ADVERTISEMENT
Saturday, August 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮಾನವೀಯತೆ ಮೆರೆದ ಯುವಕ

Shwetha by Shwetha
October 30, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Aaruva deepakke bembalada belaku 1
Share on FacebookShare on TwitterShare on WhatsappShare on Telegram

ಮಾನವೀಯತೆ ಮೆರೆದ ಯುವಕ
Aaruva deepakke bembalada belaku 1

ಪ್ರೀತಿಪಾತ್ರರ ಆರತಕ್ಷತೆ ಕಾರ್ಯಕ್ರಮಕ್ಕೆ ಹೋಗಿ ನಾವೆಲ್ಲಾ ಹಿಂತಿರುಗುವಾಗ ನಡುರಾತ್ರಿಯಾಗಿತ್ತು.
ಸುತ್ತಲೂ ಕಗ್ಗತ್ತಲು. ಬೀದಿದೀಪವಷ್ಟೇ ದಾರಿಗೆ ತುಸುಬೆಳಕ ನೀಡಿತ್ತು. ರಸ್ತೆಯಲ್ಲಿ ನಮ್ಮ ವಾಹನ ಬಿಟ್ಟರೆ ಯಾರೊಬ್ಬರ ಸುಳಿವೂ ಅಲ್ಲಿರಲಿಲ್ಲ. Aaruva deepakke bembalada belaku 1

Related posts

ಪ್ರೇಮ ವೈಫಲ್ಯದಿಂದ ಬಯಲಾಯ್ತು MPSC ಪ್ರಶ್ನೆಪತ್ರಿಕೆ ಸೋರಿಕೆ ಜಾಲ; ಪ್ರಿಯತಮನ ಇ-ಮೇಲ್‌ನಿಂದ ತನಿಖೆ ಆರಂಭ

ಪ್ರೇಮ ವೈಫಲ್ಯದಿಂದ ಬಯಲಾಯ್ತು MPSC ಪ್ರಶ್ನೆಪತ್ರಿಕೆ ಸೋರಿಕೆ ಜಾಲ; ಪ್ರಿಯತಮನ ಇ-ಮೇಲ್‌ನಿಂದ ತನಿಖೆ ಆರಂಭ

August 29, 2026
KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

August 29, 2026

Aaruva deepakke bembalada belaku 1

ಮುದ್ರಾಡಿಯ ಮದಗ ಬಳಿ ಚಲಿಸುವಾಗ ಏನೋ ಜೋರಾಗಿ ಅಗೆಯುವ ಶಬ್ದ ಕೇಳಿಸಿತು. ಮಿನುಗುಚಿಟ್ಟೆ ಯಷ್ಟೇ ಬೆಳಕು ದೂರದಲ್ಲಿಕಾಣಿಸುತಿತ್ತು. ಅಲ್ಲಿ ಮಗುವಿನ ಕೂಗು ಕೇಳಿಸಿದಾಗ ಏನೋ ಘಟನೆ ನಡೆಯುತ್ತಿದೆ. ಯಾರಾದರೂ ಮಗುವನ್ನು ಕೊಲ್ಲುತ್ತಿರುವರೋ ಅಥವಾ ಮಗುವೇ ನಿದ್ದೆ ಕಣ್ಣಲ್ಲಿ ಮನೆಯಿಂದ ಹೊರಗೆ ಬಂದು ಅಳುತ್ತಿದೆಯೋ ಒಂದೂ ಅರಿವಾಗದೇ ಸಂಶಯದ ಸುಳಿಯಲ್ಲಿ ಸಿಕ್ಕಿ ಅಣ್ಣನ ಬಳಿ ಬೈಕ್ ನಿಲ್ಲಿಸಲು ಹೇಳಿ ಧ್ವನಿ ಕೇಳಿದ ಸ್ಥಳದ ಕಡೆ ಹೆಜ್ಜೆ ಇಟ್ಟೆವು.

