‘ರಂಜಾನ್ ಹಿನ್ನೆಲೆ ಅಫ್ಗಾನ್ ನಲ್ಲಿ ಘೋಷಿಸಿದ್ದ 3 ದಿನಗಳ ಕದನ ವಿರಾಮ ಅಂತ್ಯ’..!
ರಂಜಾನ್ ಹಿನ್ನೆಲೆ ಇತ್ತೀಚೆಗೆ ಐಎಸ್ ಉಗ್ರ ಸಂಘಟನೆ 3 ದಿನಗಳ ಕಾಲ ಕದನ ವಿರಾಮ ಘೋಷಿಸಿದೆ ಎನ್ನಲಾಗಿತ್ತು.. ಇದೀಗ ಮೂರು ದಿನಗಳ ಕದನ ವಿರಾಮ ಭಾನುವಾರ ಅಂತ್ಯವಾಗಿದೆ. ಅಂದ ಮಾತ್ರಕ್ಕೆ ಕದನ ವಿರಾಮದ ಅವಧಿಯಲ್ಲಿಯೂ ಅಫ್ಗಾನದಲ್ಲಿ ಜನರು ನೆಮ್ಮದಿಯಿಂದ ಇರಲಿಲ್ಲ. ಈ ಸಂದರ್ಭದಲ್ಲೂ ದೇಶದಲ್ಲಿ ಹಿಂಸಾತ್ಮಕ ಕೃತ್ಯ ನಡೆದಿತ್ತು.
ಹೌದು.. ಕದನ ವಿರಾಮ ವೇಳೆಯಲ್ಲಿಯೂ ಹಿಂಸಾಕೃತ್ಯಗಳಿಗೆ ಅಫ್ಗಾನಿಸ್ತಾನ ಸಾಕ್ಷಿಯಾಗಿತ್ತು. ಸಂಘರ್ಷ ಪೀಡಿತ ಅಫ್ಗಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗಾಗಿ ಸರ್ಕಾರ ಮತ್ತು ತಾಲಿಬಾನ್ ನಡುವೆ ಮಾತುಕತೆ ಮತ್ತೆ ಆರಂಭಿಸಬೇಕು ಎಂದು ಜಾಗತಿಕ ಮಟ್ಟದಲ್ಲಿ ಒತ್ತಡ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳೂ ನಡೆದಿವೆ.
ಕತಾರ್ನಲ್ಲಿ ಶನಿವಾರ ನಡೆದ ಸಭೆಯಲ್ಲಿ ಅಫ್ಗಾನಿಸ್ತಾನ ಸರ್ಕಾರದ ಪ್ರತಿನಿಧಿಗಳು, ಇಸ್ಲಾಮಿಕ್ ಎಮಿರೇಟ್ನ ಮುಖಂಡರು ಮುಖಾಮುಖಿಯಾಗಿದ್ದಾರೆ. ಸ್ಥಗಿತಗೊಂಡಿದ್ದ ಮಾತುಕತೆಯನ್ನು ಮುಂದುವರಿಸುವ ಬಗೆಗಿನ ತಮ್ಮ ಬದ್ಧತೆಯನ್ನು ಉಭಯ ತಂಡಗಳು ಪುನರುಚ್ಚರಿಸಿವೆ’ ಎಂದು ತಾಲಿಬಾನ್ನ ವಕ್ತಾರ ಸುಹೇಲ್ ಶಾಹೀನ್ ಹೇಳಿದ್ದಾರೆ. ತನ್ನ ಸೈನಿಕರ ಪೈಕಿ ಅಫ್ಗಾನಿಸ್ತಾನದಲ್ಲಿ ಉಳಿದಿದ್ದ 3,500 ಜನ ಯೋಧರನ್ನು ಅಮೆರಿಕ ವಾಪಸು ಕರೆಸಿಕೊಂಡಿದೆ.
ತೌಕ್ತೆ ಚಂಡಮಾರುತ : ಮಹಾರಾಷ್ಟ್ರ, ಗುಜರಾತ್ ಸಿಎಂಗಳೊಂದಿಗೆ ಅಮಿತ್ ಶಾ ಚರ್ಚೆ
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.