ಕನ್ನಡದ ಕಂಪು ಕುವೆಂಪು ನನಗಿಷ್ಟ – Aaruva deepakke bembalada belaku 2
ನನ್ನೊಡಲ ಬಾಂದಳದಿ ಪ್ರಕೃತಿಯ ಚಿತ್ತಾರ ಬರೆದು ಸಾಹಿತ್ಯ ಲೋಕಕೆ ಹೆಜ್ಜೆ ಇಡಲು ಪ್ರೇರಣೆಯೇ ಕವಿ ಕುವೆಂಪುರವರು.
ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ಎನ್ನುತ್ತಾ ನನ್ನ ಬದುಕಿನ ನೂರೆಂಟು ತಿರುವುಗಳನ್ನು ಎದುರಿಸಿ ಧೈರ್ಯದಿಂದ ಮುನ್ನಡೆಯಲು ಕಲಿಸಿದ್ದೆ ಕುವೆಂಪು ರವರ ಕವನಗಳು. Aaruva deepakke bembalada belaku 2

ಆಹಾ ! ರಾಷ್ಟ್ರ ಕವಿಯ ಕಲ್ಪನೆಯಲ್ಲಿ ಅರಳಿದ ಪದಗಳ ಮಳೆಗೆ ನೆನೆದು ನಾನಾದೆ ಪುಟ್ಟ ಕವಯಿತ್ರಿ.
ಎಲ್ಲರ ಮನದಲ್ಲಿ ಕುವೆಂಪು ಕವಿ ಯಾದರೆ ನನಗವರು “ಬದುಕಿಗೊಂದು ಆದರ್ಶ ” ಕಲಿಸಿದ ಗುರು. ಅವರ ಬದುಕಿನ ಪುಟಗಳನ್ನು ನಾ ತಿರುವಿ ನೋಡಿದಾಗ ಅವರ ವ್ಯಕ್ತಿತ್ವಕ್ಕೆ ನಿರ್ಮಲ ಭಾವದಿಂದ ಶಿರಬಾಗಿದೆ.
ಕಾರಣವಿಷ್ಟೇ, ಕುವೆಂಪು ರವರು ತನ್ನ ಪ್ರಸಿದ್ಧಿ ಗಾಗಿ ಎಂದೂ ಹೊರ ರಾಜ್ಯ , ರಾಷ್ಟ್ರಗಳಿಗೆ ಹೋದವರಲ್ಲ. ಸನ್ಯಾಸತ್ವ ದೀಕ್ಷೆಗಾಗಿ ಕೋಲ್ಕತ್ತಾ ಕ್ಕೆ ಹಾಗೆಯೇ ಜ್ಞಾನಪೀಠ ಪ್ರಶಸ್ತಿ ಪಡೆಯಲು ಒಮ್ಮೆ ದೆಹಲಿ ಗೆ ಹೋಗಿದ್ದರಷ್ಟೇ. ರಾಷ್ಟ್ರ ಕವಿ ಪಟ್ಟವಿದ್ದರೂ ಸರಳತೆಯಿಂದ ಬದುಕುತ್ತ ತನ್ನ ನೆಲದ, ಕನ್ನಡ ಮಣ್ಣಿನ ಮೇಲಿರುವ ಅಭಿಮಾನದ ಸಿಂಚನಕ್ಕೆ , ಪ್ರಕೃತಿ ದೇವಿಯ ಅಪರಿಮಿತ ಭಕ್ತಿಗೆ ನಾ ಸೋತು ಕುವೆಂಪು ರವರನ್ನು ಹೃದಯದೇಗುಲದಿ ಇರಿಸಿ ಪೂಜಿಸುವ ಆರಾಧಕಿಯಾದೆ.
ವಿಶ್ವವೇ ಮಹಾಕಾವ್ಯದ ಯುಗ ಮುಗಿಯಿತು ಎಂದಾಗ ಕೋಟಿ ಜನ್ಮದ ಫಲದಂತೆ ರಾಮಾಯಣ ದರ್ಶನಂ ಮಹಾಕಾವ್ಯ ಹುಟ್ಟುತ್ತದೆ. ಕುವೆಂಪುರವರೆ ಸ್ವತಃ ಹೇಳಿರುವಂತೆ ರಾಮಾಯಣ ದರ್ಶನಂ ಕೃತಿಯನ್ನು ಅವರು ಸೃಷ್ಟಿಸಲಿಲ್ಲ, ಆ ಮಹಾಕೃತಿಯೆ ಕವಿ ಕುವೆಂಪುರವರನ್ನು ಸೃಷ್ಟಿಸಿತು..! ಯುಗಮಾನದ ಜನಕೋಟಿಯ ಹೆಬ್ಬಯಕೆಯಿಂದ ಮಹಾಕಾವ್ಯ ಹುಟ್ಟುತ್ತದೆ ಎನ್ನುತ್ತಾರೆ.
ಆರುವ ದೀಪಕ್ಕೆ ಬೆಂಬಲದ ಬೆಳಕು – ಅಧ್ಯಾಯ 1
ಕುವೆಂಪು ಕಾವ್ಯನಾಮದ ಸೊಗಸನ್ನು ಪ್ರೀತಿಸುವವರು, ದ್ವೇಷಿಸುವವರು, ಪ್ರೀತಿಸಿ ನಂತರ ದ್ವೇಷಿಸಿದವರು, ದ್ವೇಷಿಸಿ ಬಳಿಕ ಪ್ರೀತಿಸಿದವರು ಎಲ್ಲರೂ ಉಂಟು! ಆದರೆ ಅವರ ಸಾಹಿತ್ಯವನ್ನು ಅಧ್ಯಯನ ಮಾಡಿಯೂ ದ್ವೇಷಿಸಿದವರು ಇಲ್ಲವೇ ಇಲ್ಲ..
ಅದಕ್ಕಾಗಿಯೇ ಅಲ್ಲವೇ ವರಕವಿ ಬೇಂದ್ರೆ ಯವರು `ಯುಗದ ಕವಿಗೆ ಜಗದ ಕವಿಗೆ, ಶ್ರೀರಾಮಾಯಣ ದರ್ಶನದಿಂದಲೆ ಕೈ ಮುಗಿದ ಕವಿಗೆ ಮಣಿಯದವರಾರು?’ ಎಂದಿದ್ದು.
“ಮನುಜ ಮತ, ವಿಶ್ವಪಥ” ಎಂಬ ಮಹಾನ್ ಸಂದೇಶದ ಮೂಲಕ ಅಲ್ಪಮಾನವರೆಲ್ಲ ವಿಶ್ವಮಾನವರಾಗಬೇಕೆಂದು ಕರೆಕೊಟ್ಟರು. ಹಾಗೆಯೇ ಬದುಕಿದ ಕುವೆಂಪು ಪ್ರಪಂಚದಲ್ಲಿರುವ ಎಲ್ಲ ಧರ್ಮಗಳ ಎಲ್ಲ ತತ್ವಗಳನ್ನು ಆಳವಾಗಿ ಅಧ್ಯಯನ ಮಾಡಿ, ಅವುಗಳ ಸಾರವನ್ನು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡವರು.
ಕುವೆಂಪು ರವರ ದೌರ್ಬಲ್ಯಗಳನ್ನು ಹೇಳುವ ಸಾವಿರ ಜನ ಇದ್ದರೂ ಆ ವಿಚಾರಗಳನ್ನು ಸೂಕ್ಷ್ಮ ವಾಗಿ ಅಧ್ಯಯನ ಮಾಡಿದಾಗ “ತಪ್ಪನ್ನು ಖಂಡಿಸುವ ಅವರ ನೇರ ಸ್ವಭಾವ ದೌರ್ಬಲ್ಯ ವಲ್ಲ, ಬದಲಾಗಿ ಬದಲಾವಣೆಗೆ ದಾರಿ ” ಎನ್ನುವುದು ನಾನು ಅರಿತ ಅಕ್ಷರಹ ಸತ್ಯ.

ಕುವೆಂಪು ರವರು ನನಗಷ್ಟೇ ಸ್ಫೂರ್ತಿಯ ಚಿಲುಮೆಯಲ್ಲ. ಮಕ್ಕಳ ಇಚ್ಛೆಯಂತೆ ಬದುಕ ಕಟ್ಟಲು ಸ್ವಾತಂತ್ರ್ಯ ನೀಡಿದ್ದಾರೆ, ಅವರ ಕುಟುಂಬದಲ್ಲಿ ಅಂತರ್ಜಾತಿ ವಿವಾಹಕ್ಕೆ ಮುನ್ನುಡಿ ಬರೆದಿದ್ದಾರೆ, ಶ್ರೀಮಂತಿಕೆಯಿದ್ದರೂ ಸರಳತೆಯೇ ಉಸಿರಾಗಿಸಿ ಮಕ್ಕಳ ಮದುವೆಯನ್ನು ಬಹಳ ಸರಳವಾಗಿ ನಡೆಸಿಕೊಡುತ್ತಾರೆ. ಈ ಎಲ್ಲಾ ಉತ್ತಮ ಅಂಶಗಳು ಇಡೀ ಸಮಾಜಕ್ಕೆ ಮಾದರಿ ಯೇ ಸರಿ.
ನಿದ್ದೆಯಿಂದೆಚ್ಚರಿಸಿ ನೀವೊಮ್ಮೆ ಯಾವ ಕವಿ ನಿನಗಿಷ್ಟ ಎಂದರೆ ಮುಚ್ಚಿದ ಅಂತರಾಳವ ಒಮ್ಮೆಲೇ ತೆರೆದು ಹೆಮ್ಮೆಯಿಂದ ಎದೆತಟ್ಟಿ ನುಡಿವೆ ನಾನು “ಕನ್ನಡದ ಕಂಪು ಕುವೆಂಪು ನನಗಿಷ್ಟ “ಎಂದು.
ಚೈತ್ರ ಕಬ್ಬಿನಾಲೆ ✍️✍️✍️
ಸಾಕ್ಷಾ ಟಿವಿಯ ಆರುವ ದೀಪಕ್ಕೆ ಬೆಂಬಲದ ಬೆಳಕು – ಅಂಕಣಕಾರರ ಕಿರು ಪರಿಚಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಇತ್ತೀಚಿನ ಸುದ್ದಿಗಳಿಗಾಗಿ, ನಮ್ಮ ವಾಟ್ಸಾಪ್ ಗ್ರೂಪ್ ಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿ
https://chat.whatsapp.com/HZ6kIJcdmq8GNeQb9URf9M
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv








