ಅಫ್ಘಾನ್ ಬಿಕ್ಕಟ್ಟು : ಸ್ವದೇಶಕ್ಕೆ ಭಾರತೀಯರು ವಾಪಸ್ Afghan Crisis saaksha tv
ಜಾಮ್ ನಗರ್ : 20 ವರ್ಷಗಳ ಬಳಿಕ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಪತ್ಯ ಸಾಧಿಸಿದ್ದು, ಇತಿಹಾಸ ಕಂಡರಿಯದ ದುರಂತಗಳಿಗೆ ಅಲ್ಲಿನ ಜನರು ಸಾಕ್ಷಿಯಾಗುತ್ತಿದ್ದಾರೆ.
ಅಲ್ಲಿನ ಜನರು ಪ್ರಾಣ ಭಯದಿಂದ ಬೇರೆ ದೇಶಗಳತ್ತ ಓಡುತ್ತಿದ್ದಾರೆ. ಈ ಮಧ್ಯೆ ಅಫ್ಘಾನ್ ನಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ಇದೀಗ ಸ್ವದೇಶಕ್ಕೆ ಕರೆತರಲಾಗಿದೆ.
ಕಾಬೂಲ್ನಲ್ಲಿದ್ದ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು, ಐಟಿಬಿಪಿ ಸಿಬ್ಬಂದಿ ಸೇರಿದಂತೆ 120 ಮಂದಿ ಭಾರತೀಯರನ್ನು ಭಾರತೀಯ ವಾಯುಪಡೆ ತನ್ನ ಸಿ -17 ವಿಮಾನದಲ್ಲಿ ದೇಶಕ್ಕೆ ಕರೆತಂದಿದೆ.
ಗುಜರಾತ್ ಜಾಮ್ ನಗರ್ ಗೆ ಸಿ-17 ಬರುತ್ತಿದ್ದಂತೆ ವಿಮಾನದಲ್ಲಿದ್ದವರೆಲ್ಲಾ ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುತ್ತಾ ಕೃತಜ್ಞತೆ ಸಲ್ಲಿಸಿದ್ದಾರೆ.









