಿಬ್ಬರು ನಿತ್ಯ ಫೋನ್ ಮೂಲಕ ಸಂಪರ್ಕ ಹೊಂದಿದ್ದರು. ಕ್ರಮೇಣ ಪರಿಚಯವೂ ಗಾಢವಾಗಿತ್ತು ಬಳಿಕ ಆರೋಪಿ ಮಹಿಳೆಯನ್ನ ಮದುವೆಯಾಗುವುದಾಗಿ ನಂಬಿಸಿದ್ದ ಎನ್ನಲಾಗಿದೆ.
ಇದೇ ನಂಬಿಕೆಯಿಂದ ಮಹಿಳೆಯು ಆತನನ್ನ ಭೇಟಿಯಾಗಲು ರಾಡೌರ್ ನಲ್ಲಿರುವ ರೆಸ್ಟೋರೆಂಟ್ ಗೆ ತೆರಳಿದ್ದಾಳೆ. ಅಲ್ಲಿ ಭಗವಾನ್ ಜೊತೆಗೆ ಆತನ ನಾಲ್ವರು ಸ್ನೇಹಿತರು ಹಾಜರಿದ್ದರು ಎನ್ನಲಾಗಿದೆ. ಅಲ್ಲಿ ಆಕೆಗೆ ಪಾನೀಯದಲ್ಲಿಮತ್ತು ಮರುವ ಪದಾರ್ಥ ಮಿಶ್ರಣ ಮಾಡಿ ನೀಡಿದ್ದಾರೆ. ಮಹಿಳೆ ಪಜ್ಞೆತಪ್ಪಿದ ನಂತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ಇಚಾರ ಯಾರಿಗಾದರೂ ತಿಳಿಸಿದ್ರೆ ಆಕೆಯ ಮಕ್ಕಳನ್ನ ಕೊಲೆ ಮಾಡುವುದಾಗಿಯೂ ಬೆದರಿಕೆ ಒಡ್ಡಿದ್ದರು ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.