ಹಿಂದುತ್ವವಾದಿಯೊಬ್ಬ ಗಾಂಧೀಜಿಗೆ ಗುಂಡಿಕ್ಕಿದ್ದಾನೆ…. ರಾಹುಲ್ ಗಾಂಧಿ..
ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡುವ ಮೂಲಕ ಮತ್ತೊಮ್ಮೆ ರಾಜಕೀಯ ಚರ್ಚೆಗೆ ಹುಟ್ಟು ಹಾಕಿದ್ದಾರೆ.
ಹಿಂದುತ್ವವಾದಿಯೊಬ್ಬ ಗಾಂಧೀಜಿಗೆ ಗುಂಡಿಕ್ಕಿದ್ದಾನೆ , ಗಾಂಧೀಜಿ ಇನ್ನಿಲ್ಲ ಎಂದು ಹಿಂದುತ್ವವಾದಿಗಳೆಲ್ಲ ಭಾವಿಸಿದ್ದಾರೆ. ಎಲ್ಲಿ ಸತ್ಯವಿದೆಯೋ ಅಲ್ಲಿ ಬಾಪು ಇನ್ನೂ ಜೀವಂತವಾಗಿದ್ದಾನೆ!’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ಬರೆದುಕೊಂಡಿದ್ದಾರೆ. ‘A Hindutva had shot Gandhiji’, tweets Rahul Gandhi on Mahatma Gandhi’s death anniversary
एक हिंदुत्ववादी ने गाँधी जी को गोली मारी थी।
सब हिंदुत्ववादियों को लगता है कि गाँधी जी नहीं रहे।जहाँ सत्य है, वहाँ आज भी बापू ज़िंदा हैं!#GandhiForever pic.twitter.com/nROySYZ6jU
— Rahul Gandhi (@RahulGandhi) January 30, 2022
ದೇಶವು ಮಹಾತ್ಮ ಗಾಂಧಿಯವರ 74 ನೇ ಪುಣ್ಯತಿಥಿಯನ್ನು ಆಚರಿಸುತ್ತಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರಾದ ಮೋಹನ್ ದಾಸ್ ಕರಮಚಂದ್ ಗಾಂಧಿ (ಮಹಾತ್ಮ ಗಾಂಧಿ) 30 ಜನವರಿ 1948 ರಂದು ನಿಧನರಾದರು. ಈ ಸಂದರ್ಭದಲ್ಲಿ ಪ್ರಧಾನಿಯಿಂದ ಹಿಡಿದು ದೇಶದ ಹಲವು ಹಿರಿಯ ನಾಯಕರು ರಾಜ್ ಘಾಟ್ ನಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.
ಜನವರಿ 30, 1948 ರಂದು, ಮಹಾತ್ಮಾ ಗಾಂಧಿಯವರು ನವದೆಹಲಿಯ ಬಿರ್ಲಾ ಭವನದಲ್ಲಿ ನಾಥುರಾಮ್ ಗೋಡ್ಸೆಯಿಂದ ಹತ್ಯೆಗೀಡಾದರು.
Punjab Election – ಆಪ್ ಅಧಿಕಾರಕ್ಕೆ ಬಂದರೆ ಜನರ ಮೇಲೆ ಹೊಸ ತೆರಿಗೆ ಇರುವುದಿಲ್ಲ – ಕೇಜ್ರಿವಾಲ್