ಹುಬ್ಬಳ್ಳಿ: ಮೌಲ್ವಿಯೊಬ್ಬ ಹೂತಿಟ್ಟ ಕೋತಿ ಮೃತ ದೇಹ ಹೊರ ತೆಗೆಯಲು ಯತ್ನಿಸಿದ್ದು, ಗ್ರಾಮಸ್ಥರು ವಿರೋಧಿಸಿರುವ ಘಟನೆ ನಡೆದಿದೆ.
ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬ್ಯಾಹಟ್ಟಿಯ ಮೌಲ್ವಿ ಇಮಾಮ್ ಸಾಬ್ ತಡಸ ಎಂಬಾತನಿಂದ ಈ ಕೃತ್ಯ ನಡೆಯುತ್ತಿದ್ದಾಗ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಅದೇ ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ಹೂತಿಟ್ಟಿದ್ದ ಕೋತಿ ಮೃತದೇಹವನ್ನು ತಗೆಯುವ ಸಂದರ್ಭದಲ್ಲಿಯೇ ಜನರು ವಿರೋಧಿಸಿದ್ದಾರೆ. ಅದನ್ನು ಪ್ರಶ್ನಿಸಿದ ಜನರಿಗೆ ಮೌಲ್ವಿ ಇಮಾಮ್ ಸಾಬ್, ‘ಔಷಧಿಗಾಗಿ ಕೋತಿ ಬೇಕು ಎಂದು ಹೇಳಿದ್ದಾನೆ. ಸದ್ಯ ಇಮಾಮ್ ಸಾಬ್ ನನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.