ಬೆಂಗಳೂರು: ಮಹಿಳೆಯೊಬ್ಬರು ಎಎಸ್ ಐಗೆ ಬಾಟಲ್ ನಿಂದ ಇರಿದ ಘಟನೆ ನಡೆದಿದೆ.
ಈ ಘಟನೆ ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಗಂಗಮ್ಮನ ಗುಡಿ ಎಎಸ್ ಐ ನಾಗರಾಜ್ ಮೇಲೆಯೇ ದಾಳಿ ಮಾಡಿದ್ದಾರೆ.
ಅಶ್ವಿನಿ ಎಂಬ ಮಹಿಳೆಯೇ ಬಾಟಲ್ ನಿಂದ ಇರಿದಿದ್ದಾರೆ. ಈ ಘಟನೆ ಶನಿವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಎಎಸ್ಐ ಅವರ ಬಲಭಾಗದ ಕೈಗೆ ಗಾಯವಾಗಿದೆ.
ಜಾಗದ ವಿಚಾರಕ್ಕೆ ನ್ಯಾಯ ಸಿಗದ್ದಕ್ಕೆ ಠಾಣೆಗೆ ಒಳಗಡೆ ಹೋಗಿದ್ದ ಮಹಿಳೆ ಆಕ್ರೋಶದಲ್ಲಿ ಬಾಟಲ್ ನಿಂದ ಚುಚ್ಚಿದ್ದಾಳೆ ಎನ್ನಲಾಗಿದೆ. ಈ ಮಹಿಳೆಯು ಮಾನಸಿಕವಾಗಿ ತೀವ್ರವಾಗಿ ಅಸ್ವಸ್ಥರಾಗಿರುವ ಹಿನ್ನೆಲೆಯಲ್ಲಿ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.