ADVERTISEMENT
Tuesday, July 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಇಂದಿನಿಂದ ಎಸ್‌ಬಿಐ ನಿಯಮ, ಚಾಲನಾ ಪರವಾನಗಿ ಸೇರಿದಂತೆ ಈ ಎಲ್ಲಾ ವ್ಯವಹಾರಗಳಲ್ಲಿ ಬದಲಾವಣೆ

Shwetha by Shwetha
July 1, 2021
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
SBI rules
Share on FacebookShare on TwitterShare on WhatsappShare on Telegram

ಇಂದಿನಿಂದ ಎಸ್‌ಬಿಐ ನಿಯಮ, ಚಾಲನಾ ಪರವಾನಗಿ ಸೇರಿದಂತೆ ಈ ಎಲ್ಲಾ ವ್ಯವಹಾರಗಳಲ್ಲಿ ಬದಲಾವಣೆ

ಇಂದಿನಿಂದ ಎಸ್‌ಬಿಐ ಬ್ಯಾಂಕ್ ನ ಎಟಿಎಂ ಬಳಕೆಯ ಶುಲ್ಕ ಸೇರಿದಂತೆ ಹಲವು ‌ಬದಲಾವಣೆಗಳು ಜಾರಿಗೆ ಬರಲಿದೆ.‌
ಮೂಲ ಉಳಿತಾಯ ಬ್ಯಾಂಕ್ ಠೇವಣಿಗಳ ಮೇಲಿನ ಸೇವಾ ಶುಲ್ಕ, ಚಾಲನಾ ಪರವಾನಗಿಯ ನಿಯಮಗಳೂ ಬದಲಾಗುತ್ತಿವೆ. ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯೂ ಬದಲಾಗಬಹುದು. ತೆರಿಗೆಯಲ್ಲೂ ಬದಲಾವಣೆ ಕಂಡುಬಂದಿದೆ.
ಇಂದಿನಿಂದ ಬದಲಾಗಲಿರುವ ನಿಯಮಗಳ ವಿವರಗಳು ಇಲ್ಲಿದೆ

Related posts

ನಾಡಹಬ್ಬದ ಘನತೆಗೆ ಧಕ್ಕೆ ತರಬೇಡಿ, ಕರಾವಳಿ ಸಂಸ್ಕೃತಿ ಪ್ರದರ್ಶನದ ವಸ್ತುವಲ್ಲ : ದಸರೆಯಲ್ಲಿ ಕಂಬಳದ ಪ್ರದರ್ಶನ ಬೇಡ -ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ತೀವ್ರ ವಿರೋಧ

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಬೇಡ: ಯದುವೀರ್ ಒಡೆಯರ್

July 7, 2026
ಪಾಕ್ ಅಧಿಕಾರಿಗಳ ಜೊತೆ ರಹಸ್ಯ ಸಭೆ ಆರೋಪ- ಹರಿಪ್ರಸಾದ್ ಆರೋಪಕ್ಕೆ ರಾಮ್ ಮಾಧವ್ ಗರಂ: ಕ್ಷಮೆ ಕೇಳದಿದ್ದರೆ ಕಾನೂನು ಸಮರ ಗ್ಯಾರಂಟಿ

ಪಾಕ್ ಅಧಿಕಾರಿಗಳ ಜೊತೆ ರಹಸ್ಯ ಸಭೆ ಆರೋಪ- ಹರಿಪ್ರಸಾದ್ ಆರೋಪಕ್ಕೆ ರಾಮ್ ಮಾಧವ್ ಗರಂ: ಕ್ಷಮೆ ಕೇಳದಿದ್ದರೆ ಕಾನೂನು ಸಮರ ಗ್ಯಾರಂಟಿ

