ADVERTISEMENT
Saturday, March 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ನಿಮಗಿತ್ತಾ ಈ ಮಳೆಗಾಲದ ಅನುಭವ:

Shwetha by Shwetha
July 23, 2021
in Marjala Manthana, Newsbeat, ನ್ಯೂಸ್ ಬೀಟ್, ಮಾರ್ಜಲ ಮಂಥನ
Sweet memories of rain days Vishwas bharadwaj Marjala manthana
Share on FacebookShare on TwitterShare on WhatsappShare on Telegram

ನಿಮಗಿತ್ತಾ ಈ ಮಳೆಗಾಲದ ಅನುಭವ: Marjala manthana rain day

ಮೊದಲ ಮಳೆ ಭೂಮಿಗೆ ಹನುಕಿದ ದಿನವೇ, ಆ ವರ್ಷದ ಮಳೆಯ ಸರಾಸರಿ ಅಂದಾಜು ಲೆಕ್ಕಾಚಾರ ಹಾಕುವ ವಯೋವೃದ್ಧರು ಆರಿದ್ರಾ ಮಳೆ ಜೋರು, ಮೃಗಶಿರಾ ಮಳೆ ಸಾಧಾರಣ, ಪುಷ್ಯಾ ಮಳೆ ಹೇಳ್ಕೊಳ್ಳೋ ಹಾಗಿಲ್ಲ, ಪುನರ್ವಸು ಮಳೆ ಅಡ್ಡಿಯಿಲ್ಲ ಅನ್ನುವ ಮಾತಾಡ್ತಾ ಇರ್ತಾರೆ.. ಇಂತದ್ದು ನಿಮ್ಮ ಕಿವಿಗೂ ಬಿದ್ದಿರುತ್ತೆ.. ಕೊನೆಯಲ್ಲಿ ಅದೇ ವೃದ್ಧರು ಉಪಸಂಹಾರಕ್ಕೆ ಎಂಬಂತೆ ಒಂದು ಮಾತಾಡಿ ಎದ್ದು ಬಿಡ್ತಾರೆ.. “ಎಂತದ್ದೇ ಹೇಳು ಮಾರಾಯ ನಮ್ ಕಾಲದಲ್ಲಿ ಇತ್ತಲ್ಲ ಆ ಮಳೆ ಈಗಿಲ್ಲ ಕಣ”

Related posts

sanju samson

ಟೀಮ್ ಇಂಡಿಯಾದ ಅತಿಥಿ ಆಟಗಾರ ಸಂಜು ಆಪತ್ಭಾಂದವನಾಗಿದ್ದು ಹೇಗೆ..?

March 7, 2026
ಕರ್ನಾಟಕದಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ: ಸಿಎಂ ಮಹತ್ವದ ಘೋಷಣೆ

ಕರ್ನಾಟಕದಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ: ಸಿಎಂ ಮಹತ್ವದ ಘೋಷಣೆ

March 7, 2026

ಅವತ್ತಿನ ಟಾಕು ಇವತ್ತಿಗೆ ಸಂಪೂರ್ಣ ಉಲ್ಟಾ! ಇವತ್ತಿನ ಮಳೆಗಾಲದಲ್ಲಿ ಪುನರ್ವಸು-ಪುಷ್ಯಾ ಮಳೆಗಳೇ ಡ್ಯಾಂ ತುಂಬಿಸುತ್ತಿದೆ, ಗುಡ್ಡ ಕುಸಿಯುವಂತೆ ಧೋ ಅಂತ ಸುರಿಯುತ್ತಿದೆ, ಮಲೆನಾಡು ಮತ್ತು ಕರಾವಳಿ ಹತ್ತಾರು ಹಳ್ಳಿಗಳಿಗೆ ಜಲದಿಗ್ಬಂಧನ ಹಾಕುತ್ತವೆ. Marjala manthana rain day

