ದಾವಣಗೆರೆ: ಎಷ್ಟೇ ಆಗಲಿ ಆ ಎಮ್ಮೆ ತನ್ನ ಕರುವಿಗೆ ಜನ್ಮ ನೀಡಿ ಹಾಲು ಉಣಿಸುತ್ತಿತ್ತು. ಆದ್ರೆ, ಯಾರೋ ಆ ಕರು ಕಳೆದ ಎರಡು ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಜೀವ ಬಿಟ್ಟಿದೆ.
ಆದ್ರೆ ಆ ಹೆತ್ತ ಕರುಳು ಎಮ್ಮೆ ಮಾತ್ರ, ಮೇವು ನೀರು ಬಿಟ್ಟು ಆ ಕರುವಿನ ಬಳಿ ಮೂಖ ವೇದನೆಯಿಂದ ಕಣ್ಣೀರು ಹಾಕಿ ಸುತ್ತಾಡುತ್ತಿದೆ. ಈ ದೃಶ್ಯವನ್ನು ನೋಡಿದ ಎಂತಹ ಕಲ್ಲು ಹೃದಯವನ್ನ ಸಹ ಕಲಕುವಂತಿದೆ.
ಹೌದು ಈ ದೃಶ್ಯ ಕಂಡು ಬಂದದ್ದು, ದಾವಣಗೆರೆ ಜಿಲ್ಲೆ ಚನ್ನಗಿರಿ ಪಟ್ಟಣದ ಅಗ್ನಿಶಾಮಕ ದಳದ ಕಚೇರಿ ಮುಂಭಾಗ. ಕಳೆದ ಶನಿವಾರ ಯಾರೋ ಕಲ್ಲು ಹೃದಯದವರು ಕರುವಿಗೆ ಅಪಘಾತ ಮಾಡಿಕೊಂಡು ಹೋಗಿದ್ದಾರೆ. ಆದ್ರೆ ಈ ವೇಳೆ ಆ ಕರು ವಿಲವಿಲ ಒದ್ದಾಡಿ ಸತ್ತೋಗಿದೆ. ಆದ್ರೆ ಆ ತಾಯಿ ಹೃದಯಿ ಎಮ್ಮೆ, ತನ್ನ ಕರುವನ್ನ ಬಿಟ್ಟು ಒಂದು ಕ್ಷಣ ಅಲ್ಲಾಡಿಲ್ಲ.
ಕಳೆದ ಎರಡು ದಿನದಿಂದ ಆ ಕರುವಿನ ಬಳಿ ಮೇವು ನೀರು ಬಿಟ್ಟು ಉಪವಾಸ ಅಲೆದಾಡಿದೆ. ಯಾರಾದ್ರು ಬಂದು ತನ್ನ ಕರುವನ್ನ ರಕ್ಷಣೆ ಮಾಡುತ್ತಾರಾ ಎಂದು ವಾಹನಗಳಿಗೆ ಅಡ್ಡಲಾಗಿ ನಿಂತು ಮೂಕ ವೇದನೆಯಲ್ಲೆ ಕೇಳಿಕೊಳ್ಳುತ್ತಿದೆ.
ಆದರೆ, ಮನುಷ್ಯನಿಗೆ ಅದರ ಭಾವನೆ ಮಾತ್ರ ಅರ್ಥವಾಗಿಲ್ಲ. ಹೀಗೆ ಅಲೆದಾಟವನ್ನ ನೋಡಿ ಯಾರೋ ಸ್ಥಳೀಯರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ದೃಶ್ಯ ನೋಡಿದ್ರೆ ಎಂತಹವರಿಗೆ ಕಣ್ಣಲ್ಲಿ ನೀರು ಜಿನುಗುವುದರಲ್ಲಿ ಯಾವುದೇ ಸಂದೇಹವಿಲ್ಲ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel