4 ವರ್ಷದ ಕಂದನನ್ನ ಮಚ್ಚಿನಿಂದ ಕೊಲೆಗೈದ ತಾಯಿ
ಹೆತ್ತ ತಾಯಿಯೇ ಮಗನನ್ನ ಮಚ್ಚಿನಿಂದ ಕೊಚ್ಚಿ ಕೊಂದಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೊಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ.
ಮಗುವಿನ ತಾಯಿ ಭವಾನಿ ಮಾನಸಿಕ ಅಸ್ವಸ್ಥೆಯಾಗಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ 4 ವರ್ಷದ ಶ್ರೀನಿವಾಸ್ ಎಂಬ ಮಗನನ್ನ ಕೊಲೆಗೈದಿದ್ದಾಳೆ. ಮಗುವಿನ ತಂದೆ ಶಂಕರ್ ಮನೆಯಲ್ಲಿ ಇಲ್ಲದ ವೇಳೆ ಈ ಕೃತ್ಯ ನಡೆದಿದೆ.
ಬೂದನೂರಿನ ಶಂಕರ್ ಜೊತೆ ಭವಾನಿಯವರಿಗೆ 5 ವರ್ಷದ ಹಿಂದೆ ಮದುವೆಯಾಗಿತ್ತು. ಇತ್ತೀಚೆಗೆ ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದರು. ಮನೆಯಲ್ಲಿ ಗಲಾಟೆ ಮಾಡಿಕೊಂಡು ತವರು ಮನೆಗೆ ಹೋಗಿದ್ದಳು, ಗಂಡ ಸಮಾಧಾನ ಪಡಿಸಿ ಕರೆತಂದಿದ್ದರು.
ಮನೆಯಲ್ಲಿ ಪತಿ ಇರದ ವೇಳೆ ಭವಾನಿ ಮಗುವಿನ ತಲೆಗೆ ನಾಲ್ಕೈದು ಭಾರಿ ಹೊಡೆದು ಹಲ್ಲೆ ಮಾಡಿದ್ದಾಳೆ. ಗ್ರಾಮಸ್ಥರ ನೆರವಿನಿಂದ ಎಚ್ ಡಿ ಕೋಟೆ ತಾಲೋಕು ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಮೈಸೂರಿಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನನ್ನಪ್ಪಿದೆ.