***
Sweet memories of rain days Vishwas bharadwaj Marjala manthana
ಇವತ್ತು ಚಕ್ಕಳಂಬಕ್ಕಳ ಹಾಕಿ ಕುಳಿತು ಯೋಚಿಸಿದ್ರೆ ನಮಗೂ ಹಾಗೇ ಅನ್ನಿಸುತ್ತೆ. ನಮ್ಮ ಕಾಲದಲ್ಲಿ, ನಾವು ಕಳೆದ ಬಾಲ್ಯದಲ್ಲಿ, ಬೆಳೆದ ತಾರುಣ್ಯದಲ್ಲಿ ಕಂಡ ಧಾರಾಕಾರ ಕುಂಬದ್ರೋಣ ಮಳೆಯ ವೇಗ, ಅಬ್ಬರ, ಸೊಗಡು, ಸಂಸ್ಕ್ರತಿ, ಥಂಡಿ, ರಚ್ಚೆ, ಒನಪು, ಭಯಾನಕತೆ, ರಮ್ಯತೆ ದಿವ್ಯತೆ ಯಾವುದೂ ಈಗಿಲ್ಲ. ಹಾಗೆ ಹೇಳುವ ಹಳೇ ಮುದುಕರಂತೆ ಈಗ ನಮಗೂ ನಮ್ಮ ಮಳೆಗಾಲದ ದಿನಗಳು ತನಗರಿವಿಲ್ಲದಂತೆ ಸ್ಮೃತಿ ಪಟಲದೊಳಗೆ ಅಂಕದ ಪರದೆ ಎತ್ತಿ ನಿಲ್ಲುತ್ತವೆ.

***

‘ಲಿಟಲ್ ಫ್ಲವರ್ ಸ್ಕೂಲ್’ ಅನ್ನುವ ಕಾನ್ವೆಂಟಿಗೆ ಹೋಗುತ್ತಿದ್ದಾಗ ಪಕ್ಕದಲ್ಲಿ ನಡೆದು ಬರ್ತಿದ್ದ ಬಾಲ್ಯದ ಆಪ್ತಮಿತ್ರ ವಿಶ್ವನಾಥ (ಈಗಲೂ ಆತ್ಮೀಯ ಗೆಳೆಯನೇ, ಸದ್ಯ ವರ್ಕ್ ಫ್ರಂ ಹೋಮ್ ನೆಪದಲ್ಲಿ ಊರಲ್ಲಿ ಮಳೆಗಾಲ ಎಂಜಾಯ್ ಮಾಡ್ತಾ ಹೊಟ್ಟೆ ಉರಿಸ್ತಿದ್ದಾನೆ)ನಿಗೆ ಕೆಸರು ಹಾರಿಸಬೇಕು ಅಂತ ಗುಂಡಿಯ ನೀರು ಹಾರಿಸುತ್ತಿದ್ದ ನೆನಪು, ಅಪ್ಪ ಕೊಡಿಸಿದ್ದ ಉದ್ದ ಕೋಲಿನ ಕೋವಿ ಛತ್ರಿಯ ಹಿಡಿಕೆ ಹಿಡಿದು ಮಳೆಯಲ್ಲಿ ನೆನಯುತ್ತಾ ಕುದುರೆಯಂತೆ ಓಡೋಡಿ ಬಂದಿದ್ದು, ಮಳೆ ಬರುತ್ತಿದ್ದಾಗಲೇ ಭೋರ್ಗರೆದು ಬೀಸುತ್ತಿದ್ದ ಗಾಳಿಗೆ ಮಗ್ಗುಲು ತಿರುಗಿಸಿ ಬೆತ್ತಲಾಗಿ ಹುಡುಗಿಯರ ಕಿಸಕ್ ನಗುವಿಗೆ ಕಾರಣವಾಗಿದ್ದ ಬಟನ್ ಛತ್ರಿ, ಗಟ್ಟಿ ಕಡ್ಡಿಗಳ ಚತ್ರಿಯಲ್ಲಿ ತಿರುಗಿಸಿ ಉಲ್ಟಾ ಹಿಡಿದು ಸೂರಿನ ನೀರು ತೋಡಿಕೊಂಡು ಆಟವಾಡಿದ್ದು, ಅಮೃತಾಂಜನ್ ಡಬ್ಬಿಯಲ್ಲಿ ಗೊಜಮಟ್ಟೆ ಹನಿಮೀನುಗಳನ್ನು ತುಂಬಿ ಪಾಕೆಟ್ ಅಕ್ವೇರಿಯಂನಂತೆ ಸಂಭ್ರಮಿಸಿದ್ದು. ಒಂದೇ ದಿನಕ್ಕೆ ಆ ಎಲ್ಲಾ ಗೊಜಮೊಟ್ಟೆ ಸತ್ತು ಕೊಳೆತು ವಾಸನೆ ಹೊಡೆದಿದ್ದು, ಗೊಜಮಟ್ಟೆ ಪುಟ್ಟ ಕಪ್ಪೆಗಳಾಗಿ ರೂಪಾಂತರ ಹೊಂದಿ ಮನೆಯ ಮೂಲೆ ಮೂಲೆ ತುಂಬಿಕೊಳ್ಳುತ್ತಿದ್ದಿದ್ದು ಇವೆಲ್ಲವೂ ಒಂದಕ್ಕಿಂತ ಒಂದು ಅತಿ ರಮ್ಯ ನೆನಪುಗಳು.

