ಅಗ್ನಿಪಥ್ ಯೋಜನೆ ವಿರೋಧಿಸಿ ಬಿಹಾರದಲ್ಲಿ ಭಾರಿ ಪ್ರತಿಭಟನೆ…
ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರೋಧಿಸಿ ಬಿಹಾರದಲ್ಲಿ ಉಗ್ರ ಪ್ರತಿಭಟನೆ ನಡೆಯುತ್ತಿದೆ. 17 ಜಿಲ್ಲೆಗಳಲ್ಲಿ ಯುವಕರು ರಸ್ತೆಗಿಳಿದಿದ್ದಾರೆ. ಪ್ರತಿಭಟನಾಕಾರರು ಛಪ್ರಾ, ಕೈಮೂರ್ ಮತ್ತು ಗೋಪಾಲ್ಗಂಜ್ನಲ್ಲಿ 5 ರೈಲುಗಳಿಗೆ ಬೆಂಕಿ ಹಚ್ಚಿದ್ದಾರೆ. 12 ರೈಲುಗಳು ಪ್ರತಿಭಟನಾಕಾರರ ಆಕ್ರೋಶಕ್ಕೆ ಧ್ವಂಸಗೊಂಡಿವೆ. ಛಾಪ್ರಾ ಒಂದರಲ್ಲೇ 3 ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ. ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
#WATCH | Bihar: Armed forces aspirants protest in Munger against #AgnipathRecruitmentScheme
A protester says "We demand that the recruitment be done as it used to be done earlier,Tour of Duty (ToD) be rolled back & exams be held as earlier. Nobody will go to Army just for 4 yrs" pic.twitter.com/b5dnSUYohW
— ANI (@ANI) June 16, 2022
ಅರಾಹ್ನಲ್ಲಿ, ದುಷ್ಕರ್ಮಿಗಳನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್ಗಳನ್ನು ಬಳಸಬೇಕಾಯಿತು. ಮೋತಿಹಾರಿಯಲ್ಲೂ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ. ಪ್ರತಿಭಟನೆಯಿಂದಾಗಿ ಬೆಳಗ್ಗೆ 6.25ರ ನಂತರ ರೈಲು ಸಂಚಾರ ಸ್ಥಗಿತಗೊಂಡಿತು. ಸುಮಾರು ಒಂಬತ್ತು ಗಂಟೆಗಳ ಕಾಲ ರೈಲುಗಳು ಸ್ಥಗಿತಗೊಂಡವು. ಮಧ್ಯಾಹ್ನ 3.30ರ ನಂತರ ಎಲ್ಲ ಮಾರ್ಗಗಳನ್ನು ತೆರವುಗೊಳಿಸಿದ ಬಳಿಕ ರೈಲು ಸಂಚಾರ ಆರಂಭಿಸಲಾಯಿತು.
#WATCH | Bihar: Armed forces aspirants protest at Bhabua Road railway station, block tracks & set a train ablaze over #AgnipathRecruitmentScheme
They say, "We prepared for long&now they've brought ToD (Tour of Duty) as a 4-yr job.Don't want that but the old recruitment process" pic.twitter.com/TmhfnhHiVg
— ANI (@ANI) June 16, 2022
ಪ್ರತಿಭಟನೆ ವೇಳೆ ಇಬ್ಬರು ಬಿಜೆಪಿ ಶಾಸಕರ ಮೇಲೂ ಹಲ್ಲೆ ನಡೆದಿದೆ. ಪ್ರತಿಭಟನಾಕಾರರು ಛಾಪ್ರಾ ಸದರ್ನ ಬಿಜೆಪಿ ಶಾಸಕ ಡಾ. ಸಿ.ಎನ್.ಗುಪ್ತಾ ಅವರ ಮನೆಯನ್ನು ಧ್ವಂಸಗೊಳಿಸಿದರು. ಅದೇ ಸಮಯದಲ್ಲಿ ವಾರಿಸ್ಲಿಗಂಜ್ ಶಾಸಕಿ ಅರುಣಾ ದೇವಿ ಅವರ ಮೇಲೂ ಹಲ್ಲೆ ನಡೆದಿದೆ. ನಾವಡದಲ್ಲಿರುವ ಬಿಜೆಪಿ ಕಚೇರಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಆಕ್ರೋಶಗೊಂಡ ಯುವಕರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಗುರುವಾರ, ಜೆಹಾನಾಬಾದ್, ಬಕ್ಸರ್ ಮತ್ತು ನಾವಡಾದಲ್ಲಿ ರೈಲುಗಳನ್ನು ನಿಲ್ಲಿಸಲಾಯಿತು. ಛಾಪ್ರಾ ಮತ್ತು ಮುಂಗೇರ್ನಲ್ಲಿ ರಸ್ತೆಗೆ ಬೆಂಕಿ ಹಚ್ಚಿದ ನಂತರ ಉಗ್ರ ಪ್ರತಿಭಟನೆ ನಡೆಯಿತು. ಸರಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.