ಬೆಳಕ ಕಂಡ ಸ್ಥಳದತ್ತ ಹೋದಾಗ ಅಲ್ಲೊಬ್ಬ ಎತ್ತರದ ಯುವಕ ನಡುರಾತ್ರಿಯಲ್ಲಿ ಮಳೆಯಲ್ಲಿ ನೆನೆಯುತ್ತ ಉದ್ದದ ಕೋಲನ್ನು ಹಿಡಿದು ನೀರ ರಭಸಕ್ಕೆ ಕುಸಿದು ಬಿದ್ದ
ಮಣ್ಣಿನ ರಾಶಿಯನ್ನು ಸರಿಸಿ ಏನೋ ಹುಡುಕುವ ದೃಶ್ಯ ಕಂಡು ನಾವಿಬ್ಬರೂ ಬೆಚ್ಚಿಬಿದ್ದೆವು.
ದೇವರೇ ! ಇವನು ಇಲ್ಲೇನು ಮಾಡ್ತಾ ಇದ್ದಾನೆ? ನಿಧಿಯ ಆಸೆಗಾಗಿ ಗುಂಡಿ ತೋಡುವ ದೃಶ್ಯ ಸಿನಿಮಾ ದಲ್ಲಷ್ಟೇ ಕಂಡಿದ್ದು. ಅರೇ ಸಾಧ್ಯವಿಲ್ಲ. ನಿಧಿ ಹುಡುಕುವವನು ಕೋಲಲ್ಲೇಕೆ ಮಣ್ಣನ್ನು ಸರಿಸುವನು??
ಇಲ್ಲಾ.. ಇಲ್ಲಾ.. ಏನೋ ನಿಗೂಢ ಅಡಗಿದೆ ಎಂದರಿತು ತುಸು ದೂರದಲ್ಲಿ ಆ ವ್ಯಕ್ತಿಗೆ ಕಾಣದಂತೆ ಅಡಗಿ ಕೂತು ಅವನ ಕೆಲಸವನ್ನೇ ಗಮನಿಸತೊಡಗಿದೆವು.

ಅಣ್ಣ ಮೆಲುದನಿಯಲ್ಲಿ ನುಡಿದ “ಮಗು ಇಲ್ಲೆಲ್ಲೋ ಅಳುತ್ತಿದೆ ಪುಟ್ಟ.. ” ನಿಶಬ್ಧ ಜಾಗದಲ್ಲಿ ಆ ವ್ಯಕ್ತಿ ಅಗೆಯುವ ಶಬ್ದ ಬಿಟ್ಟರೆ ಕೇಳಿಸಿದ್ದು ಮಗುವಿನ ಅರಚಾಟ.
ಈ ಸವಾಲನ್ನು ಹೇಗಾದರೂ ಎದುರಿಸಿ ನೈಜ್ಯತೆ ತಿಳಿಯಬೇಕು ಎಂದು ಮೌನದಲ್ಲೇ ಅಣ್ಣನಿಗೆ ಪ್ರತಿಕ್ರಿಯಿಯಿಸಿದೆ..

ಸ್ವಲ್ಪ ಸಮಯದಲ್ಲಿಯೇ ಅಚ್ಚರಿಯೊಂದು ಕಾದಿತ್ತು.
ಹೌದು! ಆ ವ್ಯಕ್ತಿ ಮಣ್ಣನ್ನು ಸರಿಸಿ ಒಂದು ಜೀವವಿರುವ ನಾಯಿಯನ್ನು ಹೊರತೆಗೆದ ಕ್ಷಣವನ್ನು ನಾವಿಬ್ಬರೂ ಮೂಕವಿಸ್ಮಿತರಾಗಿ ನೋಡಿದೆವು.
ನಾಯಿಯನ್ನು ಆ ವ್ಯಕ್ತಿ ಕಾಪಾಡಿದರೂ ಆ ಪ್ರಾಣಿ ಮಾತ್ರ ಆ ಜಾಗವನ್ನು ಕದಲದೆ ಬೊಬ್ಬೆ ಹಾಕತೊಡಗಿತು. ಅರೇ !ಎಂತಹ ಸೋಜಿಗ.. ಅಲ್ವಾ..
ನಿಮಗೂ ಕೂತೂಹಲ ಕಾಡಿರಬಹುದು..ಮುಂದೇನಾಗಿರಬಹುದು?? ಆ ವ್ಯಕ್ತಿ ಯಾರು?? ನಾಯಿ ಯಾಕೆ ಅಲ್ಲೇ ನಿಂತು ರೋದಿಸುತ್ತಿದೆ ಎನ್ನುವ ನೂರು ಪ್ರಶ್ನೆಗಳು ನಮ್ಮನ್ನು ಕಾಡತೊಡಗಿ ಕಾದು ನಿಂತೆವು.

