ತುಮಕೂರು: ಹಣಕ್ಕಾಗಿ ಮಗನೇ ತಂದೆಯನ್ನು ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಕಡಬ ಗ್ರಾಮದಲ್ಲಿ ನಡೆದಿದೆ. ತಂದೆ ರೇಣುಕಯ್ಯ(65) ಸಾವನ್ನಪ್ಪಿದ ತಂದೆ ಎಂದು ಗುರುತಿಸಲಾಗಿದೆ. ರಮೇಶ್ (31) ಕೊಲೆ ಮಾಡಿದ ಮಗ ಎನ್ನಲಾಗಿದೆ. ಕೇವಲ ಒಂದೂವರೆ ಸಾವಿರ ಹಣಕ್ಕಾಗಿ ತಂದೆ ಹಾಗೂ ಮಗನ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಈ ಸಂದರ್ಭದಲ್ಲಿ ತಂದೆಯನ್ನೇ ಮಗ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಅಡಿಕೆ, ಎಲೆ ಮಾರಿದ ಹಣವನ್ನು ಮಗ ತನ್ನ ಬಳಿ ಇಟ್ಟುಕೊಂಡಿತದ್ದ. ಆದರೆ, ತಂದೆ ಆ ಹಣವನ್ನು ಕೇಳಿದ್ದಾರೆ. ಆದರೆ, ಮಗ ಕುಡಿದ ಮತ್ತಿನಲ್ಲಿ ಮಚ್ಚಿನಿಂದ ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ತಂದೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸದ್ಯ ಆರೋಪಿಯನ್ನು ಗುಬ್ಬಿ ಪೊಲೀಸರು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.