Afghanistan: ಕಾಬೂಲ್ ನಲ್ಲಿರುವ ಭಾರತೀಯ ಮಿಷನ್ ಗೆ ಭದ್ರತೆ ಒದಗಿಸುತ್ತೇವೆ – ತಾಲಿಬಾನ್
ಅಫ್ಘಾನಿಸ್ತಾನದಲ್ಲಿ ರಾಜತಾಂತ್ರಿಕ ಕಾರ್ಯಾಚರಣೆಯನ್ನ ಪ್ರಾರಂಭಿಸಲು ಭಾರತ ಸರ್ಕಾರದ ಪ್ರಯತ್ನಗಳನ್ನು ತಾಲಿಬಾನ್ ಸ್ವಾಗತಿಸಿದೆ. ಶನಿವಾರ ತಾಲಿಬಾನ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಹೇಳಿಕೆಯಲ್ಲಿ, ಅವರು ಕಾಬೂಲ್ನಲ್ಲಿರುವ ಭಾರತೀಯ ಮಿಷನ್ಗೆ ಭದ್ರತೆಯನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಭಾರತದ ರಾಜತಾಂತ್ರಿಕ ಸಂಬಂಧದಿಂದಾಗಿ ಭಾರತವು ಈ ಹಿಂದೆ ಪ್ರಾರಂಭಿಸಿ ಅಪೂರ್ಣಗೊಂಡ ಯೋಜನೆಗಳು ಈಗ ಪೂರ್ಣಗೊಂಡು ಹೊಸ ಯೋಜನೆಗಳನ್ನು ಸ್ಥಾಪಿಸುವ ಭರವಸೆ ಇದೆ ಎಂದು ತಾಲಿಬಾನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಹೇಳಿಕೆಯಲ್ಲಿ ತಿಳಿಸಿದೆ.
ಕಾಬೂಲ್ನಲ್ಲಿ ತನ್ನ ರಾಜತಾಂತ್ರಿಕ ಪ್ರಾತಿನಿಧ್ಯವನ್ನು ಮೇಲ್ದರ್ಜೆಗೇರಿಸಲು ಭಾರತದ ಪ್ರಯತ್ನಗಳನ್ನು ಅದು ಸ್ವಾಗತಿಸಿದೆ. ಭದ್ರತೆ ಒದಗಿಸುವುದಾಗಿ ಹಾಗೂ ರಾಜತಾಂತ್ರಿಕರ ವಿಶೇಷ ಸವಲತ್ತುಗಳ ಬಗ್ಗೆ ಸೂಕ್ಷ್ಮವಾಗಿ ಗಮನಹರಿಸಿ ಎಲ್ಲ ರೀತಿಯಲ್ಲೂ ಸಹಕರಿಸುವುದಾಗಿ ಭರವಸೆ ನೀಡಿದೆ. ರಾಜತಾಂತ್ರಿಕ ಪ್ರಾತಿನಿಧ್ಯವನ್ನು ಮೇಲ್ದರ್ಜೆಗೆ ಏರಿಸುವುದರೊಂದಿಗೆ, ರಾಜತಾಂತ್ರಿಕರ ನೇಮಕವು ಅಫ್ಘಾನ್-ಭಾರತ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ಭಾವಿಸಲಾಗಿದೆ.
ಕಳೆದ ವರ್ಷ ಆಗಸ್ಟ್ನಲ್ಲಿ ಅಫ್ಘಾನಿಸ್ತಾನದ ಸರ್ಕಾರವನ್ನು ತಾಲಿಬಾನ್ ವಹಿಸಿಕೊಂಡಿತ್ತು. ಭದ್ರತೆಯ ದೃಷ್ಟಿಯಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜತಾಂತ್ರಿಕ ಸಿಬ್ಬಂದಿಯನ್ನು ಸ್ವದೇಶಕ್ಕೆ ಕರೆತರಲಾಗಿತ್ತು. ಆದರೂ ಕಾಬೂಲ್ನಲ್ಲಿರುವ ಭಾರತೀಯ ಮಿಷನ್ಗೆ ತಾಂತ್ರಿಕ ತಂಡವನ್ನ ನಿಯೋಜಿಸುವ ಮೂಲಕ ಭಾರತ ಸರ್ಕಾರವ ಜೂನ್ನಲ್ಲಿ ಕಾರ್ಯಾಚರಣೆಯನ್ನು ಪುನರಾರಂಭಿಸಿತು.
ಇನ್ನೊಂದೆಡೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರವನ್ನು ಭಾರತ ಇನ್ನೂ ಗುರುತಿಸಿಲ್ಲ. ಇತರ ದೇಶಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಅಫ್ಘಾನಿಸ್ತಾನದ ನೆಲವನ್ನು ಅನುಮತಿಸಬಾರದು ಭಾರತದ ಒತ್ತಾಯಿಸುತ್ತಿದೆ. ಮತ್ತೊಂದೆಡೆ, ನಮ್ಮ ದೇಶವು ಕಳೆದ ಕೆಲವು ತಿಂಗಳುಗಳಲ್ಲಿ ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವು ನೀಡುತ್ತಿದೆ.
ಸುಪ್ರೀಂ ಲೀಡರ್ಸ್ ಅಶ್ಯೂರೆನ್ಸ್ ತಾಲಿಬಾನ್ ಸುಪ್ರೀಮ್ ಲೀಡರ್ ಹೆಬತುಲ್ಲಾ ಅಖುಂದ್ಜಾದಾ ಕಳೆದ ತಿಂಗಳು ಇತರ ದೇಶಗಳ ಮೇಲೆ ಭಯೋತ್ಪಾದಕ ದಾಳಿಗಳನ್ನು ನಡೆಸಲು ತಮ್ಮ ನೆಲವನ್ನು ಬಳಸಲು ಅನುಮತಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.