ಆ ಎತ್ತರದ ವ್ಯಕ್ತಿ ಜೋರಾದ ಮಳೆಯಲ್ಲಿ ಒದ್ದೆಯಾಗುತ್ತಾ ಮಣ್ಣನ್ನು ಸರಿಸುತ್ತಲೇ ಇದ್ದ.
ಇನ್ನೇನಿರಬಹುದು ಎಂದು ಆಲೋಚಿಸುವಾಗಲೇ ಒಂದೊಂದೇ ನಾಯಿ ಮರಿಗಳನ್ನು ಜೋಪಾನವಾಗಿ ಹೊರತೆಗೆಯುತ್ತಿದ್ದ ವ್ಯಕ್ತಿಯನ್ನು ಕಂಡು ನನ್ನ ಕಣ್ಣಂಚಲ್ಲಿ ಕಂಬನಿ ಹರಿಯಿತು.
4 ನಾಯಿಮರಿಗಳು ಅಳುತ್ತಲೇ ತಾಯಿಯ ಮಡಿಲು ಸೇರುತ್ತಾ ” ಕುಯಿ…. ಕುಯಿ….” ಎಂದು ಪುಟ್ಟ ಮಗುವಿನ ದನಿಯಂತೆ ಅಳುತ್ತಾ ತಾಯಿ ನಾಯಿ ಯ ಆಲಂಗಿಸಿದವು.

ಆ ವ್ಯಕ್ತಿಯ ಸಮಯಪ್ರಜ್ಞೆ ಗೆ, ಆ ಜೀವಗಳ ಮೇಲೆ ಕಾಳಜಿ ತೋರಿ ತನ್ನ ಜೀವವ ಮರೆತು ನಡುರಾತ್ರಿ ಆ ಮಳೆಯಲ್ಲಿ ನೆನೆಯುತ್ತ ಒಬ್ಬನೇ ಶ್ರಮವಹಿಸಿ ಮುಗ್ದ ಪ್ರಾಣಿಗಳ ಜೀವ ಉಳಿಸಿದ ಸೇವೆಗೆ ಹೃದಯ ತುಂಬಿ ಬಂತು.
ಕತ್ತಲೆಯಲ್ಲಿ ಅಡಗಿದ್ದ ನಾವು ಆ ವ್ಯಕ್ತಿಗೊಂದು ಸಲಾಂ ಹೇಳೋಣ ಎನಿಸಿ ಅವನ ಬಳಿ ಹೆಜ್ಜೆ ಇಟ್ಟೆವು.
ನಮ್ಮ ಟಾರ್ಚ್ ಲೈಟ್ ಕಂಡಾಗ ಆ ವ್ಯಕ್ತಿಯೇ ದೈರ್ಯದಿಂದ ನಮ್ಮತ್ತ ಬರತೊಡಗಿದ.

Aaruva deepakke bembalada belaku 1

ಹೆಜ್ಜೆಗಳು ಸಮೀಪವಾಗುತ್ತಲೇ ನಾ ಭಾವುಕಳಾಗಿ ಅಲ್ಲೇ ನಿಂತೆ.
ಕಾರಣವಿಷ್ಟೇ… ಮಾನವೀಯತೆ ತೋರಿ 5 ಜೀವಗಳ ಉಳಿಸಿದ ದೇವರು ಬೇರಾರು ಅಲ್ಲ..
ನಮ್ಮೊಡನೆ ಸದಾ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡು, ನನ್ನ ಸಾಧನೆಗೆ ಹುರಿದುಂಬಿಸುವ “ಮದಗದ ಹರೀಶ್ ಶೆಟ್ಟಿ ಅಣ್ಣ. “

