ಗದಗ : ಗದಗ ಜಿಲ್ಲೆಯ ಬೆಟಗೇರಿ ಶ್ರೀರಾಮ ಮಂದಿರ ಬಳಿ ಗುರುವಾರ ತಡರಾತ್ರಿ ಹಸು ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ.
ಮೂವರು ಖದೀಮರಿದ್ದ ಗ್ಯಾಂಗ್ ನಿಂದ ಹಸು ಕಳ್ಳತನಕ್ಕೆ ಯತ್ನಿಸಲಾಗಿದೆ. ಹಸು ಕಳ್ಳತನ ಮಾಡುತ್ತಿದ್ದ ಕೃತ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಹಸು ಧ್ವನಿ ಕೇಳಿ ಸ್ಥಳೀಯರು ಹೊರ ಬರುತ್ತಿದ್ದಂತೆ ಖದೀಮರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮನೆಯ ಮೇಲೆ ನಿಂತ ಸ್ಥಳೀಯರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಅಲ್ಲಿದ್ದ ಜನರನ್ನು ಕಂಡು ಖದೀಮರು ಪರಾರಿಯಾಗಿದ್ದಾರೆ.