***
Sweet memories of rain days Vishwas bharadwaj Marjala manthana
ಮಳೆಗಾಲ ಶುರುವಾತಿಗೆ ವಾರ ಮುಂಚೆ ಬರುವ ಕೊಡೆ ಕಡ್ಡಿ ರಿಪೇರಿ ಮಾಡುವಾತ, ಚತ್ರಿ ಕಡ್ಡಿಗೆ ತಂತಿ ಬಿಗಿದು ಗಟ್ಟಿ ಮಾಡಿ, ಹರಿದು ಹೋದ ಕೊಡೆ ಬಟ್ಟೆಗೆ ತ್ಯಾಪೆ ಹಾಕಿ 2 ರೂಪಾಯಿ ಸರ್ವೀಸ್ ಚಾರ್ಜು ತೆಗೆದುಕೊಳ್ಳುವ ಬಿಳಿಗಡ್ಡದ ಅಲೆಮಾರಿ ಬುಡೇನ್ ಸಾಬು ಮತ್ತವನ ಛತ್ರಿ ರಿಪೇರಿ ಕಾಯಕ ಶ್ರದ್ಧೆ.

ಅದೊಂದು ಕೊಡೆ ಮಾತ್ರ ಶತಮಾನದ ಇತಿಹಾಸ ಹೊಂದಿತ್ತು. ಪ್ರಾಯಶಃ 90 ರಂಜಾನ್ ಉಪವಾಸ ಮುಗಿಸಿದ್ದ ಬುಡೇನ್ ಸಾಬುವಿಗಿಂತ ಹೆಚ್ಚು ಆ ಛತ್ರಿಗೆ ವಯಸ್ಸಾಗಿತ್ತೋ ಏನೋ! ಅದರ ಬಹುತೇಕ ಎಲ್ಲಾ ಕಡ್ಡಿಯ ಸಂದಿಗಳಿಗೂ ತಂತಿಯಿಂದ ಬಿಗಿದು ಕಟ್ಟಲಾಗಿತ್ತು. ಅದರ ಮರದ ಹಿಡಿಕೆಯ ಚರ್ಮ ಸುಕ್ಕುಗಟ್ಟಿ ಪಾರ್ಶವಾಯು ಹೊಡೆದಂತೆ ಸೊಟ್ಟಗಾಗಿತ್ತು. ಇನ್ನು ಅದರ ಕಬ್ಬಿಣದ ಮೈಕಟ್ಟು ಮೂಳೆ ಮುರಿದು ಚೊಂಟನಾದ ಫಕೀರನಂತೆಯೋ, ಪೋಲಿಯೋ ಪೀಡಿತನಂತೆಯೋ ಇತ್ತು.

ಆದ್ರೆ ಬ್ರಹ್ಮಾಂಡ ನಗು ತರಿಸುತ್ತಿದ್ದಿದ್ದು ಮಾತ್ರ ಆ ಆ್ಯಂಟಿಕ್ ಚತ್ರಿಯ ಮೈ ಬಟ್ಟೆ. ಇನ್ನು ತ್ಯಾಪೆ ಹಾಕಲು ಜಾಗವೇ ಇರಲಿಲ್ಲ ಅದರ ಹರಕಲು ಹರಕಲು ಮೈನಲ್ಲಿ. ಎಲ್ಲಿ ನೋಡಿದ್ರೂ, ತುರುಗಿಸಿ ಮುರುಗಿಸಿ ಇಣುಕಿದ್ರೂ ಅದ್ರ ಮೂಲ ಬಟ್ಟೆ ಕಾಣಿಸದಂತೆ ಅದರ ಮೈಯನ್ನು ತ್ಯಾಪೆಗಳೇ ಮುಚ್ಚಿ ಬಿಟ್ಟಿದ್ದವು. ಆದರೂ ಪ್ರತೀ ವರ್ಷ ಮಳೆಗಾಲಕ್ಕೆ ಮುಂಚೆ ಆ ಚತ್ರಿಗೆ ಸರ್ವೀಸ್ ಆಗುತ್ತಿತ್ತು. ತಲೆ ಕೆರದುಕೊಳ್ಳುತ್ತಲೇ ರಿಪೇರಿ ಮಾಡಿ ಹೋಗ್ತಿದ್ದ ಕೊಡೆ ಕಡ್ಡಿ ರಿಪೇರಿ ಮಾಡುವ ಬುಡೇನ್ ಸಾಬು. ನನಗೆ ನೆನಪಿರುವ ಮಟ್ಟಿಗೆ ಪ್ರಾಯಶಃ ಆ ಅಪೂರ್ವ ಹಾಗೂ ಅನೂಹ್ಯ ಛತ್ರಿ ತ್ಯಾಗರ್ತಿಯ ಮಹಾಬಲಗಿರಿ ರಾವ್ ಮಾಸ್ಟರ್ ತಾತಂದು ಅನ್ಸುತ್ತೆ.

***

ಕೊಡೆ ಹಿಡಿದು ಮಳೆಯಲ್ಲಿ ಸೈಕಲ್ ಹೊಡೆಯುವ ಮಜಾ ಇತ್ತಲ್ಲ ಅದನ್ನು ವಿವರಿಸೋಕೆ ಪದಗಳೇ ಇಲ್ಲ. ತ್ಯಾಗರ್ತಿಯ ಮಳೆಗಾಲ ಅತಿ ರಮ್ಯ; ರಸಕಾವ್ಯ, ಮಧುರಾ ಮಧುರಾ ಮಧುರಾ. ವಿವೇಕಾನಂದ್ ಹೈಸ್ಕೂಲ್ ಮೈದಾನದಲ್ಲಿ ಕೆರೆಯಂತೆ ನಿಲ್ಲುವ ನೀರಿನಲ್ಲಿ ಸೈಕಲ್ ರೇಸ್ ಮೋದ ಈಗ ನೆನಸಿಕೊಂಡರೂ ಮನಸನ್ನು ಹುಚ್ಚೆಬ್ಬಿಸುತ್ತದೆ. ಸುರಿವ ಮಳೆಯಲ್ಲಿ ಕ್ರಿಕೆಟ್ ಆಡ್ತಿದ್ದಿದ್ದು, ಕೆಂಪು ಜಂಬಿಟ್ಟಿಗೆ ಕಲ್ಲು ಕ್ವಾರಿಗಳ ಹೊಂಡದಲ್ಲಿ ಎಮ್ಮೆಗಳ ಸಂಗಡ ಸ್ವಿಮ್ಮಿಂಗ್ ಪ್ರಾಕ್ಟೀಸ್, ಈಶ್ವರ ದೇವಸ್ಥಾನದ ಕಲ್ಯಾಣಿ, ರಾಮತೀರ್ಥದ ದಂಡ ಮೇಲೆ ಕೂತು ಕಪ್ಪೆಗಳ ವಟರ್ ವಟರ್ ಸಂಗೀತ ಕಚೇರಿ ಕೇಳುತ್ತಿದ್ದಿದ್ದು, ನಾವಣಗೆರೆ ಕೆರೆ ಏರಿ ಮೇಲೆ ಕೊಡೆ ಹಿಡಿದು ವಾಕ್ ಮಾಡುತ್ತಿದ್ದಿದ್ದು, ಅಗಸರ ಹೊಳೆ ನೀರು ಹೊಸಂತೆ ರೋಡ್ ಅನ್ನು ಹೈಜಾಕ್ ಮಾಡಿದ್ದು, ಸಾಗರ ರೋಡ್ ನಲ್ಲಿ ಹಳ್ಳಕ್ಕೆ ಏರುವ ಹತ್ಮೀನುಗಳು, ಕಲ್ಲೇಡಿ, ಕಾರೇಡಿ, ಗೊಜಮಟ್ಟೆ ಹಿಡಿದು ಆಟವಾಡುತ್ತಿದ್ದ ಕಾಲ. ಒಂದೆರಡಲ್ಲಾ ನೂರಾರು ನೆನಪುಗಳಿವೆ ತ್ಯಾಗರ್ತಿ ಮಳೆಗಾಲದ ದಿನಗಳದ್ದು.
Sweet memories of rain days Vishwas bharadwaj Marjala manthana
ಜಂಬಿಟ್ಟಿಗೆ ಕೊರೆದ ಕಲ್ಲು ಕ್ವಾರಿ ಗುಂಡಿಯಲ್ಲಿ ಸ್ವಿಮ್ಮಿಂಗ್ ಫೂಲ್ನಂತೆ ನಿಲ್ಲುವ ನೀರಿನಲ್ಲಿ ಈಜು ಕಲಿಯುವ ಉತ್ಸಾಹ. ಒರೆಸಿಕೊಂಡು, ಒಣಗಿಸಿಕೊಂಡರೂ ಮತ್ತೆ ಮತ್ತೆ, ತೇವಗೊಳ್ಳುವ ದೇಹ, ಮುದಗೊಳ್ಳುವ ಮನ, ಹಸಿವ ಹೊಟ್ಟೆ, ಮಳೆಗಾಲದ ಗಡದ್ ನಿದ್ದೆ, ಎದ್ದರೆ ಇಳಿಸಂಜೆಯ ಮೋಡ ಮುಸುಕಿದ, ಮಳೆ ನಿಂತ ವಾತಾವರಣದಲ್ಲೂ ಸಣ್ಣಗೆ ಜೋಂಪು, ಮತ್ತಿನ ಹ್ಯಾಂಗ್ ಓವರ್.

ತ್ಯಾಗರ್ತಿಯಲ್ಲಿ ಕಳೆದ ಅಷ್ಟೂ ಮಳೆಗಾಲ ಒಂದಿಲ್ಲೊಂದು ಅವಿಸ್ಮರಣೀಯ ನೆನಪುಗಳ ಖಜಾನೆಯನ್ನೇ ಮನಸಿನಲ್ಲಿ ಅವಿತಿಟ್ಟಿದೆ. ಇನ್ನು ಆಗುಂಬೆಯ ನೆನಪಂತೂ ಅತ್ಯದ್ಭುತ.. ಅದನ್ನು ಬರೆಯಲು ಕೂತರೆ ಆರೇಳು ಸಂಪುಟಕ್ಕಾಗುವಷ್ಟು ಮಹಾಗ್ರಂಥವಾಗುವ ಸರಕಿದೆ. ಸದ್ಯಕ್ಕಿಷ್ಟು ಸಾಕು ನಾವು ಮಲೆನಾಡಿನ ಮಂದಿ ಎಷ್ಟು ಪುಣ್ಯವಂತರು ಅಂತ ನೀವು ಹೊಟ್ಟೆಕಿಚ್ಚು ಪಡಲಿ ಅಂತ ಇಷ್ಟೆಲ್ಲಾ ಬರೆದೆ. ನಮ್ಮ ಕಾಲದ ಭಾಗ್ಯವಾಗಲೀ, ಮಳೆಗಾಲದ ಮೋಜಾಗಲೀ ಅಥವಾ ಸ್ವಚ್ಛಂದತೆಯಾಗಲೀ ಇವತ್ತಿನ ಮಕ್ಕಳಿಗಿಲ್ಲ ಅನ್ನೋ ವಿಷಾದ ಮತ್ತೆ ಮತ್ತೆ ಕಾಡತ್ತೆ.

-ವಿಭಾ
***

ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ

 

Tags: marjala manthanavishwas bharadwaj
ShareTweetSendShare
Join us on:

Related Posts

sanju samson

ಟೀಮ್ ಇಂಡಿಯಾದ ಅತಿಥಿ ಆಟಗಾರ ಸಂಜು ಆಪತ್ಭಾಂದವನಾಗಿದ್ದು ಹೇಗೆ..?

by admin
March 7, 2026
0

ಸಂಜು ಸ್ಯಾಮ್ಸನ್.. ಹೌದು.. ದೇವರ ನಾಡಿನ ಹುಡುಗನ ಕ್ರಿಕೆಟ್ ಪಯಣದಲ್ಲಿವೆ ಹಲವು ಸ್ಪೂರ್ತಿದಾಯಕ ಕಥೆಗಳು..! ಅವಮಾನ, ಅಪಮಾನಗಳೇ ಇವರ ಯಶಸ್ಸಿನ ಮೆಟ್ಟಿಲು...! ಮೌನ ಕ್ರಾಂತಿಯಿಂದಲೇ ತನ್ನ ಹೆಸರಿಗೆ...

ಕರ್ನಾಟಕದಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ: ಸಿಎಂ ಮಹತ್ವದ ಘೋಷಣೆ

ಕರ್ನಾಟಕದಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ: ಸಿಎಂ ಮಹತ್ವದ ಘೋಷಣೆ

by Shwetha
March 7, 2026
0

ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಈ ಯೋಜನೆಯ ಮೂಲಕ ರಾಜ್ಯದ...

ವಸತಿ ಯೋಜನೆ ಸಬ್ಸಿಡಿ ಹೆಚ್ಚಳ: SC/ST ಫಲಾನುಭವಿಗಳಿಗೆ ₹3 ಲಕ್ಷ ಘೋಷಣೆ

ವಸತಿ ಯೋಜನೆ ಸಬ್ಸಿಡಿ ಹೆಚ್ಚಳ: SC/ST ಫಲಾನುಭವಿಗಳಿಗೆ ₹3 ಲಕ್ಷ ಘೋಷಣೆ

by Shwetha
March 7, 2026
0

ಕರ್ನಾಟಕ ರಾಜ್ಯ ಬಜೆಟ್ ಮಂಡಿಸಿದ ಸಿಎಂ ಸಿದ್ಧರಾಮಯ್ಯ ಅವರು ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದಾರೆ. ಈವರೆಗೆ ₹1.20 ಲಕ್ಷ ಇದ್ದ ವಸತಿ ಸಬ್ಸಿಡಿಯನ್ನು ₹2...

ಕರ್ನಾಟಕ ಬಜೆಟ್ 2026: ಸರ್ಕಾರಿ ನೌಕರರಿಗೆ ತೀವ್ರ ನಿರಾಸೆ, ಒಪಿಎಸ್ ಇಲ್ಲ, ಕ್ಯಾಂಟೀನ್ ಇಲ್ಲ ಹುಸಿಯಾದ  ನಿರೀಕ್ಷೆಗಳು

ಕರ್ನಾಟಕ ಬಜೆಟ್ 2026: ಸರ್ಕಾರಿ ನೌಕರರಿಗೆ ತೀವ್ರ ನಿರಾಸೆ, ಒಪಿಎಸ್ ಇಲ್ಲ, ಕ್ಯಾಂಟೀನ್ ಇಲ್ಲ ಹುಸಿಯಾದ ನಿರೀಕ್ಷೆಗಳು

by Shwetha
March 7, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ತಮ್ಮ ರಾಜಕೀಯ ಜೀವನದ ದಾಖಲೆಯ 17ನೇ ಹಾಗೂ 4.49 ಲಕ್ಷ ಕೋಟಿ ರೂಪಾಯಿ ಗಾತ್ರದ ಬೃಹತ್ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಸಮಗ್ರ...

ಕರ್ನಾಟಕ ಬಜೆಟ್ 2026: ನಿರುದ್ಯೋಗಿಗಳಿಗೆ ಸಿದ್ದರಾಮಯ್ಯ ಸರ್ಕಾರದ ಬಂಪರ್ ಕೊಡುಗೆ ; 56,432 ಖಾಲಿ ಹುದ್ದೆಗಳ ನೇಮಕಾತಿಗೆ ಚಾಲನೆ

ಕರ್ನಾಟಕ ಬಜೆಟ್ 2026: ನಿರುದ್ಯೋಗಿಗಳಿಗೆ ಸಿದ್ದರಾಮಯ್ಯ ಸರ್ಕಾರದ ಬಂಪರ್ ಕೊಡುಗೆ ; 56,432 ಖಾಲಿ ಹುದ್ದೆಗಳ ನೇಮಕಾತಿಗೆ ಚಾಲನೆ

by Shwetha
March 7, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ತಮ್ಮ ಐತಿಹಾಸಿಕ 17ನೇ ರಾಜ್ಯ ಬಜೆಟ್ ನಲ್ಲಿ ನಾಡಿನ ಲಕ್ಷಾಂತರ ನಿರುದ್ಯೋಗಿ ಯುವಜನತೆಗೆ ಆಶಾದಾಯಕ ಮತ್ತು ಅತ್ಯಂತ ಮಹತ್ವದ ಸಿಹಿಸುದ್ದಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram