ಸಿನಿಮಾ ಸಂಬಂಧಿತ ಇತ್ತೀಚೆಗಿನ ಟಾಪ್ 5 ನ್ಯೂಸ್..!
KGF 2 ರಿಲೀಸ್ ಯಾವಾಗ..? ಸಿನಿಮಾತಂಡದಿಂದ ಹೊಸ ಅಪ್ ಡೇಟ್ ರಿವೀಲ್..!
KGF 2 ಕುರಿತಾದ ಹೊಸ ಅಪ್ಡೇಟ್ ಒಂದು ರಿವೀಲ್ ಆಗಿದೆ. ಸದ್ಯ ಕೆಜಿಎಫ್-2 ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಂಪ್ಲೀಟ್ ಆಗಿದೆ ಎಂಬ ವಿಚಾರ ಬಹಿರಂಗಗೊಂಡಿದ್ದು, ಈ ಕುರಿತಂತೆ ಸೌತ್ ಇಂಡಸ್ಟ್ರಿ ಸಿನಿಮಾಗಳ ಬಗ್ಗೆ ಮಾಹಿತಿ ನೀಡುವ ಚಿತ್ರ ವಿಶ್ಲೇಷಕ ಕೌಶಿಕ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಲಾಕ್ಡೌನ್ ನಂತರ ದೇಶಾದ್ಯಂತ ಸಿನಿಮಾ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಅಂತಿಮಗೊಳಿಸಲಿದೆ. ಇದು ಪ್ಯಾನ್ ಇಂಡಿಯಾನ್ ಸಿನಿಮಾವಾದರಿಂದ ಬಿಡುಗಡೆಗೆ ಭಾರತಾದ್ಯಂತ ಪರಿಸ್ಥಿತಿ ಅನುಕೂಲಕರವಾಗಿರಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಗರುಡನ ಸಾವಿನ ಅಂತ್ಯದಲ್ಲಿ ಚಾಪ್ಟರ್ 1 ಮುಕ್ತಾಯಗೊಂಡಿತ್ತು.. ಚಾಪ್ಟರ್ 2 ನಲ್ಲಿ ಅತಿ ಭಯಂಕರ ಅಧೀರನ ಜೊತೆಗೆ ಯಶ್ ಹೊಡೆದಾಡಲಿದ್ದು, ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳ ಜೊತೆಗೆ ಕ್ಯೂರಿಯಾಸಿಟಿ ಇರುವುದು , ಚಿತ್ರದ ಕ್ರೇಜ್ ಗೆ ಕಾರಣವಾಗಿದೆ..
KGF 2 ರಿಲೀಸ್ ಯಾವಾಗ..? ಸಿನಿಮಾತಂಡದಿಂದ ಹೊಸ ಅಪ್ ಡೇಟ್ ರಿವೀಲ್..!
ರಾಗಿಣಿ 31ನೇ ಹುಟ್ಟುಹಬ್ಬ- ರಕ್ತದಾನ ಶಿಬಿರ ಆಯೋಜನೆ
ಬೆಂಗಳೂರು : ಸ್ಯಾಂಡಲ್ ವುಡ್ ನ ತುಪ್ಪದ ಬೆಡಗಿ ರಾಗಿಣಿಗೆ 31ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.. ಈ ಹುಟ್ಟುಹಬ್ಬವನ್ನ ರಾಗಿಣಿ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ರಕ್ತದಾನ ಶಿಬಿರವನ್ನು ಏರ್ಪಡಿಸುವ ಮೂಲಕವಾಗಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.
ಕೊರೊನಾ ಪರಿಸ್ಥಿತಿಯಲ್ಲಿ ರಕ್ತದ ಕೊರತೆ ನೀಗಿಸುವ ನಿಟ್ಟಿನಲ್ಲಿ ರಕ್ತದಾನ ಶಿಬಿರ ಏರ್ಪಡಿಸಿದ್ದಾರೆ. ಬೆಂಗಳೂರಿನ ಜಯನಗರದ ಜೈನ್ ಯೂನಿವರ್ಸಿಟಿಯಲ್ಲಿ ಬ್ಲಡ್ ಕ್ಯಾಂಪ್ ಆಯೋಜಿಸಲಾಗಿದ್ದು, ಜೆನೆಕ್ಸ್ಟ್ ಚಾರಿಟೇಬಲ್ ಟ್ರಸ್ಟ್ ಹಾಗೂ ರಾಷ್ಟ್ರೋತ್ಥಾನ ಬ್ಲಂಡ್ ಬ್ಯಾಂಕ್ ನೇತೃತ್ವದಲ್ಲಿ ರಕ್ತದಾನ ನಡೆದಿದೆ.
ರಾಗಿಣಿ 31ನೇ ಹುಟ್ಟುಹಬ್ಬ- ರಕ್ತದಾನ ಶಿಬಿರ ಆಯೋಜನೆ
ಒಂದೊಳ್ಳೆ ಕಾರಣಕ್ಕೆ ಬೀದಿಗಿಳಿದ ಸತೀಶ್ ನೀನಾಸಂ
ಸ್ಯಾಂಡಲ್ವುಡ್ ನಟ ಸತೀಶ್ ನೀನಾಸಂ ಬೀದಿಗಿಳಿದು ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ದಿನಕ್ಕೆ ಸಾವಿರಾರು ಮಂದಿಗೆ ಆಹಾರ ವಿತರಣೆ ಮಾಡುವ ಮೂಲಕವಾಗಿ ನೆರವಾಗುತ್ತಿದ್ದಾರೆ. ಪ್ರತಿನಿತ್ಯ ಗಾಂಧಿ ಬಜಾರ್ನ ಸುತ್ತಮುತ್ತಲ ಪ್ರದೇಶದಲ್ಲಿರುವ ಸಾವಿರ ಜನರಿಗೆ ಆಹಾರ ವಿತರಿಸುತ್ತಿದ್ದಾರೆ. ತಳ್ಳುವ ಗಾಡಿಯ ವ್ಯಾಪಾರಿಗಳು, ಬಡವರು ಹಾಗೂ ನಿರ್ಗತಿಕರಿಗೆ ಊಟ ವಿತರಣೆ ಮಾಡಲಾಗುತ್ತಿದೆ. ಈ ಕಾರ್ಯದಲ್ಲಿ ಸತೀಶ್ ಅವರಿಗೆ ಸ್ನೇಹಿತರು ಕೈ ಜೋಡಿಸಿದ್ದಾರೆ.
ಒಂದೊಳ್ಳೆ ಕಾರಣಕ್ಕೆ ಬೀದಿಗಿಳಿದ ಸತೀಶ್ ನೀನಾಸಂ
ಕನ್ನಡ ಚಿತ್ರರಂಗದ ಹಿರಿಯ ನಟ ಕೃಷ್ಣೇಗೌಡ ನಿಧನ
ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ, ರಂಗಭೂಮಿ ಕಲಾವಿದ ಕೃಷ್ಣೇಗೌಡ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ ಕೆಲ ದಿನಗಳ ಹಿಂದೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಬಳಿಕ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ ಶ್ವಾಸಕೋಶದಲ್ಲಿ ಹೆಚ್ಚು ಇನ್ಫೆಕ್ಷನ್ ಕಾಣಿಸಿಕೊಂಡಿದ್ದ ಕಾರಣ ಕೃಷ್ಣಗೌಡರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇನ್ನು ಹಿರಿಯ ನಟ ಬಿ.ಎಂ.ಕೃಷ್ಣೇಗೌಡ ಅಗಲಿಕೆಗೆ ಕನ್ನಡ ಚಿತ್ರರಂಗದ ಗಣ್ಯರು, ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟ ಕೃಷ್ಣೇಗೌಡ ನಿಧನ
ತಂಗಿಗೆ ಅಸಭ್ಯ ವಿಡಿಯೋ ಕಳಿಸಲು ಹೇಳಿದ ನಿರ್ದೇಶಕ – ಕರಾಳ ಮುಖವಾಡ ಕಳಚಿದ ನಟಿಯ ಅಣ್ಣ
ಬಾಲಿವುಡ್ ನಲ್ಲಿ ಕಾಸ್ಟಿಂಗ್ ನಿರ್ದೇಶಕನೊಬ್ಬ ಯುವ ನಟಿಗೆ ಅಸಭ್ಯ ವಿಡಿಯೋ ಮಾಡಿ ಅದನ್ನು ಕಳಿಸುವಂತೆ ಹೇಳಿದ್ದಾನೆ. ಇದೀಗ ಆ ನಿರ್ದೇಶನ ಕರಾಳ ಮುಖವಾಡವನ್ನ ಆ ನಟಿಯ ಅಣ್ಣ (ನಟ) ಸಮಾಜಿಕ ಜಾಲತಾಣದಲ್ಲಿ ಬಟಾಬಯಲು ಮಾಡಿದ್ದಾನೆ. ಅಂದ್ಹಾಗೆ ಈತ ಸಹ ನಟನಾಗಿದ್ದು, ಅನೇಕ ಹಿಂದಿ ಸಿನಿಮಾಗಳು ದಾರಾವಹಿಗಲ್ಲಿ ಕಾಣಿಸಿಕೊಂಡಿದ್ದಾರೆ. ಜೋದಾ ಅಕ್ಬರ್ ದಾರವಾಹಿಯಲ್ಲೂ ನಟಿಸಿರುವ ರವಿ ಭಾಟಿಯಾ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ರವಿ ಭಾಟಿಯಾ ಸೋದರಿ ಸಹ ಸಿನಿಮಾರಂಗ ಪ್ರವೇಶಕ್ಕೆ ಪ್ರಯತ್ನಿಸುತ್ತಿದ್ದು, ಹಲವು ಆಡಿಷನ್ ಗಳಲ್ಲಿ ಭಾಗಿಯಾದ್ದಾರೆ. ಇದೇ ರೀತಿಯಾಗಿ ಆಡಿಷನ್ ಪಡೆದಿದ್ದ ಕಾಸ್ಟಿಂಗ್ ಡೈರೆಕ್ಟರ್, ಆಕೆಗೆ ಅಶ್ಲೀಲ ಚಿತ್ರಗಳನ್ನು ಕಳಿಸುವಂತೆ ಕೇಳಿದ್ದಾನೆ.. ಅಷ್ಟೇ ನಟಿ ಚಿತ್ರಗಳನ್ನು ಕಳಿಸಿದ್ದಾಳೆ. ನಂತರ ಮತ್ತೆ ಸಂದೇಶ ಕಳಿಸಿ, ‘ಹಸ್ತ ಮೈಥುನ ಮಾಡಿಕೊಳ್ಳುತ್ತಿರುವ ವಿಡಿಯೋ ಕಳಿಸು’ ಎಂದು ಕೇಳಿದ್ದಾನೆ.
ಇದು ಆಕೆಯ ಅಣ್ಣ ರವಿಗೆ ಗೊತ್ತಾಗಿದೆ.. ಬಳಿಕ ರವಿ ಭಾಟಿಯಾ ಆ ಕಾಸ್ಟಿಂಗ್ ಡೈರೆಕ್ಟರ್ ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಬಹಿರಂಗ ಪಡಿಸಿದ್ದು, ಆ ಡೈರೆಕ್ಟರ್ ನನ್ನೂ ಸಹ ಟ್ಯಾಗ್ ಮಾಡಿದ್ದಾರೆ. ಫೇಸ್ಬುಕ್ ಪೋಸ್ಟ್ನಲ್ಲಿ ಆತ ಕಳಿಸಿದ್ದ ಸಂದೇಶದ ಸ್ಕ್ರೀನ್ ಶಾಟ್ ಅನ್ನ ಸಹ ಹಚಿಕೊಂಡಿದ್ದಾರೆ.