July 7, 2026

ಎಸ್‌ಬಿಐ ನಿಯಮಗಳಲ್ಲಿ ಬದಲಾವಣೆ

ಜುಲೈ 1 ರಿಂದ ಸ್ಟೇಟ್ ಬ್ಯಾಂಕ್ ಹೊಸ ಸೇವಾ ಶುಲ್ಕವನ್ನು ಜಾರಿಗೊಳಿಸುತ್ತಿದೆ. ಎಟಿಎಂ, ಚೆಕ್ ಬುಕ್, ಹಣ ವರ್ಗಾವಣೆ ಮತ್ತು ಇತರ ಸೌಲಭ್ಯಗಳಲ್ಲಿ ಹೊಸ ಶುಲ್ಕ ವಿಧಿಸಲಾಗಿದೆ.
ಈ ಎಲ್ಲಾ ಶುಲ್ಕಗಳು ಜುಲೈ 1, 2021 ರಿಂದ ಅನ್ವಯವಾಗುತ್ತವೆ. ಒಂದು ತಿಂಗಳಲ್ಲಿ ಕೇವಲ 4 ವಹಿವಾಟುಗಳನ್ನು ಮಾತ್ರ ಮಾಡಬಹುದು. ಇದರರ್ಥ ನೀವು ಬ್ಯಾಂಕಿನಿಂದ ಹಣವನ್ನು ಹಿಂತೆಗೆದುಕೊಂಡರೂ ಸಹ, ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಒಂದು ತಿಂಗಳಲ್ಲಿ 4 ಕ್ಕೂ ಹೆಚ್ಚು ವಹಿವಾಟು ನಡೆದರೆ, 15 ರೂ. ಮತ್ತು ಜಿಎಸ್‌ಟಿ ಹಣವನ್ನು ಪಾವತಿಸಬೇಕಾಗುತ್ತದೆ.
Sbi
ಐಎಫ್‌ಎಸ್‌ಸಿ ಕೋಡ್ ಬದಲಾವಣೆ

ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕ್‌ನೊಂದಿಗೆ ವಿಲೀನಗೊಂಡಿದೆ ಮತ್ತು ಅದರ ಬ್ಯಾಂಕಿಂಗ್ ವಿವರಗಳು ಬದಲಾಗಲಿವೆ. ಜುಲೈ 1 ರಿಂದ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಿಗೆ ಐಎಫ್‌ಎಸ್‌ಸಿ ಕೋಡ್ ಬದಲಾಗಲಿದೆ ಎಂದು ಕೆನರಾ ಬ್ಯಾಂಕ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ. ಗ್ರಾಹಕರು ಹೊಸ ಕೆನರಾ ಐಎಫ್‌ಎಸ್‌ಸಿ ಕೋಡ್ ಅನ್ನು NEFT / RTGS / IMPS ಮೂಲಕ ಹಣವನ್ನು ಸ್ವೀಕರಿಸಲು ಬಳಸಬೇಕಾಗುತ್ತದೆ. ಕೆನರಾ ಬ್ಯಾಂಕ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಹೊಸ ಐಎಫ್‌ಎಸ್‌ಸಿಯನ್ನು ಕಾಣಬಹುದು. ಇದಲ್ಲದೆ, ಸಿಂಡಿಕೇಟ್ ಬ್ಯಾಂಕಿನ ಗ್ರಾಹಕರು ಈಗ ಬ್ಯಾಂಕಿನಿಂದ ಹೊಸ ಐಎಫ್‌ಎಸ್‌ಸಿ ಮತ್ತು ಎಂಐಸಿಆರ್ ಕೋಡ್‌ನೊಂದಿಗೆ ಹೊಸ ಚೆಕ್ ಬುಕ್ ಪಡೆಯಬೇಕಾಗುತ್ತದೆ.

ಸಿಲಿಂಡರ್ ಬೆಲೆ ಬದಲಾವಣೆ

ಭಾರತದ ತೈಲ ಕಂಪನಿಗಳು ಪ್ರತಿ ತಿಂಗಳ ಆರಂಭದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಶೀಲಿಸುತ್ತವೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಬದಲಾವಣೆಗಳನ್ನು ಮಾಡುತ್ತದೆ.

ಡಬಲ್ ಟಿಡಿಎಸ್ ರೂಪದ ದಂಡ

ಕೊರೋನಾ ಸಾಂಕ್ರಾಮಿಕದಿಂದ, ನೇರ ತೆರಿಗೆ ವಿವಾದ ಪರಿಹಾರ ಯೋಜನೆ ‘ವಿವಾದ್‌ ಸೆ ವಿಶ್ವಾಸ್’ ಅಡಿಯಲ್ಲಿ ಪಾವತಿ ಮಾಡುವ ಗಡುವನ್ನು ಸರ್ಕಾರ ಎರಡು ತಿಂಗಳವರೆಗೆ ವಿಸ್ತರಿಸಿತ್ತು. ಸಿಬಿಡಿಟಿಯ ಪ್ರಕಾರ, ನೇರ ತೆರಿಗೆ ವಿವಾದ್‌ ಸೆ ವಿಶ್ವಾಸ್ ಕಾಯ್ದೆ 2020 ರ ಅಡಿಯಲ್ಲಿ ಬಾಕಿ ಪಾವತಿಸುವ ಸಮಯವನ್ನು 2021 ರ ಜೂನ್ 30 ರವರೆಗೆ ವಿಸ್ತರಿಸಲಾಗಿತ್ತು. ತೆರಿಗೆಗೆ ಸಂಬಂಧಿಸಿದ ಬಾಕಿ ಇರುವ ಪ್ರಕರಣಗಳನ್ನು 100% ವಿವಾದಿತ ತೆರಿಗೆ ಮತ್ತು 25% ಪಾವತಿಸಿ ಇತ್ಯರ್ಥಪಡಿಸಬಹುದಿತ್ತು. ತೆರಿಗೆ ಮೊತ್ತವನ್ನು ಜೂನ್ 30ರ ಒಳಗೆ ಪಾವತಿಸಿದರೆ ಬಡ್ಡಿ ಮತ್ತು ದಂಡದ ಮೊತ್ತವನ್ನು ಸಂಪೂರ್ಣವಾಗಿ ಮನ್ನಾ ಮಾಡುವ ಸೌಲಭ್ಯ ಇದರಲ್ಲಿತ್ತು.‌ ಆದರೆ ಜುಲೈಯಿಂದ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡದೆ ಇದ್ದರೆ ಡಬಲ್ ಟಿಡಿಎಸ್ ರೂಪದ ದಂಡ ಬೀಳಲಿದೆ.

ಚಾಲನಾ ಪರವಾನಗಿಯ ನಿಯಮ ಬದಲಾವಣೆ

ಈಗ ಚಾಲಕನು ಕಲಿಕೆಯ ಪರವಾನಗಿ ಪಡೆಯಲು ಆರ್‌ಟಿಒ ಕಚೇರಿಗೆ ಹೋಗಬೇಕಾಗಿಲ್ಲ. ಈ ವ್ಯವಸ್ಥೆ ಜುಲೈ 1 ರಿಂದ ಪ್ರಾರಂಭವಾಗಲಿದೆ. ಕಲಿಕೆಯ ಪರವಾನಗಿ ನೀಡುವ ವ್ಯವಸ್ಥೆಯನ್ನು ರದ್ದುಪಡಿಸುವುದು ಸರ್ಕಾರದ ಯೋಜನೆಯಾಗಿತ್ತು. ಸಂಪೂರ್ಣ ತರಬೇತಿಯ ನಂತರ ಚಾಲಕರಿಗೆ ಶಾಶ್ವತ ಚಾಲನಾ ಪರವಾನಗಿ ನೀಡಬೇಕು. ಇದಕ್ಕಾಗಿ ಕೇಂದ್ರ ಮೋಟಾರು ವಾಹನ ಕಾಯ್ದೆಯನ್ನು ಬದಲಾಯಿಸಬೇಕಾಗಿತ್ತು. ಅದನ್ನು ಮಾರ್ಪಡಿಸುವುದು ಸುಲಭವಲ್ಲ. ಆದ್ದರಿಂದ, ಕಲಿಕೆ ಪರವಾನಗಿ ಪಡೆದವರು ಆರ್‌ಟಿಒ ಕಚೇರಿಗೆ ಹೋಗದಂತೆ ಸರ್ಕಾರ ಯೋಜನೆಯನ್ನು ಸಿದ್ಧಪಡಿಸಿದೆ.
wearing masks
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ಇದು ‌ಸಾಕ್ಷಾಟಿವಿ ಕಳಕಳಿ.

ಉತ್ತಮ ಆದಾಯ ನೀಡುವ ‌ಅಂಚೆ ಕಚೇರಿಯ 7 ಯೋಜನೆಗಳು#postofficeschemes https://t.co/Wi9syUu1S5

— Saaksha TV (@SaakshaTv) June 27, 2021

ಸಾಸಿವೆ ಎಣ್ಣೆಯ ಆರೋಗ್ಯ ಪ್ರಯೋಜನಗಳು#Saakshatv #healthtips #Mustardoil https://t.co/Wq9REM7Arz

— Saaksha TV (@SaakshaTv) June 27, 2021

ಕಡ್ಲೆಬೇಳೆ ಮಸಾಲೆ ವಡೆ#Saakshatv #cookingrecipe #masalavade https://t.co/tzZADVNKSM

— Saaksha TV (@SaakshaTv) June 27, 2021

ಮಾವಿನ ಹಣ್ಣಿನ ಸಿಪ್ಪೆಯ ಆರೋಗ್ಯ ಪ್ರಯೋಜನಗಳು#mangopeel #healthbenefits https://t.co/6Gee3KyOpO

— Saaksha TV (@SaakshaTv) June 26, 2021

ಟೋಕಿಯೊದಲ್ಲಿ ಕೊರೋನಾ ಸೋಂಕು ಹೆಚ್ಚಳ – ಒಲಿಂಪಿಕ್ ಕ್ರೀಡಾಕೂಟ ರದ್ದುಗೊಳಿಸುವಂತೆ ಆಗ್ರಹ#OlympicGames https://t.co/97mIY48IEe

— Saaksha TV (@SaakshaTv) June 30, 2021

#importantrules #SBIrules

Tags: SBI rules
ShareTweetSendShare
Join us on:

Related Posts

ನಾಡಹಬ್ಬದ ಘನತೆಗೆ ಧಕ್ಕೆ ತರಬೇಡಿ, ಕರಾವಳಿ ಸಂಸ್ಕೃತಿ ಪ್ರದರ್ಶನದ ವಸ್ತುವಲ್ಲ : ದಸರೆಯಲ್ಲಿ ಕಂಬಳದ ಪ್ರದರ್ಶನ ಬೇಡ -ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ತೀವ್ರ ವಿರೋಧ

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಬೇಡ: ಯದುವೀರ್ ಒಡೆಯರ್

by Shwetha
July 7, 2026
0

ಯದುವೀರ್ ಒಡೆಯರ್ ಅವರು ವಿಶ್ವವಿಖ್ಯಾತ ಮೈಸೂರು ದಸರಾ ವೇಳೆ ಕಂಬಳ ಆಯೋಜಿಸುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು, ಕಂಬಳವು ಕರಾವಳಿ ಭಾಗದ ವಿಶಿಷ್ಟ ಸಂಸ್ಕೃತಿ,...

ಪಾಕ್ ಅಧಿಕಾರಿಗಳ ಜೊತೆ ರಹಸ್ಯ ಸಭೆ ಆರೋಪ- ಹರಿಪ್ರಸಾದ್ ಆರೋಪಕ್ಕೆ ರಾಮ್ ಮಾಧವ್ ಗರಂ: ಕ್ಷಮೆ ಕೇಳದಿದ್ದರೆ ಕಾನೂನು ಸಮರ ಗ್ಯಾರಂಟಿ

ಪಾಕ್ ಅಧಿಕಾರಿಗಳ ಜೊತೆ ರಹಸ್ಯ ಸಭೆ ಆರೋಪ- ಹರಿಪ್ರಸಾದ್ ಆರೋಪಕ್ಕೆ ರಾಮ್ ಮಾಧವ್ ಗರಂ: ಕ್ಷಮೆ ಕೇಳದಿದ್ದರೆ ಕಾನೂನು ಸಮರ ಗ್ಯಾರಂಟಿ

by Shwetha
July 7, 2026
0

ಪಾಕಿಸ್ತಾನದ ಅಧಿಕಾರಿಗಳೊಂದಿಗೆ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಈಗ ಕಾನೂನು ಸಂಕಷ್ಟ ಎದುರಾಗಿದೆ. ಈ...

ರದ್ದಾದ BPL ಕಾರ್ಡ್‌ದಾರರಿಗೆ ಸರ್ಕಾರದ ರಿಲೀಫ್; ಅರ್ಹರಿಗೆ ಮರುಸ್ಥಾಪನೆ ಅವಕಾಶ

ರದ್ದಾದ BPL ಕಾರ್ಡ್‌ದಾರರಿಗೆ ಸರ್ಕಾರದ ರಿಲೀಫ್; ಅರ್ಹರಿಗೆ ಮರುಸ್ಥಾಪನೆ ಅವಕಾಶ

by Shwetha
July 7, 2026
0

ವಿವಿಧ ಕಾರಣಗಳಿಂದ BPL ಪಡಿತರ ಚೀಟಿ ಕಳೆದುಕೊಂಡಿದ್ದ 4 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ರಾಜ್ಯ ಆಹಾರ ಇಲಾಖೆ ಸಿಹಿ ಸುದ್ದಿ ನೀಡಿದೆ. ಅನರ್ಹರೆಂದು ಪರಿಗಣಿಸಿ APL ಕಾರ್ಡ್‌ಗಳಾಗಿ...

ಮುಡಾ ಹಗರಣದ ಕಾವು ಸಿದ್ದು ಪುತ್ರನಿಗೆ: ಯತೀಂದ್ರ ಖಾತೆ ಬದಲಾಯಿಸಲು ಸಿಎಂಗೆ ಹೋರಾಟಗಾರರ ಪತ್ರ

ಮುಡಾ ಹಗರಣದ ಕಾವು ಸಿದ್ದು ಪುತ್ರನಿಗೆ: ಯತೀಂದ್ರ ಖಾತೆ ಬದಲಾಯಿಸಲು ಸಿಎಂಗೆ ಹೋರಾಟಗಾರರ ಪತ್ರ

by Shwetha
July 7, 2026
0

ಮೈಸೂರಿನ ಮುಡಾ ನಿವೇಶನ ಹಂಚಿಕೆ ಹಗರಣದ ಕಿಚ್ಚು ಈಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರಿಗೂ ತಟ್ಟಿದೆ. ಮೈಸೂರು ನಗರಾಭಿವೃದ್ಧಿ...

ಕರ್ನಾಟಕದಲ್ಲಿ ಮದ್ಯ ಪ್ರಿಯರಿಗೆ ಬಿಗ್ ಶಾಕ್: ವಯಸ್ಸು 21 ಆಗದಿದ್ದರೆ ಎಣ್ಣೆ ಸಿಗುವುದು ಡೌಟು!- ಪ್ರಿಯಾಂಕ್ ಖರ್ಗೆ ವಾರ್ನಿಂಗ್!

ರಾಮಮಂದಿರ ನಿರ್ಮಾಣದಲ್ಲಿ ಭ್ರಷ್ಟಾಚಾರ ಆರೋಪ; ಪ್ರಿಯಾಂಕ್ ಖರ್ಗೆ ವಾಗ್ದಾಳಿ

by Shwetha
July 7, 2026
0

ಪ್ರಿಯಾಂಕ್ ಖರ್ಗೆ ಅವರು ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram