ಪರಮಾತ್ಮಾ ಮನಶ್ಯಾಗ ಕಣ್ಣು ಕೊಟ್ಟ, ಸುಂದರ ಜಗತ್ತು ನೋಡಪಾ ಅಂದ, ಇವ ನೋಡಿದ, ನೋಡಿ ತನಗ ಹೆಂಗ ಬೇಕಲಾ ಹಂಗ ಅದನ್ನ ತಿರುವ-ಮುರುವ ಮಾಡಿ, ತನ್ನ ಅರ್ಧ ಬುಧ್ಧಿ ಉಪಿಯೋಗಿಸಿ ಇದು ಹಿಂಗ ಅಂತ ಹೇಳಿ, ಮಂದಿ ತಲಿ ಕೆಡಿಸಿದ.
ಹಲವಾರು ತಂತ್ರಜ್ಞಾನಗಳ ಅನ್ವೇಷಣೆಗಳಲ್ಲಿ ಎಲ್ಲ ನಾನೇ ಕಂಡು ಹಿಡಿದೇ ಎನ್ನುವುದು ಮೇಲ್ನೋಟಕ್ಕೆ ಕಂಡರು ಅದರ ಹಿಂದಿರೋ ದೈವಿ ಶಕ್ತಿ ಅರಿತಿಲ್ಲ. ಎಲ್ಲವೂ ಸರಿ, ನಮ್ಮ ಸುತ್ತಿರೋ ಪಂಚ ತತ್ವಗಳು ಮನುಷ್ಯನ ಕೈಗಳಿಗೆ ಎಟುಕದು.
ಆದರೂ ನಾನು ಏನನ್ನೋ ಸಾಧಿಸಿದ್ದೇನೆ ಎಂಬ ಮಾನಸಿಕ ಸ್ಥಿತಿ, ಮೇಲಕ್ಕೆ ಪೇಟೆಂಟ ಬೇರೆ.
ಒಂದು ಬೀಜ ಮೊಳಕೆ ಒಡೆಯ ಬೇಕಾದರೆ ಮಣ್ಣಿನಲ್ಲಿ ಪಿ.ಎಚ್ ಮತ್ತು ಇ.ಸಿ. ಅಷ್ಟಿರಬೇಕು ಇಷ್ಟಿರಬೇಕು ಅನ್ನುವದೆಲ್ಲ ಇತ್ತಿಚಿಗಿನ ಅನ್ವೇಷಣೆ, ಅದಕ್ಕಿನ ಮುಂಚೆಯಿಂದ ಪ್ರಕೃತಿ ಹುಟ್ಟಿ ಸಬಲವಾಗಿ ನಿಂತಿದ್ದು ಕಣ್ಣ ಮುಂದಿದೆ.
ಭೂಮಿಯ ಕೆಳಗೆ ಒಂದು ದೊಡ್ಡ ಜಗತ್ತು ನಮ್ಮ ಕಣ್ಣಿಗೆ ಕಾಣದೆಯೆ ತನ್ನ ಕೆಲಸ ಮಾಡುತ್ತ ಬಂದಿರುವುದು ಹಲವಾರು ವಿಜ್ಞಾನಿಗಳು ಗಮನಿಸಿದ್ದಾರೆ.
ಮೈಸಿಲಿಯಂ, ಮೈಕೋರೈಜಾ, ಟ್ರೈಕೋಡರ್ಮಾ, ಶೀಲಿಂಧ್ರಗಳು, ಸೂಕ್ಷ್ಮ ಜೀವಾಣುಗಳು, ಬೇರುಗಳಿಗೆ ರಸವತ್ತಾದ ಆಹಾರ ಒದಗಿಸುತ್ತ ಬಂದಿರುವುದು ಇವತ್ತಿನ ರೈತ ಮನಗಾಣಬೇಕಿದೆ. ಈ ಮಟ್ಟದ ತಿಳುವಳಿಕೆ ಎಲ್ಲ ಕೃಷಿ ವಿಶ್ವ ವಿದ್ಯಾಲಯಗಳು ಮತ್ತು ಆಧ್ಯಾತ್ಮ ಕೃಷಿಕರು ಮಿಕ್ಕೆಲ್ಲ ರೈತರಿಗೆ ತಿಳಿಸಿ ಹೇಳಬೇಕಿದೆ.
ಎಕರೆಗೆ 30 ಗಿಡ-ಮರಗಳು ಇರುವಂತೆ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಗೊಬ್ಬರವನ್ನು ಖರಿದಿ ಮಾಡಿ ಭೂಮಿಗೆ ಉಣ ಬಡಿಸುವ ಹೊಸ ಪಧ್ಧತಿ ರೈತನ ಬೆನ್ನೆಲುಬನ್ನೆ ಮುರಿದು ಹಾಕಿದೆ. ಕೀಟನಾಶಕಗಳು ಮನುಷ್ಯನ ಮುಂದಿನ ಪಿಳಿಗೆಯನ್ನ ನಾಶ ಮಾಡುವತ್ತ ದಾಪುಗಾಲು ಹಾಕಿದೆ.
ಎಂಡೋಸಲ್ಫಾನ, ಮೋನೊಕ್ರೋಟೋಫಾಸ್, ಈ ಜಾತಿಯ ರಾಸಾಯ್ನಿಕಗಳು ಮನುಷ್ಯನ ಡಿ.ಎನ.ಎ ಅಂದರೆ (ಅಣುವಿನ ಸಂರಚನೆಯನ್ನು) ಸಂಪೂರ್ಣವಾಗಿ ಹದಗೆಡಿಸಿವೆ. ಈ ವಿಷ ವರ್ತುಲದಿಂದ ಹೊರಬರಲು 30 ರಿಂದ 40 ವರ್ಷಗಳೇ ಬೇಕಾದೀತು. ಒಮ್ಮೆ ರಾಸಾಯ್ನಿಕ ಸಿಂಪಡಿಸಿದರೆ ಭೂಮಿಯಿಂದ ಅದು ತೊಳೆದು ಹೋಗಲು 30 ವರ್ಷ ಬೇಕು.
ಆದರೆ ಇವತ್ತಿನ ನಮ್ಮ ರೈತ ಯಾವದೇ ಪರಿಸ್ಥಿಯನ್ನು ಅರಿಯದೆ, ಒಟ್ಟಾರೆ ಕೀಟ ಬಾಧೆ ದೂರವಾಗಬೇಕು, ನಾಲ್ಕು ದುಡ್ಡು ಜಾಸ್ತಿ ಬರಬೇಕು ಎನ್ನುವ ತವಕದಲ್ಲಿ ತನಗೆ ತಿಳಿದ ಪಧ್ಧತಿಯಲ್ಲೆ ರಾಸಾಯನಿಕಗಳನ್ನು ಬಳಸಿ ಇವತ್ತು ಕಂಗಾಲ ಸ್ಥಿತಿಗೆ ಬಂದಿರುವುದು ಗಮನಾರ್ಹ.
ಬೆಳಗಾವಿ ಜಿಲ್ಲೆಯಲ್ಲೆ ನಮ್ಮಗೆ 8 ರಿಂದ 10 ಸಿಲಿಬ್ರಿಯಲ್ಲ ಪಾಲ್ಸಿ ಅಂಥ ಕೇಸುಗಳು ಕಂಡು ಬಂದಿರುವುದು ನಮ್ಮನ್ನು ಭಯಭೀತ ಗೊಳಿಸಿವೆ.
ಕೃಷಿ ಅಂದರೆ ಯಾವುದೇ ಬಾಹ್ಯ ಖರ್ಚುಗಳಿಲ್ಲದೆ ಸುಭೀಕ್ಷದೆಡೆಗೆ ಬದುಕು ಸಾಗಿಸುವುದು ಎಂದರ್ಥ.
ಬಹುಷ: ಈ ನನ್ನ ಲೇಖನೆಗೆ ಅನೇಕ ಟೀಕೆಗಳು ಬರಬಹುದು. ಬರಲಿ, ದೂಷಿಸುವರು ದೂಷಿಸಲಿ, ಭಯವಿಲ್ಲ.
ಅಣ್ಣಯ್ಯ ತಮ್ಮಯ್ಯಗಳಿರಾ, ನಾವು ತಿಳಿದು ತಿಳಿದು ನಮ್ಮ ಸಮಾಜಕ್ಕೆ ವಿಷ ಉಣಬಡಿಸುತ್ತಿದ್ದೇವೆ, ಒಂದು ವಿಷಮ ವಿಷ ಪೂರಿತ ಸಮಾಜ ನಿರ್ಮಾಣ ಮಾಡುತ್ತಿದ್ದೇವೆ, ಇದು ನಮಗೆ ಎಚ್ಚರ ಘಂಟೆ ಅನ್ನಿಸುವುದಿಲ್ಲವೇ?
ಮೊದಲು 100 ಕಿಲೋ ಚೀಲ ಹೊರುವ ರೈತ ಇವತ್ತು 20 ಕಿಲೋ ಚೀಲ ಹೊರಲು ವಿಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಂತ್ರಿಕತೆ ಬೇಕು ಆದರೆ ಮನುಷ್ಯನ ಅಳುವಿನ ಅಂಚಿಗೆ ಒಯ್ಯವುದಾಗಿದ್ದರೆ ನಾವು ಅದನ್ನು ಬಳಸುವ ಮುನ್ನ ಚಿಂತಿಸುವುದು ಅನಿವಾರ್ಯ.
ನಿಮ್ಮ ಅನಿಸಿಕೆಗಳನ್ನು ನನಗೆ ತಿಳಿಸಿ.
kulkarni.amith@gmail.com
ಅಮಿತ ಕುಲಕರ್ಣಿ,
9972591014
ಸಾವಯವ ರೈತ,
ಚಿಕ್ಕನಂದಿ ಗ್ರಾಮ,
ಗೋಕಾಕ ತಾ.
ಬೆಳಗಾವಿ ಜಿ