ದಾವಣಗೆರೆ: ಸಾವಿರಾರು ಭಕ್ತರ ಮಧ್ಯೆ ಪೂಜಾರಿ ನಾಡಿನ ನೆಮ್ಮದಿಗಾಗಿ ಕಾರ್ಣಿಕ ನುಡಿದಿದ್ದಾರೆ.
ದಾವಣಗೆರೆ ತಾಲೂಕಿನ ನೀಲಾನಹಳ್ಳಿ ಆಂಜನೇಯ ಸ್ವಾಮಿ ಕಾರ್ಣಿಕವನ್ನು ಪೂಜಾರಿ ನುಡಿದಿದ್ದಾರೆ. ಮಾತಾಯಿ ಬಂಗಾರದ ತೊಟ್ಟಿಲ ಕಟ್ಯಾಳಲೇ, ನರಲೋಕದ ಜನ ಚಿನ್ನದ ಕಿರೀಟ ಇಟ್ಟರಲೇ, ವರುಣ ಆರ್ಭಟಕ್ಕೆ ಹುಟ್ಟಿದ ಶಿಶು ಸಂತೋಷವಾದಿತಲೇ ಎಂದು ಕಾರ್ಣಿಕ ನುಡಿದಿದ್ದಾರೆ.
ಆಂಜನೇಯ ಸ್ವಾಮೀಯ ಕಾರ್ಣಿಕವನ್ನು ಸಾವಾರಿರು ಸಂಖ್ಯೆಯ ಭಕ್ತರು ಆಲಿಸಿದರು. ಬರುವ ದಿನಗಳಲ್ಲಿ ಮಳೆ ಬೆಳೆ ಸಮೃದ್ಧವಾಗಲಿದೆ. ಮಾನವ ಕುಲವೇ ದೇವರಿಗೆ ಚಿನ್ನದ ಕಿರೀಟ ಹಾಕಿ ಭಕ್ತಿ ಸಮರ್ಪಿಸುವಷ್ಟು ಸಮೃದ್ಧ ಕಾಲ ಬರಲಿದೆ ಎಂದು ಕಾರ್ಣಿಕ ವಿವರಿಸಿದ್ದಾರೆ.