ಮಡಿಕೇರಿ: ವಿದ್ಯಾರ್ಥಿಯ ಅಪಘಾತಕ್ಕೆ ನಾನೇ ಕಾರಣ ಎಂದು ಮನನೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ.
ಈ ಘಟನೆ ತಾಲೂಕಿನ (Madikeri) ಹೆರವನಾಡಿನಲ್ಲಿ ನಡೆದಿದೆ. ತಮ್ಮಯ್ಯ (57) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇತ್ತೀಚೆಗೆ ಮಡಿಕೇರಿ ಚೈನ್ ಗೇಟ್ ಹತ್ತಿರ ಬೈಕ್ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಈ ಘಟನೆಯಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಧನಲ್ ಸುಬ್ಬಯ್ಯ (24) ಗಂಭೀರವಾಗಿ ಗಾಯಗೊಂಡು, ಕೆಳಗೆ ಬಿದ್ದಿದ್ದ. ಆ ವೇಳೆ ಆತನ ದೇಹ ಲಾರಿಗೂ ತಾಗಿದ್ದರಿಂದಾಗಿ ಆತ ತೀವ್ರವಾಗಿ ಗಾಯಗೊಂಡಿದ್ದ. ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ.
ಯುವಕನ ತಲೆಗೆ ತೀವ್ರ ಪೆಟ್ಟಾಗಿದೆ ಎಂಬ ಸುದ್ದಿ ಕೇಳುತ್ತಿದ್ದಂತೆ ತಮ್ಮಯ್ಯ ಅವರು ತುಂಬಾ ಪಶ್ಚಾತ್ತಾಪ ಪಟ್ಟಿದ್ದಾರೆ. ನನ್ನಿಂದಲೇ ಯುವಕನ ಸ್ಥಿತಿ ಹೀಗಾಯಿತೆಂದು ನೋವಾಗಿ, ಯುವಕ ಸಾವನ್ನಪ್ಪಿದ ಸಮಯದಲ್ಲೇ ನೇಣಿಗೆ ಶರಣಾಗಿದ್ದಾರೆ.