ಕಣ್ಣುಗಳು ಕಂಡ ದೃಶ್ಯವ ನಂಬಲಾಗದೆ ಅವರನ್ನೇ ದಿಟ್ಟಿಸಿ ನೋಡಿದವು.
ಆಹಾ ! ನಿಜಕ್ಕೂ ಅವರ ಶ್ರಮ ಮೆಚ್ಚುವಂತದ್ದು.
ಮಾತುಗಳು ನಾಲಗೆ ತನಕ ಬಂದು ಅಲ್ಲೇ ನಲಿದಾಡಿದವು.

ಅಣ್ಣ ಹರೀಶ್ ಶೆಟ್ರನ್ನು ಮಾತಾಡಿಸಿ “ಬಾರಿ ಎಡ್ಡೆ ಬೇಲೆ ಮಲ್ತರ್ ಅಣ್ಣ.. ಮಸ್ತ್ ಖುಷಿ ಆಂಡ್.. ನಮ ಬಾಲೆದ ಸ್ವರೋ ಕೇಂದ್ ಗಾಡಿ ಉಂತಾದ್ ಬತ್ತಿನಿ ” ಎಂದು ವಿನಮ್ರ ಭಾವದಿಂದ ನುಡಿದ.

ಮೆಲ್ಲಗೆ ನಕ್ಕ ಹರೀಶ್ “ಎಂಕ್ಲಾ ಬಾಲೆದ ಸ್ವರೊ ಕೇಂಡ್. ಪುಣ್ಯ.. ಆ ಜೀವೊಲೆಗ್ ದಾಲ ಆಇಜಿ ” ಎಂದು ಮುಗ್ದ ಭಾವದಿಂದ ನುಡಿದರು.
ನನ್ನನ್ನು ಅಚ್ಚರಿಯ ಲೋಕಕ್ಕೆ ಕೊಂಡೊಯ್ದ ಘಟನೆಯನ್ನು ಒಮ್ಮೆ ನೆನೆದು ಹರೀಶ್ ರವರಲ್ಲಿ ಮಾತಾಡಿಸಿ ಕೃತಜ್ಞತೆಯನ್ನು ಅರ್ಪಿಸಿದೆ.

ಬೀದಿನಾಯಿ ಮತ್ತು ಅದರ ಮರಿಗಳನ್ನು ತನ್ನ ಮನೆಯ ಸೂರಿನಲ್ಲಿ ಬೆಚ್ಚನೆಯ ಗೋಣಿ ಹಾಸಿ ಇರಿಸಿ ತಿನ್ನಲೊಂದಿಷ್ಟು ಅನ್ನವ ಉಣಬಡಿಸಿ ನಾಯಿಯ ಹಸಿವ ನೀಗಿಸಿದರು.
ನಾವಿಬ್ಬರೂ ಮನೆಯ ದಾರಿಯಲ್ಲಿ ಚಲಿಸಿದೆವು.

ಆಹಾ ! ಎಲ್ಲೋ ಅಲೆದಾಡಿ ಬದುಕ ಸವೆಸುವ ಜೀವಗಳನ್ನೇ ಇಷ್ಟೊಂದು ಕನಿಕರ ತೋರಿ ಕಷ್ಟ ಪಟ್ಟು ಕಾಪಾಡಿ ಆಶ್ರಯ ನೀಡಿದ ಹರೀಶ್ ಶೆಟ್ಟಿ ಅಣ್ಣ ಮುಂದೆ ಜನನಾಯಕನಾದರೆ ಈ ಊರಿನ ಜನರ ಕಷ್ಟಗಳಿಗೆ ಹೇಗೆಲ್ಲ ಸ್ಪಂದನೆ ನೀಡಬಹುದು.. ಅಲ್ವಾ..

ಇರಬೇಕು.. ಇರಬೇಕು.. ಇಂತಹ ಯುವಕ.. ನಾಡ ಕಟ್ಟಲು.. ಜನರ ಕಣ್ಣೀರ ಒರೆಸಲು..
ಒಬ್ಬ ತಾಯಿ 10 ಮಕ್ಕಳನ್ನು ಹಡೆದರೇನು ಭಾಗ್ಯವಯ್ಯ..
ಇಂತಹ ಒಬ್ಬ ಮಗ ಹುಟ್ಟಿದರೆ ಸಾಕು.
ಆತ ತಾಯಿಯನ್ನಷ್ಟೇ ಅಲ್ಲ..ಸಾವಿರಾರು ಜೀವಗಳನ್ನೇ ಮಗುವಿನಂತೆ ಕಾಪಾಡುವನು. ಎನ್ನುವುದು ನನ್ನ ಮನದಾಳದ ಭಾವನೆ.

ಹರೀಶ್ ಶೆಟ್ಟಿ ಮದಗ ಅಣ್ಣ ನಮ್ಮ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸಹಸಂಚಾಲಕರಾಗಿದ್ದೆ ನನಗೆ ನೂರು ಆನೆಯ ಬಲ.

ಶುಭವಾಗಲಿ ಅಣ್ಣ.. ನೀವು ಕಂಡ ಕನಸುಗಳು ಬಹುಬೇಗ ನೆರವೇರಲಿ..
ನಿಮ್ಮ ಮಾನವೀಯತೆ ಗೆ ಲೋಕವೇ ಶಿರಬಾಗಲಿ. ಸೇವೆ ಮಾಡುವ ಕೈಗಳಿಗೆ ಇನ್ನಷ್ಟು ಶಕ್ತಿ ಬರಲಿ.

ಚೈತ್ರ ಕಬ್ಬಿನಾಲೆ✍️✍️✍️

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಹೆಬ್ರಿ ಘಟಕದ ಸಂಚಾಲಕಿ

ಸಾಕ್ಷಾ ಟಿವಿಯ ಆರುವ ದೀಪಕ್ಕೆ ಬೆಂಬಲದ ಬೆಳಕು – ಅಂಕಣಕಾರರ ಕಿರು ಪರಿಚಯ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

https://twitter.com/SaakshaTv

 

Tags: Aaruva deepakke bembalada belaku 1Saakshatv Aaruva deepakke bembalada belaku
ShareTweetSendShare
Join us on:

Related Posts

ಪ್ರೇಮ ವೈಫಲ್ಯದಿಂದ ಬಯಲಾಯ್ತು MPSC ಪ್ರಶ್ನೆಪತ್ರಿಕೆ ಸೋರಿಕೆ ಜಾಲ; ಪ್ರಿಯತಮನ ಇ-ಮೇಲ್‌ನಿಂದ ತನಿಖೆ ಆರಂಭ

ಪ್ರೇಮ ವೈಫಲ್ಯದಿಂದ ಬಯಲಾಯ್ತು MPSC ಪ್ರಶ್ನೆಪತ್ರಿಕೆ ಸೋರಿಕೆ ಜಾಲ; ಪ್ರಿಯತಮನ ಇ-ಮೇಲ್‌ನಿಂದ ತನಿಖೆ ಆರಂಭ

by Shwetha
August 29, 2026
0

ಮಹಾರಾಷ್ಟ್ರ ಲೋಕಸೇವಾ ಆಯೋಗದ (MPSC) ಡ್ರಗ್ ಇನ್ಸ್‌ಪೆಕ್ಟರ್ ಹುದ್ದೆಯ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಇದೀಗ ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಈ ಭಾರಿ ಅಕ್ರಮದ ಹಿಂದೆ ಪ್ರೇಮ...

KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

KPSC ಹಗರಣದ ಆರೋಪ; ಕೇಂದ್ರ ಸಚಿವ HDK ಗಂಭೀರ ವಾಗ್ದಾಳಿ

by Shwetha
August 29, 2026
0

ಕರ್ನಾಟಕ ಲೋಕಸೇವಾ ಆಯೋಗ (KPSC) ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ....

ಶಾಲೆಯಲ್ಲಷ್ಟೇ ಅಲ್ಲ ಮನೆ ಮುಂದೆಯೂ ಬಂತು ವಂದೇ ಮಾತರಂ:ಗೃಹಪ್ರವೇಶದ ಮನೆ ಮುಂದೆ ವಂದೇ ಮಾತರಂ ಸೆಲ್ಫಿ ಸ್ಪಾಟ್ ನಿರ್ಮಿಸಿದ ಶಿಕ್ಷಕಿ

ಶಾಲೆಯಲ್ಲಷ್ಟೇ ಅಲ್ಲ ಮನೆ ಮುಂದೆಯೂ ಬಂತು ವಂದೇ ಮಾತರಂ:ಗೃಹಪ್ರವೇಶದ ಮನೆ ಮುಂದೆ ವಂದೇ ಮಾತರಂ ಸೆಲ್ಫಿ ಸ್ಪಾಟ್ ನಿರ್ಮಿಸಿದ ಶಿಕ್ಷಕಿ

by Shwetha
August 29, 2026
0

ಸಾಮಾನ್ಯವಾಗಿ ಹೊಸ ಮನೆಯ ಗೃಹಪ್ರವೇಶ ಎಂದರೆ ಅಲ್ಲಿ ತಳಿರು ತೋರಣಗಳ ಶೃಂಗಾರ, ವಿದ್ಯುತ್ ದೀಪಗಳ ಅಲಂಕಾರ ಮತ್ತು ಮನೆಯ ಹೆಸರಿನ ಫಲಕಗಳು ರಾರಾಜಿಸುವುದು ಸಹಜ. ಆದರೆ ಇಲ್ಲೊಬ್ಬರು...

ಮಿಷನ್ 2028 ಕ್ಕೆ ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್: ಕುಮಾರಸ್ವಾಮಿ ಮತ್ತು ನಿಖಿಲ್ ಹೆಗಲಿಗೆ ಬಿಗ್ ಟಾಸ್ಕ್ -ಜೆಡಿಎಸ್ ಪಾಳಯದಲ್ಲಿ ಜೆನ್ ಝೀ ಅಲೆ ಶುರು!

ಮಿಷನ್ 2028 ಕ್ಕೆ ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್: ಕುಮಾರಸ್ವಾಮಿ ಮತ್ತು ನಿಖಿಲ್ ಹೆಗಲಿಗೆ ಬಿಗ್ ಟಾಸ್ಕ್ -ಜೆಡಿಎಸ್ ಪಾಳಯದಲ್ಲಿ ಜೆನ್ ಝೀ ಅಲೆ ಶುರು!

by Shwetha
August 29, 2026
0

ದೆಹಲಿ ಮತ್ತು ಬೆಂಗಳೂರು ನಡುವೆ ಈಗ ಹೊಸ ರಾಜಕೀಯ ಸಂಚಲನ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಬಂದಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ...

ಕಟ್ಕೊಂಡೋರು-ಇಟ್ಕೊಂಡೋರ ಖಾತೆಗೆ ಹಗರಣದ ಹಣ:ಯಾರು ಯಾರನ್ನ ಇಟ್ಕೊಂಡಿದ್ದಾರೆ ಅಂತ ಕೇಳಬೇಡಿ- ಸಚಿವ ನಾಗೇಂದ್ರ ವಿರುದ್ಧ ಸಿ.ಟಿ ರವಿ ವ್ಯಂಗ್ಯ.

ಕಟ್ಕೊಂಡೋರು-ಇಟ್ಕೊಂಡೋರ ಖಾತೆಗೆ ಹಗರಣದ ಹಣ:ಯಾರು ಯಾರನ್ನ ಇಟ್ಕೊಂಡಿದ್ದಾರೆ ಅಂತ ಕೇಳಬೇಡಿ- ಸಚಿವ ನಾಗೇಂದ್ರ ವಿರುದ್ಧ ಸಿ.ಟಿ ರವಿ ವ್ಯಂಗ್ಯ.

by Shwetha
August 29, 2026
0

ಚಿಕ್ಕಮಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ವಾಲ್ಮೀಕಿ ನಿಗಮದ ಹಣ ದುರುಪಯೋಗ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಯ ಬೆನ್ನಲ್ಲೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram