ಹಾಸನ: ಮಹಿಳೆಯರು ನಿರ್ವಾಹಕನ ಮೇಲೆ ಹಲ್ಲೆ ನಡೆಸಿರುವ ಘಟನೆಯೊಂದು ನಡೆದಿದೆ.
ಈ ಘಠನೆ ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ (Bus Stop) ನಡೆದಿದೆ. ಬಸ್ ನಗರದಿಂದ ಸುಬ್ರಮಣ್ಯಕ್ಕೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಬಸ್ ಭರ್ತಿಯಾಗಿತ್ತು. ಆದರೂ ಮೂವರು ಮಹಿಳೆಯರು ಹತ್ತಿದ್ದಾರೆ. ಆಗ ನಿರ್ವಾಹಕ, ಸೀಟ್ ಖಾಲಿ ಇಲ್ಲ. ಯಾರಾದರೂ ಇಳಿಯುವವರಿದ್ದರೆ ಬಸ್ ನಿಲ್ದಾಣದಲ್ಲಿ ಇಳಿಯರಿ ಅಂತಾ ಹೇಳಿದ್ದಾರೆ. ಆಗ ಸುಮ್ಮನಿದ್ದು, ಬಸ್ ಹೊರಟ ನಂತರ ಮೂವರು ಅನ್ಯಕೋಮಿನ ಮಹಿಳೆಯರು ಬಸ್ ನಿಲ್ಲಿಸುವಂತೆ ಹೇಳಿದ್ದಾರೆ.
ಆಗ ನಿರ್ವಾಹಕ ಆಗಲೇ ಇಳಿಯಲು ಹೇಳಿರಲಿಲ್ಲವಾ ಎಂದು ಕೇಳಿದ್ದಾರೆ. ಆಗ ಚಲಿಸುತ್ತಿದ್ದ ಬಸ್ ನಿಂದಲೇ ಇಳಿಯಲು ಯತ್ನಿಸಿದ್ದಕ್ಕೆ ಬಸ್ ನಿಲ್ಲಿಸಲಾಗಿದೆ. ಆಗ ಮಹಿಳೆಯರು ನಿರ್ವಾಹಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಇದನ್ನು ನಿರ್ವಾಹಕ ವಿಡಿಯೋ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮೊಬೈಲ್ ಕಸಿದುಕೊಂಡು ಒಡೆದು ಹಾಕಿದ್ದಾರೆ. ಕೂಡಲೇ ನಿರ್ವಾಹಕ ಪೊಲೀಸರಿಗೆ ಕರೆ ಮಾಡಿದ್ದಾರೆ. ಮಹಿಳೆಯರ ವರ್ತನೆ ಬಗ್ಗೆ ಬಸ್ನಲ್ಲಿದ್ದ ಪ್ರಯಾಣಿಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಬರುತ್ತಿದ್ದಂತೆ ಹೆದರಿ, ಕ್ಷಮೆ ಯಾಚಿಸಿದ್ದಾರೆ. ಅನ್ಯಕೋಮಿನ ಮಹಿಳೆಯೊಬ್ಬರ ಪತಿ ಸ್ಥಳಕ್ಕೆ ಆಗಮಿಸಿ, ಕ್ಷಮೆ ಯಾಚಿಸಿ ಹೊಸ ಮೊಬೈಲ್ ಕೊಡಿಸಿ ದೂರು ನೀಡದಂತೆ ಮನವಿ ಮಾಡಿಕೊಂಡಿದ್ದಾರೆ.