ಆದಿಪುರುಷ್ ಚಿತ್ರ ಬ್ಯಾನ್ ಮಾಡುವಂತೆ ಆಗ್ರಹ….
ಆದಿಪುರುಷ್ ಸಿನಿಮಾದ ಟೀಸರ್ ಬಿಡುಗಡಯಾದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ಚರ್ಚೆಗೆ ಗ್ರಾಸವಾಗುತ್ತಿದೆ. ಟೀಸರ್ ಹಲವು ಕಾರಣಗಳಿಂದ ಟ್ರೋಲ್ ಗೆ ಒಳಗಾಗುತ್ತಿದೆ.
700 ಕೋಟಿ ಬಜೆಟ್ ನಲ್ಲಿ ತಯಾರಾಗುತ್ತಿರುವ ಈ ಸಿನಿಮಾಗೆ ತಾನ್ಹಾಜಿ ಸಿನಿಮಾ ಖ್ಯಾತಿಯ ನಿರ್ದೇಶಕ ಓಮ್ ರಾವತ್ ಆಕ್ಷನ್ ಕಟ್ ಹೇಳಿದ್ದಾರೆ.. ಇತ್ತೀಚೆಗೆ ಸಿನಿಮಾದ ಟೀಸರ್ ರಿಲೀಸ್ ಆಗಿದೆ.. ಆದ್ರೆ ಸಿನಿಮಾದ ಟೀಸರ್ ನೋಡಿ ಪ್ರಭಾಸ್ ಅಭಿಮಾನಿಗಳು ಡಿಸಪಾಯಿಂಟ್ ಆಗಿದ್ದಾರೆ..
ಇದೀಗ ಆದಿಪುರುಷ್ ಚಿತ್ರವನ್ನ ಕೂಡಲೇ ಬ್ಯಾನ್ ಮಾಡುವಂತೆ ಆಯೋಧ್ಯೆ ಶ್ರೀ ರಾಮ ಮಂದಿರದ ಪ್ರಧಾನ ಅರ್ಚಕರು ಆಗ್ರಹಿಸಿದ್ದಾರೆ..
ಸಿನಿಮಾದ ಟೀಸರ್ ವಿರುದ್ಧ ಭಾರೀ ವಿರೋಧಗಳು ವ್ಯಕ್ತವಾಗುತ್ತಿದೆ… ಇದೀಗ ಅಯೋಧ್ಯೆ ಶ್ರೀರಾಮ ಮಂದಿರದ ಪ್ರಧಾನ ಅರ್ಚಕರಾದ ಸತ್ಯೇಂದ್ರ ದಾಸ್ ಅವರು ಇದರ ವಿರುದ್ಧ ಕಿಡಿಕಾರಿದ್ದಾರೆ.
ಈ ಸಿನಿಮಾದಲ್ಲಿ ರಾಮಾಯಣವನ್ನೇ ತಿರುಚಲಾಗಿದೆ. ಶ್ರೀರಾಮ, ಹನುಮಾನ್ ಹಾಗೂ ರಾವಣ ಪಾತ್ರಗಳನ್ನು ತಪ್ಪಾಗಿ ತೋರಿಸಲಾಗಿದೆ. ಸಿನಿಮಾದಲ್ಲಿ ತೋರಿಸಲಾಗಿರುವ ಈ ಮೂರು ಪಾತ್ರಗಳನ್ನು ಹೀಗೇ ಇವೆ ಅನ್ನೋದು ಮಹಾಗ್ರಂಥ ಖಚಿತಪಡಿಸಿಲ್ಲ. ಈ ಕಾರಣಕ್ಕೆ ಆದಿಪುರುಷ್ ಸಿನಿಮಾವನ್ನು ಕೂಡಲೇ ಬ್ಯಾನ್ ಮಾಡಬೇಕು. ಸಿನಿಮಾ ನಿರ್ಮಾಣ ಮಾಡೋದು ಕ್ರೈಂ ಅಲ್ಲ. ಆದರೆ, ಲೈಮ್ ಲೈಟ್ಗೆ ಬರೋಕೆ ವಿವಾದ ಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ.
Adipurush: Ayodhya Ram Temple Chief Priest Demons Become ‘Adi Purush’